newsics.com
ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ (Second PUC Exam) ಫೇಲ್ ಆದ ವಿಚಾರ ಗೊತ್ತಾದ ತಕ್ಷಣ 17 ವರ್ಷದ ತನುಶ್ರೀ ಶವ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ನಗರದ ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯ ಮನೋರಾಯನಪಾಳ್ಯದಲ್ಲಿ ಈ ಘಟನೆ ನಡೆದಿದೆ.
ಆದರೆ, ಫೇಲ್ ಆಗಿದ್ದಕ್ಕೆಲ್ಲಾ ಸಾಯುವ ಹುಡುಗಿ ಅಲ್ಲ ಎಂದು ಕುಟುಂಬಸ್ಥರು ಹೇಳಿದ್ದು, ಈಕೆಯ ಸಾವಿನ ಸುತ್ತ ಅನುಮಾನ ಮೂಡಿದೆ.
ತನ್ನ ಅನೈತಿಕ ಸಂಬಂಧಕ್ಕೆ (Illigal Relationship) ಅಡ್ಡಿಯಾಗಿದ್ದ ಮಗಳ ಸಾವಿನ ಹಿಂದೆ ತಾಯಿಯ ಕೈವಾಡವಿದೆ ಎಂದು ತನುಶ್ರೀ ತಂದೆ ಕಡೆಯ ಸಂಬಂಧಿಕರು ಆರೋಪ ಮಾಡ್ತಿದ್ದಾರೆ.
ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಅಪ್ರಾಪ್ತ ಮಗಳನ್ನು ತಾಯಿಯೇ ಕೊಂದಿದ್ದಾಳೆ ಎಂಬ ಆರೋಪ ಜೋರಾಗಿಯೇ ಕೇಳಿಬರುತ್ತಿದೆ. ಪಿಯುಸಿ ರಿಸಲ್ಟ್ ದಿನವೇ ಮಗಳಿಗೆ ಮುಹೂರ್ತವಿಟ್ಟು ಕೊಲೆ ಮಾಡಿದ್ದಾರೆ ಎಂದು ತನುಶ್ರೀ ತಂದೆಯ ಕಡೆಯ ಸಂಬಂಧಿಕರು ಆರೋಪ ಮಾಡಿದ್ದಾರೆ. ಈ ಹಿಂದೆ ತನುಶ್ರೀ ತಂದೆ ಕೂಡ ಹೆಂಡ್ತಿಯ ಅನೈತಿಕ ಸಂಬಂಧ ಗೊತ್ತಾಗಿಯೇ ಸಾವನ್ನಪ್ಪಿದ್ರು ಎನ್ನಲಾಗಿದೆ.
ತಾಯಿಯ ಅನೈತಿಕ ಸಂಬಂಧವನ್ನು 17 ವರ್ಷದ ಮಗಳು ಪ್ರಶ್ನೆ ಮಾಡುತ್ತಿದ್ದಳಂತೆ. ಇದೇ ವಿಚಾರಕ್ಕೆ ಮಗಳ ಜತೆ ತಾಯಿ ಆಶಾ ಆಗಾಗ ಗಲಾಟೆ ಮಾಡ್ತಿದ್ದರು ಎಂದು ತಿಳಿದುಬಂದಿದೆ.
ಕಾಲೇಜು ಫೀಸ್ ಕಟ್ಟದಿದ್ದಕ್ಕೆ ನರ್ಸಿಂಗ್ ವಿದ್ಯಾರ್ಥಿನಿಯಿಂದ 3 ದಿನ ಶೌಚಾಲಯ ತೊಳೆಸಿದ ಸಿಬ್ಬಂದಿ.