newsics.com
ಮಾಗಡಿ ತಾಲ್ಲೂಕಿನ ಗಟ್ಟಿಪುರ ಗ್ರಾಮದಲ್ಲಿ ಬುಧವಾರ ನಡೆದ ಪ್ರಸಿದ್ಧ ದಕ್ಷಿಣಮುಖಿ ಬಸವೇಶ್ವರ ಸ್ವಾಮಿ ಅಗ್ನಿಕೊಂಡ ಮಹೋತ್ಸವದಲ್ಲಿ ಕೊಂಡ ಹಾಯುತ್ತಿದ್ದ ದೇವಾಲಯದ ಪ್ರಧಾನ ಅರ್ಚಕ ಬಸವರಾಜ ಶಾಸ್ತ್ರಿ ಅವರು ನಿಯಂತ್ರಣ ಕಳೆದುಕೊಂಡು ಕೊಂಡದಲ್ಲಿ ಬಿದ್ದಿದ್ದಾರೆ.
ಕೂಡಲೇ ಕೊಂಡದ ಅಕ್ಕಪಕ್ಕ ಇದ್ದವರು ಶಾಸ್ತ್ರಿ ಅವರನ್ನು ಮೇಲಕ್ಕೆತ್ತಿದ್ದಾರೆ. ಘಟನೆಯಲ್ಲಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಇದೀಗ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಶ್ಮಿಕಾ ಮಂದಣ್ಣಗೋಸ್ಕರ 25 ಕೋಟಿ ಮನೆ ಕಟ್ಟುತ್ತಿದ್ದ ರಕ್ಷಿತ್ ಶೆಟ್ಟಿ!; ಈಗ ಆ ಮನೆ ಭೂತಬಂಗಲೆ ಆಗಿದ್ಯಾ?