Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಗಂಡನನ್ನು ಕೊಲ್ಲಲು 10 ಲಕ್ಷ ಸುಪಾರಿ ಕೊಟ್ಟ ಪತ್ನಿ; ನಡೆದಿದ್ದೇನು?
ಪ್ರಮುಖ

ಗಂಡನನ್ನು ಕೊಲ್ಲಲು 10 ಲಕ್ಷ ಸುಪಾರಿ ಕೊಟ್ಟ ಪತ್ನಿ; ನಡೆದಿದ್ದೇನು?

Share
2 Min Read
SHARE

ತನ್ನ ವಿವಾಹೇತರ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆಂದು ಭಾವಿಸಿ, ತಾಳಿಕಟ್ಟಿದ ಪತಿಯನ್ನೇ ಕೊಲೆ ಮಾಡಲು ಹಂತಕರನ್ನು ನೇಮಿಸಿಕೊಂಡ ಆಘಾತಕಾರಿ ಘಟನೆ ಆಂಧ್ರ ಪ್ರದೇಶದ ಪ್ರೊದಟ್ಟೂರಿನಲ್ಲಿ ಬೆಳಕಿಗೆ ಬಂದಿದೆ.

ಪೊಲೀಸ್​ ಮಾಹಿತಿಯ ಪ್ರಕಾರ, ಪ್ರೊದ್ದಟೂರು ಮಂಡಲದ ಲಿಂಗಾಪುರಂ ಗ್ರಾಮದ ರೈತನೊಬ್ಬ ಕೆಲವು ವರ್ಷಗಳ ಹಿಂದೆ ಪ್ರೊದ್ದಟೂರು ಮೂಲದ ಮಹಿಳೆಯನ್ನು ವಿವಾಹವಾದರು.

ದಂಪತಿಗೆ ಮೂವರು ಮಕ್ಕಳಿದ್ದಾರೆ. ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಹೀಗಿರುವಾಗ, ಐದು ತಿಂಗಳ ಹಿಂದಷ್ಟೇ ಪತ್ನಿ, ಚಿಕಿತ್ಸೆಗಾಗಿ ಪ್ರೊದ್ದಟೂರಿನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಹೋಗಿದ್ದರು. ಈ ವೇಳೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಉದ್ಯೋಗಿಯನ್ನು ಭೇಟಿಯಾದರು. ಈ ಭೇಟಿ ಪರಿಚಯವಾಗಿ, ದಿನಗಳು ಕಳೆದಂತೆ ಅನೈತಿಕ ಸಂಬಂಧವೂ ಬೆಳೆಯಿತು.
ಪತ್ನಿ ಮತ್ತು ಆಕೆಯ ಗೆಳೆಯ, ತಮ್ಮ ವಿವಾಹೇತರ ಸಂಬಂಧಕ್ಕೆ ಪತಿ ಅಡ್ಡಿಯಾಗುತ್ತಿದ್ದಾನೆ ಎಂದು ಭಾವಿಸಿ, ಹೇಗಾದರೂ ಮಾಡಿ ಗಂಡನನ್ನು ಕೊಲ್ಲಬೇಕೆಂದರು ಪ್ಲಾನ್​ ಮಾಡಿದರು. ತನಗೆ ಕೆಲವು ರೌಡಿಗಳ ಪರಿಚಯವಿದೆ ಮತ್ತು ಅವರಿಗೆ ಸ್ವಲ್ಪ ಹಣ ನೀಡಿದರೆ ಕೆಲಸ ಮುಗಿಸುತ್ತಾರೆ ಎಂದು ಆಕೆಯ ಗೆಳೆಯ ಹೇಳಿದ್ದ. ಇದನ್ನು ಕೇಳಿದ ಮಹಿಳೆ, ತನ್ನ ಗೆಳಯನಿಗೆ ದೊಡ್ಡ ಮೊತ್ತದ ಚಿನ್ನ ಮತ್ತು ಹಣವನ್ನು ಕೊಟ್ಟು, ಗಂಡನನ್ನು ಮುಗಿಸಲು ಹೇಳಿದಳು.
ಇದಾದ ಬಳಿಕ ಆಕೆಯ ಗೆಳೆಯ, ರಾಜುಪಾಲಂನಲ್ಲಿರುವ ರೌಡಿಶೀಟರ್ ಒಬ್ಬನನ್ನು ಸಂಪರ್ಕಿಸಿದನು. ಲಿಂಗಾಪುರದ ವ್ಯಕ್ತಿಯನ್ನು ಕೊಂದರೆ 10 ಲಕ್ಷ ರೂ. ನೀಡುವುದಾಗಿ ಹೇಳಿದನು. ಅಲ್ಲದೆ, ಮುಂಗಡವಾಗಿ ಸ್ವಲ್ಪ ಹಣ ನೀಡಿ, ಹೇಗಾದರೂ ಆ ವ್ಯಕ್ತಿಯನ್ನು ಕೊಲ್ಲಬೇಕೆಂದು ಹೇಳಿದನು. ಹಣ ಪಡೆದ ರೌಡಿಶೀಟರ್, ಪ್ರೊದ್ದಟ್ಟೂರಿನ ಹಳೆಯ ಬಸ್ ನಿಲ್ದಾಣದ ಬಳಿ ಹೋಗಿ ತನ್ನ ಪರಿಚಿತ ರೌಡಿಶೀಟರ್​ಗಳಿಗೆ ಏನಾಯಿತು ಎಂದು ವಿವರಿಸಿದನು. ಅಲ್ಲದೆ, ಅವರಿಗೂ ಸ್ವಲ್ಪ ಹಣ ನೀಡಿದನು. ಇದಾದ ನಂತರ, ಆತ ಹಿಂದೂಪುರದ ಪ್ರಮುಖ ಬಾಡಿಗೆ ಗ್ಯಾಂಗ್ ಅನ್ನು ಪ್ರೊದ್ದಟ್ಟೂರಿಗೆ ಕರೆಸಿದನು.

