https://youtube.com/shorts/yWrDals90_k?si=3M7uDFWo7rYXZydS
newsics.com
ಹೊಸಪೇಟೆ: ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹರಪನಹಳ್ಳಿಯ ದೊಡ್ಡ ಮೈಲಾರದ ಮೈಲಾರಲಿಂಗೇಶ್ವರ ದೇವಾಲಯದಲ್ಲಿ ಭರತ ಹುಣ್ಣಿಮೆಯ ಈ ವರ್ಷದ ಕಾರಣಿಕ ನುಡಿಯಲಾಗಿದೆ.
ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿಯಾಯ್ತಲೇ ಪರಾಕ್ ಎಂದು ಗೊರವಪ್ಪ ಕಾರಣಿಕ ನುಡಿದಿದ್ದಾರೆ.
ಭಕ್ತರ ಜಯಘೋಷದ ನಡುವೆ ಬಿಲ್ಲನ್ನೇರಿದ ಗೊರವಯ್ಯ ದಿಟ್ಟಿಸಿ ನೋಡುತ್ತಾ ಈ ವರ್ಷದ ಕಾರಣಿಕ ನುಡಿದರು.
ಭರತ ಹುಣ್ಣಿಮೆಯ ದಿನ ನುಡಿಯುವ ಈ ಕಾರಣಿಕವನ್ನು ಅನೇಕ ರೀತಿಯಲ್ಲಿ ವಿಶ್ಲೇಷಿಸಲಾಗುತ್ತದೆ. ವರ್ಷದ ಭವಿಷ್ಯವಾಣಿ ಎನ್ನಲಾಗುತ್ತದೆ.
ಈ ಬಾರಿ ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿಯಾಯ್ತಲೇ ಪರಾಕ್ ಎಂದು ಕಾರಣಿಕ ನುಡಿಯಲಾಗಿದ್ದು, ಈ ಬಾರಿ ಮಳೆ ಬೆಳೆಯಾಗಿ ರಾಜ್ಯದ ಜನ ಸಮೃದ್ಧಿಯಿಂದ ಇರುತ್ತಾರೆ ಎಂದು ಹೇಳಲಾಗಿದೆ.
ಹಲವು ವರ್ಷಗಳಿಂದ ಭರತ ಹುಣ್ಣಿಮೆಯಂದು ಕಾರಣಿಕ ನುಡಿಯುವ ಸಂಪ್ರದಾಯ ಇಲ್ಲಿದೆ. ಇಲ್ಲಿಯ ಕಾರಣಿಕದ ನಂತರ ಮೈಲಾರದಲ್ಲಿ ಕಾರಣಿಕವಾಗುತ್ತದೆ. ‘ಈ ಬಾರಿ ಮಳೆಬೆಳೆಯಾಗಿ ರಾಜ್ಯದ ಜನರು ಸುಖದಿಂದ ಇರುತ್ತಾರೆ’ ಎಂದು ಹಲವಾರು ಜನರು ಕಾರಣಿಕವನ್ನು ವಿವರಿಸಿದ್ದಾರೆ. ಇಲ್ಲಿನ ಕಾರಣಿಕ ಸತ್ಯವಾಗುತ್ತದೆ ಎಂದು ಜನರು ನಂಬುತ್ತಾರೆ.
ಅವನು ನನ್ನ ನಗ್ನ ದೇಹ ನೋಡಬೇಕೆಂದ… ಆತನ ಡಿಮ್ಯಾಂಡ್ಗೆ ಬೆಚ್ಚಿಬಿದ್ದ ನಟಿ ಐಶ್ವರ್ಯ ರಾಜೇಶ್
ತಾಯಿಯ ಹೆಣ ಹೊತ್ತು, ಅಂತ್ಯಸಂಸ್ಕಾರ ಮಾಡಿದ ಹೆಣ್ಣು ಮಕ್ಕಳು; ವೈರಲ್ ವಿಡಿಯೋ ನೋಡಿ