ರಾಜ್ಯದ 2026-27ನೇ ಸಾಲಿನ ಬಜೆಟ್ ಮಂಡನೆ ವಿಧಾನಸಭೆಯಲ್ಲಿ ಭರದಿಂದ ಸಾಗಿದ್ದು, ದಾಖಲೆಯ 17ನೇ ಆಯವ್ಯಯ ಮಂಡಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಲು ನೋವಿನ ಕಾರಣ ಇದೀಗ ಕುಳಿತುಕೊಂಡೇ ಬಜೆಟ್ ಭಾಷಣ ಓದುತ್ತಿದ್ದಾರೆ.
ಶುಕ್ರವಾರ ಬೆಳಗ್ಗೆ ಸರಿಯಾಗಿ 10.25ಕ್ಕೆ ವಿಧಾನಸಭೆಯಲ್ಲಿ ತಮ್ಮ ಸ್ಥಾನದಲ್ಲಿ ಎದ್ದು ನಿಂತುಕೊಂಡು ಆಯವ್ಯಯ ಪತ್ರವನ್ನು ಓದಲು ಆರಂಭಿಸಿದ ಸಿಎಂ, ಆರಂಭಿಕ ಕೆಲಹೊತ್ತು ನಿಂತುಕೊಂಡೇ ಬಜೆಟ್ನ ಮುಖ್ಯಾಂಶಗಳನ್ನು ವಿವರಿಸಿದರು. ಈ ಬಾರಿಯ ಬಜೆಟ್ ಬೃಹತ್ ಗಾತ್ರದ್ದಾಗಿದ್ದು, ಭಾಷಣದ ಪ್ರತಿ ಕೂಡ ಬಹಳ ಸುದೀರ್ಘವಾಗಿದೆ.
ಸತತವಾಗಿ ನಿಂತುಕೊಂಡು ಓದುತ್ತಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ವಯೋಸಹಜವಾಗಿ ಸ್ವಲ್ಪ ಕಾಲು ನೋವು ಕಾಣಿಸಿಕೊಂಡಿದೆ. ಅಲ್ಲದೇ ಬಜೆಟ್ ಮಂಡನೆಗೆ ಬರುವಾಗ ಊರುಗೋಲು ಹಿಡಿದು ಬಂದಿದ್ದರು.