Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ರಾಜ್ಯ ರಾಜಕೀಯದಲ್ಲಿ ಅಧಿಕಾರ ಹಂಚಿಕೆ ಸಮರ ಜೋರಾಗಿ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ನಡುವಿನ ಗುದ್ದಾಟ ಹೈಕಮಾಂಡ್ ಅಂಗಳದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಇದೀಗ ಖ್ಯಾತ ಜ್ಯೋತಿಷಿ ದ್ವಾರಕಾನಾಥ್ ಅವರು ಶಿವಕುಮಾರ್ ಅವರ ಸಿಎಂ ಖುರ್ಚಿಯ ಭವಿಷ್ಯವನ್ನು ನುಡಿದಿದ್ದಾರೆ.
ಅವರು ಹೇಳಿರುವ ಪ್ರಕಾರನ, 14ನೇ ತಾರೀಖು ರಾತ್ರಿಯ ಕಾಲದಲ್ಲಿ ಮಕರಕ್ಕೆ ಸೂರ್ಯ ಬರುತ್ತಾನೆ. ಸೂರ್ಯನು ಮೇಲ್ಮುಖವಾಗಿ ಹೋಗುತ್ತಾನೆ. ಅದಕ್ಕಿಂತ ಹತ್ತು ದಿನ ಮೊದಲು ಸೌರ್ಯಶಕ್ತಿ ಇಳಿಯುತ್ತಾ ಬರುತ್ತದೆ. ಮಕರ ಸಂಕ್ರಮಣದ ಮೊದಲ ಹತ್ತು ದಿನಗಳ ಬಗ್ಗೆ ಹೇಳುವುದಾದರೆ, ಅದು ಜನವರಿ 5. ಆದ್ದರಿಂದ ಜನವರಿ 5 ರಿಂದ ಜನವರಿ 30ರ ಒಳಗೆ ಡಿಕೆಶಿ ಅವರ ಜೀವನದಲ್ಲಿ ಏನು ಬೇಕಾದರೂ ಆಗಬಹುದು. ಅವರಿಗೆ ಸ್ಥಾನ ಸಿಕ್ಕಿಯೇ ಸಿಗುತ್ತದೆ ಎಂದಿದ್ದಾರೆ.
ರಾಜಕೀಯ ವಲಯದಲ್ಲಿ ದ್ವಾರಕಾನಾಥ್ ಅವರ ಪವರ್ಫುಲ್ ಜ್ಯೋತಿಷಿ ಎಂದು ಎನ್ನಿಸಿಕೊಂಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಇಂದು ಈ ಮಟ್ಟಿಗೆ ಬರುವಲ್ಲಿ ಅದರ ಹಿಂದೆ ದ್ವಾರಕಾನಾಥ್ ಅವರ ಕೊಡುಗೆ ಅಪಾರವಾಗಿದೆ ಎನ್ನುವ ಮಾತಿದೆ.
https://www.newsics.com/2026/01/03/the-first-supermoon-of-2026-dont-miss-it/