Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ನಾನು ದೂರು ಕೊಟ್ರೆ ಕ್ರಮ ಕೈಗೊಳ್ಳಲ್ಲ. ಆದರೆ ಆ ಲೇಡಿ ಕೊಟ್ಟ ದೂರಿಗೆ ಒಂದೇ ದಿನದಲ್ಲಿ ಕ್ರಮ ಕೈಗೊಳ್ಳುತ್ತಾರೆ. ಹೀಗಂತ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಮೊನ್ನೆಯಷ್ಟೇ ಸೋಷಿಯಲ್ ಮೀಡಿಯಾದಲ್ಲಿ ತಮಗೆ ಕಿಚ್ಚ ಸುದೀಪ್ ಅಭಿಮಾನಿಗಳ ಹೆಸರಿನಲ್ಲಿ ಅಶ್ಲೀಲ ಕಾಮೆಂಟ್ ಮಾಡಿದವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.
ತಮಗೆ ಕಾಮೆಂಟ್ ಮಾಡಿದವರ ಸ್ಕ್ರೀನ್ ಶಾಟ್ ಗಳನ್ನೂ ಅವರು ಲಗತ್ತಿಸಿದ್ದರು.
ಆದರೆ ಇದುವರೆಗೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬುದು ವಿಜಯಲಕ್ಷ್ಮಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಅವರು ನನಗೆ ಈ ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನಾ ಎಂಬುದೇ ಅನುಮಾನವಾಗಿದೆ ಎಂದಿದ್ದಾರೆ.
‘ನಾನು ನೀಡಿದ ದೂರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಆದರೆ ಇನ್ನೊಬ್ಬ ಮಹಿಳೆ ನೀಡಿದ್ದ ದೂರನ್ನು ತ್ವರಿತವಾಗಿ ಕ್ರಮ ಕೈಗೊಳ್ಳಲಾಗಿತ್ತು. ಹಾಗಿದ್ದರೆ ನನ್ನ ದೂರಿಗೆ ಬೆಲೆಯಿಲ್ಲ ಎಂದು ಅರ್ಥವೇ? ಅಥವಾ ಯಾರಾದರೂ ಪ್ರಭಾವಿಗಳ ಒತ್ತಡಕ್ಕೆ ಮಣಿದು ನನ್ನ ದೂರನ್ನು ಕಡೆಗಣಿಸಲಾಗುತ್ತಿದೆಯೇ? ದೂರು ನೀಡಿದ ಬಳಿಕ ನನ್ನ ಲಾಯರ್ ಗಳು ನಿಯಮಿತವಾಗಿ ಏನಾಯ್ತು ಎಂದು ವಿಚಾರಿಸುತ್ತಿದ್ದರೂ ಇದುವರೆಗೆ ಕ್ರಮವಿಲ್ಲ. ಕೊನೆಗೆ ನಾನೇ ಖುದ್ದಾಗಿ ಕಮಿಷನರ್ ಕಚೇರಿಗೆ ಭೇಟಿ ಕೊಡಬೇಕಾಗಿ ಬಂದಿದೆ. ಯಾರು ದೂರು ನೀಡಿದರು ಎಂಬುದರ ಮೇಲೆ ಕ್ರಮ ಕೈಗೊಳ್ಳುವುದು ನಿರ್ಧಾರವಾಗಬಾರದು. ಇದನ್ನು ನಾನು ಇಷ್ಟಕ್ಕೇ ಬಿಡುವ ಪ್ರಶ್ನೆಯೇ ಇಲ್ಲ’ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಇಂದು ಖುದ್ದಾಗಿ ತಮ್ಮ ಲಾಯರ್ ಗಳ ಜೊತೆ ಕಮಿಷನರ್ ಕಚೇರಿಗೆ ಬಂದು ತಮ್ಮ ದೂರಿನ ಬಗ್ಗೆ ತಿಳಿದುಕೊಂಡಿದ್ದಾರೆ. ಇನ್ನು, ವಿಜಯಲಕ್ಷ್ಮಿ ಅಸಮಾಧಾನದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕಮಿಷನರ್ ಸೀಮಂತ್ ಕುಮಾರ್ ‘ಆವತ್ತು ಅವರು ಬಂದಾಗ ನಾನು ಕಚೇರಿಯಲ್ಲಿ ಇರಲಿಲ್ಲ. ಈವತ್ತು ನನಗೆ ಬಂದು ಕೇಸ್ ಏನಾಯ್ತು ಕೇಳಿದ್ದಾರೆ. ನಾನು ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ವಿಚಾರಿಸಿದ್ದೇನೆ. ತನಿಖೆ ನಡೆಯುತ್ತಿದೆ. ನಾವು ಯಾರೂ ನೆಗ್ಲೆಕ್ಟ್ ಮಾಡಿಲ್ಲ’ ಎಂದಿದ್ದಾರೆ.
ಈ ಪೇನ್ ಕಿಲ್ಲರ್ ಮಾತ್ರೆ ಆರೋಗ್ಯಕ್ಕೆ ಗಂಡಾಂತರ:ಒಂದು ವೇಳೆ ತಗೊಂಡ್ರೆ ಅಪಾಯಕಾರಿ