Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಬರೋಬ್ಬರಿ 167 ಕೋಟಿಗೆ ಮಾರಾಟವಾಯ್ತು ರಾಜಾ ರವಿವರ್ಮ ಕಲಾಕೃತಿ!
ಕರ್ನಾಟಕದೇಶಪ್ರಮುಖ

ಬರೋಬ್ಬರಿ 167 ಕೋಟಿಗೆ ಮಾರಾಟವಾಯ್ತು ರಾಜಾ ರವಿವರ್ಮ ಕಲಾಕೃತಿ!

Share
1 Min Read
SHARE

https://youtube.com/shorts/G0oN8U59OVY?si=rbIwZ4fR9fKtFNQ-

newsics.com

ರಾಜಾ ರವಿವರ್ಮರ ಅಮೂಲ್ಯ ಕಲಾಕೃತಿಯೊಂದು ಬರೋಬ್ಬರಿ 167.2 ಕೋಟಿ ರೂಪಾಯಿಗೆ ಹರಾಜಾಗಿದ್ಯಂತೆ. ವಿಶ್ವವಿಖ್ಯಾತ ಕಲಾವಿದ ರಾಜಾ ರವಿವರ್ಮರ ಕಲಾಕೃತಿಯೊಂದು ಬರೋಬ್ಬರಿ 167.2 ಕೋಟಿ ರೂಪಾಯಿಗೆ ಮಾರಾಟವಾಗಿ ವಿಶ್ವದಲ್ಲೇ ದಾಖಲೆ ನಿರ್ಮಿಸಿದೆ. ರವಿವರ್ಮ ಅವರು ಬಿಡಿಸಿದ್ದ ಯಶೋಧೆ ಹಾಗೂ ಬಾಲಕೃಷ್ಣರ ಚಿತ್ರ ಇದಾಗಿದೆ. ಯಶೋಧೆ ಹಸುವೊಂದರ ಹಾಲು ಕರೆಯುತ್ತಿದ್ದು, ಹಿಂದಿನಿಂದ ಬಾಲಕೃಷ್ಣ ಆಕೆಯನ್ನು ತಬ್ಬಿ ಬಿಡಿದಿದ್ದಾನೆ. ಆತನ ಕೈಯಲ್ಲಿ ಚಿನ್ನದ ತಟ್ಟೆಯಿದ್ದು, ಹಾಲಿಗಾಗಿ ತಾಯಿ ಬಳಿ ಮನವಿ ಮಾಡುತ್ತಿರುವಂತೆ ಕಾಣಿಸುತ್ತಿದೆ.

ಶ್ರೀಮದ್ ಭಾಗವತದ ದೃಶ್ಯವೊಂದನ್ನು ಆಧರಿಸಿದ ಈ ಚಿತ್ರದಲ್ಲಿ, ಯಶೋದೆಯು ಹಸುವಿನ ಹಾಲು ಕರೆಯುತ್ತಿದ್ದರೆ, ಬಾಲಕೃಷ್ಣ ಹಾಲಿಗಾಗಿ ಕೈ ಚಾಚುವ ದೃಶ್ಯವನ್ನು ರವಿವರ್ಮ ಅದ್ಭುತವಾಗಿ ಚಿತ್ರಿಸಿದ್ದಾರೆ. ಸಾಂಪ್ರದಾಯಿಕ ಭಾರತೀಯ ಪೌರಾಣಿಕ ವಿಷಯಗಳನ್ನು ಯುರೋಪಿಯನ್ ತಂತ್ರಗಾರಿಕೆಯಾದ ‘ಕಿಯಾರೊಸ್ಕುರೊ’ ಜೊತೆಗೆ ಬೆರೆಸುವಲ್ಲಿ ರವಿವರ್ಮ ಸಿದ್ಧಹಸ್ತರಾಗಿದ್ದರು. ತಜ್ಞರು ಈ ಕಲಾಕೃತಿಯನ್ನು ಭಾರತೀಯ ಕಲೆಯ ‘ಮೋನಾ ಲೀಸಾ’ ಎಂದು ಬಣ್ಣಿಸಿದ್ದಾರೆ. ಇದು ಕೇವಲ ಚಿತ್ರವಲ್ಲ, ಒಂದು ಪವಿತ್ರ ಅನುಭವ ಎಂದು ಪರಿಗಣಿಸಲಾಗಿದೆ.

ರಾಜಾ ರವಿ ವರ್ಮ ಭಾರತದ ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ವರ್ಣಚಿತ್ರಕಾರರಲ್ಲಿ ಒಬ್ಬರು. ಅವರನ್ನು “ಆಧುನಿಕ ಭಾರತೀಯ ಕಲೆಯ ತಂದೆ” ಎಂದು ಕರೆಯಲಾಗುತ್ತದೆ. ಯುರೋಪಿಯನ್ ರಿಯಲಿಸ್ಟ್ ಶೈಲಿಯನ್ನು (ವಾಸ್ತವಿಕ ಚಿತ್ರಕಲೆ) ಭಾರತೀಯ ಪುರಾಣ, ಮಹಾಕಾವ್ಯಗಳು ಮತ್ತು ಸಂಸ್ಕೃತಿಯೊಂದಿಗೆ ಸಂಯೋಜಿಸಿ ಅನನ್ಯ ಕಲಾಕೃತಿಗಳನ್ನು ಸೃಷ್ಟಿಸಿದರು.1848 ರಲ್ಲಿ ತಿರುವಾಂಕೂರು ರಾಜಪ್ರಭುತ್ವದ ರಾಜ್ಯದಲ್ಲಿ ಒಂದು ಶ್ರೀಮಂತ ಕುಟುಂಬದಲ್ಲಿ ಜನಿಸಿದ ರಾಜಾ ರವಿವರ್ಮಾ, ಯುರೋಪಿಯನ್ ತಂತ್ರವನ್ನು ಭಾರತೀಯ ಕಲೆಯೊಂದಿಗೆ ಸಮ್ಮಿಶ್ರ ಮಾಡಿ, ಕಲಾಕೃತಿ ರಚಿಸಿದ್ದಕ್ಕಾಗಿ ಹೆಚ್ಚು ಹೆಸರುವಾಸಿಯಾಗಿದ್ದಾರೆ.

ಪೂನಾವಾಲ ಈ ಸ್ವಾಧೀನವನ್ನು ಒಂದು ಸವಲತ್ತು ಮತ್ತು ಜವಾಬ್ದಾರಿ ಅಂತ ಕರೆದಿದ್ದಾರೆ. ಈ ರಾಷ್ಟ್ರೀಯ ಸಂಪತ್ತು ನಿಯತಕಾಲಿಕವಾಗಿ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗುವಂತೆ ಮಾಡಲು ಅರ್ಹವಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನು ಸುಗಮಗೊಳಿಸಲು ನಾನು ಪ್ರಯತ್ನಿಸುತ್ತೇನೆ ಎಂದಿದ್ದಾರೆ.

https://www.newsics.com/2026/04/03/young-woman-goes-missing-after-going-on-a-trek/

 

 

 

 

TAGGED:Raja Ravi Varma's artwork sold for a whopping 167 crores!
Share This Article
Facebook Twitter Copy Link Print
Previous Article ಚಾರಣಕ್ಕೆ ತೆರಳಿದ್ದ ಯುವತಿ ನಾಪತ್ತೆ
Next Article Today’s Horoscope ಇಂದಿನ ರಾಶಿ ಭವಿಷ್ಯ, 03-04-2026, ಶುಕ್ರವಾರ

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read
ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?