newsics.com/ನ್ಯೂಸಿಕ್ಸ್
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದನಾ ಕಾರ್ಯಾಚರಣೆಗಳನ್ನು ಮಟ್ಟಹಾಕಲು ಭಾರತವು ಹಮ್ಮಿಕೊಂಡಿದ್ದ ಮಿಲಿಟರಿ ಕ್ರಮ ‘ಆಪರೇಷನ್ ಸಿಂದೂರ್’ ಇಂದಿಗೆ (ಮೇ 7, 2026) ಯಶಸ್ವಿಯಾಗಿ ಒಂದು ವರ್ಷ ಪೂರೈಸಿದೆ.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೈನಿಕರ ಧೈರ್ಯ ಮತ್ತು ಸಾಹಸವನ್ನು ಕೊಂಡಾಡಿದ್ದಾರೆ. “ಆಪರೇಷನ್ ಸಿಂಧೂರ್ನಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಸೈನಿಕನಿಗೆ ಈ ದೇಶ ಸದಾ ಋಣಿಯಾಗಿರುತ್ತದೆ. ಅತ್ಯಂತ ಕಠಿಣ ಭೌಗೋಳಿಕ ಪರಿಸ್ಥಿತಿಗಳಲ್ಲಿ, ಅಚಲವಾದ ಸಂಕಲ್ಪದೊಂದಿಗೆ ಶತ್ರುಗಳನ್ನು ಬೇಟೆಯಾಡಿದ ನಮ್ಮ ಪಡೆಗಳ ಪರಾಕ್ರಮ ಅನನ್ಯವಾದುದು,” ಎಂದು ಅವರು ಬಣ್ಣಿಸಿದ್ದಾರೆ. ಈ ಕಾರ್ಯಾಚರಣೆಯು ಕೇವಲ ಮಿಲಿಟರಿ ಶಕ್ತಿಯ ಪ್ರದರ್ಶನವಷ್ಟೇ ಅಲ್ಲದೆ, ದೇಶದ ಜನರಲ್ಲಿ ಸುರಕ್ಷತೆಯ ಭಾವನೆಯನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.
ಈ ಐತಿಹಾಸಿಕ ದಿನದ ನೆನಪಿಗಾಗಿ ಪ್ರಧಾನಿ ಮೋದಿ ಅವರು ತಮ್ಮ X (ಟ್ವಿಟ್ಟರ್) ಪ್ರೊಫೈಲ್ ಚಿತ್ರವನ್ನು (DP) ‘ಆಪರೇಷನ್ ಸಿಂಧೂರ್’ ಲಾಂಛನಕ್ಕೆ ಬದಲಾಯಿಸಿರುವುದು ವಿಶೇಷ.
ಅತ್ತ ಭಾರತೀಯ ವಾಯುಪಡೆಯು ಬಿಡುಗಡೆ ಮಾಡಿರುವ ಹೊಸ ವಿಡಿಯೋ ಈಗ ಇಂಟರ್ನೆಟ್ನಲ್ಲಿ ಸಂಚಲನ ಮೂಡಿಸುತ್ತಿದೆ. “ಭಾರತ ಯಾವುದನ್ನೂ ಕ್ಷಮಿಸುವುದಿಲ್ಲ” ಎಂಬ ಟ್ಯಾಗ್ಲೈನ್ ಹೊಂದಿರುವ ಈ ವಿಡಿಯೋದಲ್ಲಿ, ನಮ್ಮ ಪಡೆಗಳು ಉಗ್ರಗಾಮಿ ಶಿಬಿರಗಳನ್ನು ಹೇಗೆ ನಾಮಾವಶೇಷ ಮಾಡಿದವು ಎಂಬ ದೃಶ್ಯಗಳನ್ನು ರೋಮಾಂಚನಕಾರಿಯಾಗಿ ತೋರಿಸಲಾಗಿದೆ.