Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಗ್ ಬಾಸ್ ಸೀಸನ್ 12 ಸುರ ಸುಂದರಾಂಗ ಸೂರಜ್ ಸಿಂಗ್, ಬಿಗ್ ಮನೆಯಿಂದ ಹೊರ ಬರ್ತಿದ್ದಂತೆಯೇ ಮತ್ತೊಂದು ಅವಕಾಶ ಬಾಗಿಲು ತೆರೆದಿದೆ. ಮನೆಯಿಂದ ಹೊರ ಬಂದ ಎರಡೇ ವಾರದಲ್ಲಿ ಅವರು ಮುಂದೇನು ಮಾಡ್ತಾರೆ ಅನ್ನೋದಕ್ಕೆ ಬಿಗ್ ಅಪ್ಡೇಟ್ಸ್ ಸಿಕ್ಕಿದ್ದು, ಮತ್ತೊಮ್ಮೆ ಕಲರ್ಸ್ ಕನ್ನಡದ ಮೂಲಕವೇ ಮಿಂಚಲಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯು ಹೊಸ ಪ್ರೋಮೋವೊಂದನ್ನು ರಿಲೀಸ್ ಮಾಡಿದೆ. ಸೂರಜ್ ಸಿಂಗ್ ಅವರು ನಟಿಸಿದ ‘ಪವಿತ್ರ ಬಂಧನ’ ಸೀರಿಯಲ್ನ ಪ್ರೋಮೋ ಅದಾಗಿದೆ. ಸೂರಜ್ ಹೊರಗಡೆ ಬಂದು ಎರಡು ವಾರ ಆಗಿದೆ ಅಷ್ಟೇ. ಅವರು ಹೊರಗಡೆ ಬರುತ್ತಿದ್ದಂತೆ ವಾಹಿನಿಯೊಂದರ ಧಾರಾವಾಹಿಗೆ ಹೀರೋ ಆದರು ಎನ್ನಲಾಗಿತ್ತು.
ತಿಲಕ್ ದೇಶಮುಖ್ ಹಾಗೂ ದೇವದತ್ ದೇಶಮುಖ್ ಇಬ್ಬರೂ ಅಣ್ಣ ತಮ್ಮ. ತಿಲಕ್ ಜಾಲಿ ಹುಡುಗ, ದೇವದತ್ ಬ್ಯುಸಿನೆಸ್ ಮ್ಯಾನ್. ಇವರಿಬ್ಬರ ನಡುವೆ ನಾಯಕಿ ಪವಿತ್ರಾ ಎಂಟ್ರಿ ಇದೆ. ತಿಲಕ್ ಮತ್ತು ಪವಿತಾ ಪರಸ್ಪರ ಪ್ರೀತಿ ಮಾಡ್ತಿರ್ತಾರೆ. ಮದುವೆ ಕನಸು ಹೊತ್ತಿರುತ್ತೆ ಈ ಜೋಡಿ.
ಇನ್ನೇನು ಇವ್ರೇ ಜೋಡಿ ಅನ್ನೋವಾಗ್ಲೇ ಮಂಟಪದಲ್ಲಿ ಪವಿತ್ರಾ ಕೊರಳಿಗೆ ದೇವದತ್ ತಾಳಿ ಕಟ್ಟೋ ಸೀನ್ ಇದೆ. ಆದರೆ ನಿನ್ನನ್ನ ಎಂದಿಗೂ ನನ್ನ ಗಂಡ ಎಂದು ಒಪ್ಪಿಕೊಳ್ಳೋದಿಲ್ಲ ಎಂದು ಸೂರಜ್ಗೆ ಹೇಳುತ್ತಾಳೆ. ಈ ನೋಟವನ್ನು ಈಗಾಗಲೇ ಪ್ರೋಮೋದಲ್ಲಿ ಬಿಡುಗಡೆ ಮಾಡಲಾಗಿದೆ. ಪ್ರೊಮೋ ಅಂತೂ ಸಖತ್ ಇಂಟ್ರಿಸ್ಟಿಂಗ್ ಅನ್ನಿಸುತ್ತಿದ್ದು, ಪಾಸಿಟಿವ್ ಕಾಮೆಂಟ್ಗಳು ಹರಿದುಬಂದಿವೆ.
https://www.newsics.com/2026/01/11/we-are-bengaluru-zero-arrogant-statement-by-keralites/