newsics.com
ಬೆಂಗಳೂರ: ನಮ್ಮ ಮೆಟ್ರೋ ಸೂಸೈಡ್ ಪಾಯಿಂಟ್ ಆಗಿ ಮಾರ್ಪಡುತ್ತಿದೆ. ಮೆಟ್ರೋ ನಿಲ್ದಾಣದಲ್ಲಿ ಹೆಚ್ಚಿನ ಸೇಪ್ಟಿಗೆ ಒತ್ತು ನೀಡುವಂತೆ ಜನ ಸಾಮಾನ್ಯರು ಹೇಳುತ್ತಿದ್ದು, ಇದಕ್ಕೆ ನಮ್ಮ ಮೆಟ್ರೋ (BMRCL) ಸಹ ಹೊಸ ಯೋಜನೆ ಸಿದ್ಧಪಡಿಸಿದೆ ಎಂದು ತಿಳಿದುಬಂದಿದೆ. ಈ ಮೂಲಕ ಮುಂದಾಗುವ ಅಪಾಯ ತಪ್ಪಿಸಲು ಸಾಧ್ಯವಾಗಬಹುದು ಎಂದು ಹೇಳಲಾಗುತ್ತಿದೆ.
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಈಗ ಮೆಟ್ರೋ ನಿಲ್ದಾಣಗಳಲ್ಲಿ ಪ್ಲಾಟ್ಫಾರ್ಮ್ ಸ್ಟ್ರೀನ್ ಡೋರ್, ಗೇಟ್ (PSD) ನಿರ್ಮಿಸಲು ಹಾಗೂ ಈಗಾಗಲೇ ಅಸ್ತಿತ್ವದಲ್ಲಿರುವ ತಂತ್ರಜ್ಞಾನಕ್ಕೆ ಹೇಗೆ ಸೇರಿಸುವುದು ಎಂಬುದನ್ನು ಅಧ್ಯಯನ ಮಾಡುತ್ತಿದೆ ಎಂದು ವರದಿಯಾಗಿದೆ.
ಇದರ ಪ್ರಾಯೋಗಿಕವಾಗಿ ಮೆಜೆಸ್ಟಿಕ್ನ ಮೇನ್ ಮೆಟ್ರೋ ನಿಲ್ದಾಣದಲ್ಲಿ ಸ್ಟ್ರೀನ್ ಡೋರ್, ಗೇಟ್ ಅಳವಡಿಸಲಾಗಿದ್ದು, ಎಲ್ಲಾ ಮೆಟ್ರೋ ನಿಲ್ದಾಣದಲ್ಲಿಯೂ ಇದರ ಅಳವಡಿಕೆಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಲಾಗಿದೆ.
ಕಳೆದ ದಿನ (ಆಗಸ್ಟ್ 3) ಮೆಟ್ರೋ ಹಳಿಯ ಮೇಲೆ ಹಾರಿ ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಇದು ಏಳು ತಿಂಗಳ ಅಂತರದಲ್ಲಿ ನಡೆದ 8ನೇ ಪ್ರಕರಣವಾಗಿದೆ. ಬೆಂಗಳೂರಿನ ದೊಡ್ಡಕಲ್ಲಸಂದ್ರ ನಿಲ್ದಾಣದಲ್ಲಿ 57 ವರ್ಷದ ವ್ಯಕ್ತಿಯೊಬ್ಬ ಮೆಟ್ರೋ ಹಳಿಯ ಮೇಲೆ ಹಾರಿ ಪ್ರಾಣ ಬಿಟ್ಟಿದ್ದಾನೆ.
ಹುಡುಗಿಯರೇ..ತುಟಿ,ಎದೆ,ಕುತ್ತಿಗೆ ಮೇಲೆ ಟ್ಯಾಟು ಹಾಕಿಸಿಕೊಳ್ಳಲೇಬೇಡಿ….ಕಾರಣವೇನು ಗೊತ್ತಾ?