newsics.com
ನವದೆಹಲಿ: ಮುಂಬರುವ ಕೇಂದ್ರ ಬಜೆಟ್ ನಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಹೆಚ್ಚಿನ ಹಣ ಹಂಚಿಕೆ ಆಗಬಹುದು ಎನ್ನಲಾಗುತ್ತಿದೆ.
ವರದಿಗಳ ಪ್ರಕಾರ, ಶೇ. 30ರಷ್ಟು ಹೆಚ್ಚು ಅಲೋಕೇಶನ್ ಆಗಬಹುದು. ಮಧ್ಯಂತರ ಬಜೆಟ್ನಲ್ಲಿ ಈ ಯೋಜನೆಗೆ 60,000 ರೂ ಹಣ ಘೋಷಿಸಲಾಗಿತ್ತು. ಅದನ್ನು 80,000 ಕೋಟಿ ರೂ.ಗೆ ಹೆಚ್ಚಿಸಬಹುದು ಎನ್ನಲಾಗುತ್ತಿದೆ.
ದೇಶದ ರೈತರಿಗೆ ಮೀಸಲಾದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೀಡಲಾಗುವ ಹಣವನ್ನು ಹೆಚ್ಚಿಸುವ ಕುರಿತು ಸಾಧ್ಯತೆ ದಟ್ಟವಾಗಿದೆ. 2024-25ರ ಬಜೆಟ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಾರ್ಷಿಕ ₹ 2,000 ರಷ್ಟು ಸಹಾಯವನ್ನು ಹೆಚ್ಚಿಸುವ ಸಾಧ್ಯತೆಯಿದೆ.
ಈ ಹೆಚ್ಚಳ ಘೋಷಣೆಯಾದಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಪ್ರಯೋಜನ ಪಡೆಯುವ ಪ್ರತಿ ಕುಟುಂಬಕ್ಕೆ ₹ 8,000 ರೂ. ದೊರೆಯಲಿದೆ. ಈವರೆಗೆ ಈ ಯೋಜನೆಯಡಿ ರೈತರಿಗೆ ಮೂರು ಕಂತುಗಳ ಮೂಲಕ ವಾರ್ಷಿಕ ₹ 6,000 ಆರ್ಥಿಕ ನೆರವು ನೀಡಲಾಗುತ್ತಿತ್ತು. ಮಧ್ಯಂತರ ಬಜೆಟ್ನ ₹ 60,000 ಕೋಟಿ ಹಂಚಿಕೆಯಿಂದ ಬೊಕ್ಕಸಕ್ಕೆ ಹೆಚ್ಚುವರಿ ₹ 20,000 ಕೋಟಿ ವೆಚ್ಚವಾಗುವ ನಿರೀಕ್ಷೆಯಿದೆ.
ಕೃಷಿ ಮುಖಂಡರು, ಹಣಕಾಸು ಸಚಿವರೊಂದಿಗೆ ತಮ್ಮ ಬಜೆಟ್ ಪೂರ್ವ ಸಭೆಯಲ್ಲಿ ಕಂತು ಮೊತ್ತವನ್ನು ₹ 6,000 ರಿಂದ ವರ್ಷಕ್ಕೆ ₹ 8,000 ಕ್ಕೆ ಹೆಚ್ಚಿಸುವಂತೆ ಒತ್ತಾಯಿಸಿದರು ಎಂದು ಮೂಲಗಳು ತಿಳಿಸಿವೆ.
ಪ್ಯಾನ್ ಇಂಡಿಯಾ ಅಂದ್ರೆ ದಾಡಿ ಬಾಡಿ ಬೆಳೆಯತ್ತೆ ಅಷ್ಟೇ; ಯಶ್, ರಿಷಬ್ಗೆ ಹಂಸಲೇಖ ಪರೋಕ್ಷ ಟಾಂಗ್