ಬುಧವಾರ ಸಂಜೆ ಹಿಂದೂಪುರದ ಸುಫಾರಿ ಗ್ಯಾಂಗ್ ಲಿಂಗಪುರಂ ನಿವಾಸಿಯನ್ನು ಕೊಲ್ಲಲು ಪ್ರೊದ್ದಟ್ಟೂರಿಗೆ ಬಂದಿಳಿದಿತ್ತು. ನಿನ್ನೆ ರಾತ್ರಿ ಅಥವಾ ಗುರುವಾರ ಬೆಳಗ್ಗೆ ಆತನನ್ನು ಕೊಲ್ಲಲು ಯೋಜಿಸಿದ್ದರು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಾಗ, ತಕ್ಷಣ ಎಚ್ಚೆತ್ತುಕೊಂಡರು. ಬಳಿಕ ವಿಶೇಷ ತಂಡಗಳನ್ನು ರಚಿಸಿ, ಏಕಕಾಲದಲ್ಲಿ ದಾಳಿ ಮಾಡಿ, ಹಿಂದೂಪುರಂ ಗ್ಯಾಂಗ್, ರಾಜುಪಾಲಂ ರೌಡಿ ಶೀಟರ್, ಲಿಂಗಪುರಂ ಗ್ರಾಮದ ಮಹಿಳೆ ಮತ್ತು ಆಕೆ ಗೆಳೆಯನನ್ನು ಬಂಧಿಸಿದರು. ಸದ್ಯ ಈ ಪ್ರಕರಣ ಸಂಬಂಧ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

CET ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿಯರ ಮೂಗಿಗೆ ಗಮ್ ಅಂಟಿಸಿದ ಭದ್ರತಾ ಸಿಬ್ಬಂದಿ

TAGGED:Wife gave 10 lakh betel leaves to kill husband; what happened next?
Share This Article
Facebook Twitter Copy Link Print
Previous Article Bikaji Foods Founder no more ಚಿಕಿತ್ಸೆ ವೇಳೆಯೇ ಬಿಕಾಜಿ ಫುಡ್ಸ್ ಸಂಸ್ಥಾಪಕ, ಎಂಡಿ ಶಿವ ರತನ್ ಅಗರ್‌ವಾಲ್ ನಿಧನ
Next Article ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಭಾರತೀಯರ ವಿಡಿಯೋ ವೈರಲ್!

Popular Posts

ನಿರ್ಮಾಣ ಹಂತದ ಫ್ಲೈಓವರ್ ಮುರಿದುಬಿದ್ದ ದೈತ್ಯ ಕ್ರೇನ್ : ಮೂವರು ಸಾವು

1 Min Read

Relationship ಒಬ್ಬ ವ್ಯಕ್ತಿಗೆ ಎಷ್ಟು ಸಲ ರಿಯಲ್ ಲವ್ ಆಗುತ್ತೆ?ಅಧ್ಯಯನ ಹೇಳಿದ ಅಚ್ಚರಿಯ ಸತ್ಯ ಇಲ್ಲಿದೆ

2 Min Read

Bigg Boss ಮಲ್ಲಮ್ಮನ ಮನೆಗೆ ಬಂತು ಹೊಸ ಕಾರ್​

1 Min Read

ಸಿಎಂ ಡಿಕೆ ಶಿವಕುಮಾರ್ ತಲೆನೋವಾದ ಖಾತೆ ಕ್ಯಾತೆ : ರಾಜೀನಾಮೆ ಕೊಟ್ಟೇ ಸಿದ್ದ ಎಂದ ರಾಮಲಿಂಗಾರೆಡ್ಡಿ

1 Min Read

You Might Also Like

ಕರ್ನಾಟಕಪ್ರಮುಖ

ಡಿಕೆ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ?

1 Min Read
ಕರ್ನಾಟಕಪ್ರಮುಖ

U.T. Khader ಸರ್ಕಾರಿ ಆಸ್ಪತ್ರೆಗೆ ಯು.ಟಿ ಖಾದರ್​ ಭೇಟಿ : ನೆಲದ ಮೇಲೆ ಕೂತ ಗರ್ಭಿಣಿ ಕಂಡು ಗರಂ

1 Min Read
ಕರ್ನಾಟಕಪ್ರಮುಖ

DK Shivakumar ಸಾರ್ವಜನಿಕರ ದೂರು ಆಲಿಸಲು ಪ್ರತ್ಯೇಕ ಸಚಿವಾಲಯ ಆರಂಭ : ದೇಶದಲ್ಲೇ ಮೊದಲು!

1 Min Read
ದೇಶಪ್ರಮುಖ

ಟಿಸಿಎಸ್‌ ಬಳಿಕ ವಿಪ್ರೋದಲ್ಲಿ ಮತಾಂತರ ಜಾಲ? ಮಾಜಿ ಉದ್ಯೋಗಿ ಹೇಳಿದ ಶಾಕಿಂಗ್‌ ರಹಸ್ಯವೇನು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?