ತನ್ನ ವಿವಾಹೇತರ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆಂದು ಭಾವಿಸಿ, ತಾಳಿಕಟ್ಟಿದ ಪತಿಯನ್ನೇ ಕೊಲೆ ಮಾಡಲು ಹಂತಕರನ್ನು ನೇಮಿಸಿಕೊಂಡ ಆಘಾತಕಾರಿ ಘಟನೆ ಆಂಧ್ರ ಪ್ರದೇಶದ ಪ್ರೊದಟ್ಟೂರಿನಲ್ಲಿ ಬೆಳಕಿಗೆ ಬಂದಿದೆ.
ಪೊಲೀಸ್ ಮಾಹಿತಿಯ ಪ್ರಕಾರ, ಪ್ರೊದ್ದಟೂರು ಮಂಡಲದ ಲಿಂಗಾಪುರಂ ಗ್ರಾಮದ ರೈತನೊಬ್ಬ ಕೆಲವು ವರ್ಷಗಳ ಹಿಂದೆ ಪ್ರೊದ್ದಟೂರು ಮೂಲದ ಮಹಿಳೆಯನ್ನು ವಿವಾಹವಾದರು.
ದಂಪತಿಗೆ ಮೂವರು ಮಕ್ಕಳಿದ್ದಾರೆ. ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಹೀಗಿರುವಾಗ, ಐದು ತಿಂಗಳ ಹಿಂದಷ್ಟೇ ಪತ್ನಿ, ಚಿಕಿತ್ಸೆಗಾಗಿ ಪ್ರೊದ್ದಟೂರಿನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಹೋಗಿದ್ದರು. ಈ ವೇಳೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಉದ್ಯೋಗಿಯನ್ನು ಭೇಟಿಯಾದರು. ಈ ಭೇಟಿ ಪರಿಚಯವಾಗಿ, ದಿನಗಳು ಕಳೆದಂತೆ ಅನೈತಿಕ ಸಂಬಂಧವೂ ಬೆಳೆಯಿತು.
ಪತ್ನಿ ಮತ್ತು ಆಕೆಯ ಗೆಳೆಯ, ತಮ್ಮ ವಿವಾಹೇತರ ಸಂಬಂಧಕ್ಕೆ ಪತಿ ಅಡ್ಡಿಯಾಗುತ್ತಿದ್ದಾನೆ ಎಂದು ಭಾವಿಸಿ, ಹೇಗಾದರೂ ಮಾಡಿ ಗಂಡನನ್ನು ಕೊಲ್ಲಬೇಕೆಂದರು ಪ್ಲಾನ್ ಮಾಡಿದರು. ತನಗೆ ಕೆಲವು ರೌಡಿಗಳ ಪರಿಚಯವಿದೆ ಮತ್ತು ಅವರಿಗೆ ಸ್ವಲ್ಪ ಹಣ ನೀಡಿದರೆ ಕೆಲಸ ಮುಗಿಸುತ್ತಾರೆ ಎಂದು ಆಕೆಯ ಗೆಳೆಯ ಹೇಳಿದ್ದ. ಇದನ್ನು ಕೇಳಿದ ಮಹಿಳೆ, ತನ್ನ ಗೆಳಯನಿಗೆ ದೊಡ್ಡ ಮೊತ್ತದ ಚಿನ್ನ ಮತ್ತು ಹಣವನ್ನು ಕೊಟ್ಟು, ಗಂಡನನ್ನು ಮುಗಿಸಲು ಹೇಳಿದಳು.
ಇದಾದ ಬಳಿಕ ಆಕೆಯ ಗೆಳೆಯ, ರಾಜುಪಾಲಂನಲ್ಲಿರುವ ರೌಡಿಶೀಟರ್ ಒಬ್ಬನನ್ನು ಸಂಪರ್ಕಿಸಿದನು. ಲಿಂಗಾಪುರದ ವ್ಯಕ್ತಿಯನ್ನು ಕೊಂದರೆ 10 ಲಕ್ಷ ರೂ. ನೀಡುವುದಾಗಿ ಹೇಳಿದನು. ಅಲ್ಲದೆ, ಮುಂಗಡವಾಗಿ ಸ್ವಲ್ಪ ಹಣ ನೀಡಿ, ಹೇಗಾದರೂ ಆ ವ್ಯಕ್ತಿಯನ್ನು ಕೊಲ್ಲಬೇಕೆಂದು ಹೇಳಿದನು. ಹಣ ಪಡೆದ ರೌಡಿಶೀಟರ್, ಪ್ರೊದ್ದಟ್ಟೂರಿನ ಹಳೆಯ ಬಸ್ ನಿಲ್ದಾಣದ ಬಳಿ ಹೋಗಿ ತನ್ನ ಪರಿಚಿತ ರೌಡಿಶೀಟರ್ಗಳಿಗೆ ಏನಾಯಿತು ಎಂದು ವಿವರಿಸಿದನು. ಅಲ್ಲದೆ, ಅವರಿಗೂ ಸ್ವಲ್ಪ ಹಣ ನೀಡಿದನು. ಇದಾದ ನಂತರ, ಆತ ಹಿಂದೂಪುರದ ಪ್ರಮುಖ ಬಾಡಿಗೆ ಗ್ಯಾಂಗ್ ಅನ್ನು ಪ್ರೊದ್ದಟ್ಟೂರಿಗೆ ಕರೆಸಿದನು.
ಬುಧವಾರ ಸಂಜೆ ಹಿಂದೂಪುರದ ಸುಫಾರಿ ಗ್ಯಾಂಗ್ ಲಿಂಗಪುರಂ ನಿವಾಸಿಯನ್ನು ಕೊಲ್ಲಲು ಪ್ರೊದ್ದಟ್ಟೂರಿಗೆ ಬಂದಿಳಿದಿತ್ತು. ನಿನ್ನೆ ರಾತ್ರಿ ಅಥವಾ ಗುರುವಾರ ಬೆಳಗ್ಗೆ ಆತನನ್ನು ಕೊಲ್ಲಲು ಯೋಜಿಸಿದ್ದರು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಾಗ, ತಕ್ಷಣ ಎಚ್ಚೆತ್ತುಕೊಂಡರು. ಬಳಿಕ ವಿಶೇಷ ತಂಡಗಳನ್ನು ರಚಿಸಿ, ಏಕಕಾಲದಲ್ಲಿ ದಾಳಿ ಮಾಡಿ, ಹಿಂದೂಪುರಂ ಗ್ಯಾಂಗ್, ರಾಜುಪಾಲಂ ರೌಡಿ ಶೀಟರ್, ಲಿಂಗಪುರಂ ಗ್ರಾಮದ ಮಹಿಳೆ ಮತ್ತು ಆಕೆ ಗೆಳೆಯನನ್ನು ಬಂಧಿಸಿದರು. ಸದ್ಯ ಈ ಪ್ರಕರಣ ಸಂಬಂಧ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
CET ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿಯರ ಮೂಗಿಗೆ ಗಮ್ ಅಂಟಿಸಿದ ಭದ್ರತಾ ಸಿಬ್ಬಂದಿ