newsics.com/ನ್ಯೂಸಿಕ್ಸ್
ನಟ ದರ್ಶನ್ ರಾಜಕೀಯಕ್ಕೆ ಬರಬೇಕೆಂಬುದು ಅಭಿಮಾನಿಗಳ ಆಸೆಯಾಗಿದ್ದು, ತಮಿಳುನಾಡಿನ ನಟ ವಿಜಯ್ರಂತೆ ಕರ್ನಾಟಕದಲ್ಲೂ ನಟನೊಬ್ಬ ಸಿಎಂ ಆಗಬೇಕೆಂದು ಬಯಸಿದ್ದಾರೆ. ಇದರ ನಡುವೆ, ಪವಿತ್ರಾ ಗೌಡರ ವಕೀಲ ಬಾಲನ್, ‘ದರ್ಶನ್ ಸಿಎಂ ಆದರೆ ನಾನು ಡಿಸಿಎಂ’ ಎಂದು ರಾಜಕೀಯ ಉಚಿತ ಕೊಡುಗೆಗಳನ್ನು ವ್ಯಂಗ್ಯವಾಡಿದ್ದಾರೆ.
ಸದ್ಯ ದರ್ಶನ್ ಅವರು ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಇನ್ನೊಂದು ವರ್ಷ ಜೈಲಿನಲ್ಲಿಯೇ ಇರಬೇಕಿದೆ. ಅವರ ಅಭಿಮಾನಿಗಳು ಅವರು ಹೊರಗೆ ಬರುವುದನ್ನೇ ಕಾಯುತ್ತಿದ್ದಾರೆ. ಇದಾಗಲೇ ಹೊರಗೆ ಬಂದ ಮೇಲೆ ದರ್ಶನ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ. ಇದರ ನಡುವೆಯೇ, ತಮಿಳುನಾಡಿನಲ್ಲಿ ನಟ ಜೋಸೆಫ್ ವಿಜಯ್ ಅವರಂತೆಯೇ ಕರ್ನಾಟಕದಲ್ಲಿಯೂ ನಟನೊಬ್ಬ ಸಿಎಂ ಆಗಬೇಕು ಎನ್ನುವುದು ದರ್ಶನ್ ಫ್ಯಾನ್ಸ್ ಆಸೆ. ದಳಪತಿ ವಿಜಯ್ ಅವರು ಚುನಾವಣೆಗೂ ಮುನ್ನ ಮಾಡಿರುವ ಘೋಷಣೆಗಳು ಗೊತ್ತಿದ್ದದ್ದೇ. ಅದಕ್ಕೆ ಅವರು 140 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಬೇಕಿದೆ. ಜನರ ದುಡ್ಡನ್ನು ಮುಟ್ಟುವುದಿಲ್ಲ ಎಂದಿರುವ 700 ಕೋಟಿ ರೂಪಾಯಿಗಳ ಒಡೆದ ವಿಜಯ್. 140 ಸಾವಿರ ಕೋಟಿ ಫ್ರೀಬೀಸ್ ಎಲ್ಲಿಂದ ಕೊಡುತ್ತಾರೆ ಎನ್ನುವುದನ್ನು ಜನರು ಕಾತರದಿಂದ ಕಾಯುತ್ತಿದ್ದಾರೆ.
ಇದರ ನಡುವೆಯೇ ಸಂದರ್ಶನವೊಂದರಲ್ಲಿ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೊತೆ ಜೈಲಿನಲ್ಲಿ ಇರುವ ನಟಿ ಪವಿತ್ರ ಗೌಡ (Pavitra Gowda) ಅವರ ಲಾಯರ್ ಬಾಲನ್ ಅವರು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನ ಇದೀಗ ವೈರಲ್ ಆಗುತ್ತಿದೆ. ಹೇಗೆ ಫ್ರೀಬೀಸ್ ಹೇಳಿ ಜನರನ್ನು ಮರುಳು ಮಾಡಲಾಗುತ್ತಿದೆ ಎನ್ನುವ ಬಗ್ಗೆ ಅವರು ಹೀಗೆ ಟಾಂಗ್ ಕೊಟ್ಟಿದ್ದಾರೆ.
ದರ್ಶನ್ ಅವರು ಸಿಎಂ ಆಗಿ ನಾನು ಡಿಸಿಎಂ ಆಗಬೇಕು. ಸದ್ಯ ನನ್ನ ಬಳಿ ಲೋಕಲ್ ಕಾರು ಇದೆ. ಆದ್ರೆ ರೋಲ್ಸ್ ರಾಯ್ ಕಾರು ತೆಗೆದುಕೊಳ್ಳುವ ಆಸೆ ಇದೆ. ಒಂದು ಕೋಟಿ ರೂಪಾಯಿ ಮನೆ ಇದೆ. ಆದ್ರೆ 120 ಕೋಟಿ ರೂಪಾಯಿ ಮನೆ ಕಟ್ಟಿಸುವ ಆಸೆ ಇದೆ. ಕ್ಯಾರಾವಾನ್ ಹತ್ತಿ ಭಾಷಣ ಮಾಡುವ ಆಸೆ ಇದೆ ಎಂದು ಮೊದಲಿಗೆ ಬಾಲನ್ ಅವರು ಹೇಳಿದ್ದಾರೆ.
ನಾನು ಗರ್ಲ್ಫ್ರೆಂಡ್ ಕರೆದುಕೊಂಡು, ಇನ್ನೊಂದು ಗರ್ಲ್ಫ್ರೆಂಡ್ ಮದುವೆಗೆ ಹೋಗುವ ಆಸೆ ಇದೆ. ಎಲ್ಲರಿಗೂ ಸುಳ್ಳು ಹೇಳಿ ಮಹಿಳೆಯರಿಗೆ ಎಂಟು ಗ್ರಾಂ ಚಿನ್ನ, ಮದುವೆಗೆ ಎರಡು ಲಕ್ಷ ರೂಪಾಯಿ ಕೊಡ್ತೇನೆ. ಬಸ್ಸು ಮಾತ್ರವಲ್ಲ, ರೈಲು, ವಿಮಾನ ಎಲ್ಲವೂ ಫ್ರೀ ಫ್ರೀ ಎಂದಿದ್ದಾರೆ ಲಾಯರ್ ಬಾಲನ್
ರೈಲಿನಿಂದ ಹಿಡಿದು ಜೈಲಿನವರೆಗೂ ಫ್ರೀ. ನಾನು ದರ್ಶನ್ ಫ್ಯಾನ್. ನನಗೆ ಬೇಕು ವೆರೈಟಿ ವೆರೈಟಿ ಫ್ಯಾನ್ಸ್, ಅದ್ಕೇ ಜನರಿಗೆ ಕೊಡ್ತೇನೆ ಲೋನ್ ಎಂದೆಲ್ಲಾ ಹೇಳಿರುವ ವಿಡಿಯೋ ವೈರಲ್ ಆಗುತ್ತಿದೆ.