https://youtube.com/shorts/DiU6l59Harw?si=ZuaOlVBTxzvWqxLP
newsics.com
ವಿಲ್ಲುಪುರಂನಲ್ಲಿ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ ನಯನತಾರಾ ವಿರುದ್ಧ ಎಐಎಡಿಎಂಕೆ ಸಂಸದ ಸಿವಿ ಷಣ್ಮುಗಂ ಅವರು ನೀಡಿರುವ ಹೇಳಿಕೆಗಳು ರಾಜ್ಯಾದ್ಯಂತ ಕೋಲಾಹಲ ಸೃಷ್ಟಿಸುತ್ತಿವೆ. ಡಿಎಂಕೆ ಸರ್ಕಾರದ ಅಡಿಯಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂದು ಆರೋಪಿಸಿ ಎಐಎಡಿಎಂಕೆ ಮತ್ತು ಅದರ ಎನ್ಡಿಎ ಮಿತ್ರಪಕ್ಷಗಳು ವಿಲ್ಲುಪುರಂನಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದವು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಮತ್ತು ಹಾಲಿ ಸಂಸದ ಆಗಿರುವ ಸಿವಿ ಷಣ್ಮುಗಂ ಅವರು, ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪ್ರತಿಷ್ಠಿತ ನಿಮ್ಮ ಕನಸನ್ನು ನಮಗೆ ತಿಳಿಸಿ ಎನ್ನುವ ಜನಸಂಪರ್ಕ ಅಭಿಯಾನವನ್ನು ಟೀಕಿಸಿ ಮಾತನಾಡಿದರು. ಇದೇ ವೇಳೆ ಅವರು ನಯನತಾರಾ ಹೆಸರನ್ನು ಉಲ್ಲೇಖಿಸಿ ಅನುಚಿತ ಹೇಳಿಕೆಗಳನ್ನು ನೀಡಿದರು.
ಭಾಷಣ ಮಾಡುತ್ತ ಸಂಸದ ಸಿವಿ ಷಣ್ಮುಗಂ ಅವರು, ಅಬ್ದುಲ್ ಕಲಾಂ ಜನರಿಗೆ ಕನಸು ಕಾಣಲು ಹೇಳಿದರು. ಆದರೆ ಸ್ಟಾಲಿನ್ ಒಂದು ಹೆಜ್ಜೆ ಮುಂದೆ ಹೋಗಿ ಆ ಕನಸುಗಳನ್ನು ನನಸಾಗಿಸುವುದಾಗಿ ಹೇಳುತ್ತಾರೆ. ಹಾಗಾದ್ರೆ ನಾನು ನಯನತಾರಾಳನ್ನು ಮದುವೆಯಾಗಲು ಬಯಸುತ್ತೇನೆ. ಮುಖ್ಯಮಂತ್ರಿ ಸ್ಟಾಲಿನ್ ಅವರು ಆ ಕನಸನ್ನು ನನಸಾಗಿಸುತ್ತಾರೆಯೇ?. ಯಾರಾದರೂ ನಯನತಾರಾಳನ್ನು ಮದುವೆಯಾಗುತ್ತೇನೆ ಎಂದರೆ, ಅದನ್ನು ಸ್ಟಾಲಿನ್ ಸರ್ಕಾರ ನಡೆಸಿಕೊಡುತ್ತದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಮಹಿಳಾ ಸುರಕ್ಷತೆಗಾಗಿ ಹೋರಾಟ ಮಾಡುವಾಗಲೇ ಮಹಿಳಾ ನಟಿಯನ್ನು ಅವಹೇಳನ ಮಾಡಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ. ಸದ್ಯ ಷಣ್ಮುಗಂ ಅವರ ಹೇಳಿಕೆಗೆ ಡಿಎಂಕೆ ನಾಯಕರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಚಿವೆ ಗೀತಾ ಜೀವನ್ ಈ ಹೇಳಿಕೆಗಳನ್ನು ಖಂಡಿಸಿ, ಮಹಿಳೆಯರನ್ನು ಕೀಳಾಗಿ ಕಾಣುತ್ತಿದ್ದಾರೆ ಎಂದು ಆರೋಪಿಸಿದರು. ಡಿಎಂಕೆ ವಕ್ತಾರ ಸರವಣನ್ ಅಣ್ಣಾದೊರೈ ಎಐಎಡಿಎಂಕೆ ವಿಧಾನವನ್ನು ಟೀಕಿಸಿದ್ದಾರೆ.
ಮಹಿಳಾ ಸುರಕ್ಷತೆಗಾಗಿ ಹೋರಾಟ ಮಾಡುವಾಗಲೇ ಮಹಿಳಾ ನಟಿಯನ್ನು ಅವಹೇಳನ ಮಾಡಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ. ಸದ್ಯ ಷಣ್ಮುಗಂ ಅವರ ಹೇಳಿಕೆಗೆ ಡಿಎಂಕೆ ನಾಯಕರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಚಿವೆ ಗೀತಾ ಜೀವನ್ ಈ ಹೇಳಿಕೆಗಳನ್ನು ಖಂಡಿಸಿ, ಮಹಿಳೆಯರನ್ನು ಕೀಳಾಗಿ ಕಾಣುತ್ತಿದ್ದಾರೆ ಎಂದು ಆರೋಪಿಸಿದರು. ಡಿಎಂಕೆ ವಕ್ತಾರ ಸರವಣನ್ ಅಣ್ಣಾದೊರೈ ಎಐಎಡಿಎಂಕೆ ವಿಧಾನವನ್ನು ಟೀಕಿಸಿದ್ದಾರೆ.
ಅಸಹ್ಯಕರವಾಗಿ ಮಾತನಾಡಿರುವ ಸಿವಿ ಷಣ್ಮುಗಂ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಮಹಿಳಾ ಸುರಕ್ಷತೆಯ ಬಗ್ಗೆ ಮಾತನಾಡುವ ಎಐಎಡಿಎಂಕೆ ನಾಯಕರು ಇಂತಹ ಹೇಳಿಕೆಗಳನ್ನು ನೀಡುವುದು ನಾಚಿಕೆಗೇಡಿನ ಸಂಗತಿ. ಷಣ್ಮುಗಂ ಇಂತಹ ಹೇಳಿಕೆಗಳನ್ನು ನೀಡುತ್ತಿರುವುದು ಇದೇ ಮೊದಲಲ್ಲ, ಅವರು ಪದೇ ಪದೇ ತಪ್ಪು ಮಾಡುತ್ತಿರುತ್ತಾರೆ. ಎಡಪ್ಪಾಡಿ ಪಳನಿಸ್ವಾಮಿ ಅವರು ನಿಜವಾಗಿಯೂ ಮಹಿಳಾ ಕಲ್ಯಾಣವನ್ನು ಗೌರವಿಸುತ್ತಿದ್ದರೇ, ಷಣ್ಮುಗಂ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಡಿಎಂಕೆ ವಕ್ತಾರ ಸರವಣನ್ ಅಣ್ಣಾದೊರೈ ಅವರು ಒತ್ತಾಯಿಸಿದರು.