newsics.com
ರಾಯಚೂರು: ಜಿಲ್ಲೆಯ ಸಿರವಾರ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಭೀಮಣ್ಣ ಎನ್ನುವವರ ಒಂದೇ ಕುಟುಂದ ನಾಲ್ವರು ಮಟನ್-ಚಪಾತಿ ಊಟ ಮಾಡಿ ಧಾರುಣವಾಗಿ ಸಾವನ್ನಪ್ಪಿದ್ದಾರೆ.
60 ವರ್ಷದ ಭೀಮಣ್ಣ, ಪತ್ನಿ ಈರಮ್ಮ(50), ಮಗಳಾದ ಪಾರ್ವತಿ (17) ಹಾಗೂ ಮಗ ಮಲ್ಲೇಶ್(19)ಮೃತಪಟ್ಟಿದ್ದಾರೆ. ಮತ್ತೊಬ್ಬ ಮಗಳು ಮಲ್ಲಮ್ಮ ರಿಮ್ಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ.
ಭೀಮಣ್ಣ ಹಾಗೂ ಕುಟುಂಬಸ್ಥರು ಇದೇ ಬುಧವಾರ ಮನೆಯಲ್ಲಿ ಮಟನ್, ಚಪಾತಿ, ಚವಳೆಕಾಯಿ ಪಲ್ಯ ಅಡುಗೆ ಮಾಡಿದ್ದರು. ಬಳಿಕ ಎಲ್ಲಾ ಐದು ಜನ ಮನೆಯಲ್ಲಿ ಊಟ ಮುಗಿಸಿ, ಹೊಲಕ್ಕೆ ಕೆಲಸಕ್ಕೆಂದು ಹೋಗಿದ್ದರು. ಭೀಮಣ್ಣಗೆ ವಯಸ್ಸಾಗಿದ್ದರಿಂದ ಆತ ಮನೆಯಲ್ಲೇ ಇರುತ್ತಿದ್ದನಂತೆ. ಆದ್ರೆ, ಹೊಲಕ್ಕೆ ಹೋಗಿದ್ದ ಭೀಮಣ್ಣನ ಪತ್ನಿ ಈರಮ್ಮ, ಮಕ್ಕಳಾದ ಮಲ್ಲೇಶ್, ಪಾರ್ವತಿ, ಮಲ್ಲಮ್ಮಗೆ ತೀವ್ರವಾದ ವಾಂತಿ-ಬೇಧಿ, ಸುಸ್ತು ಕಾಣಿಸಿಕೊಂಡಿದೆ. ಇತ್ತ ಭೀಮಣ್ಣಗೂ ಸಮಸ್ಯೆ ಶುರುವಾಗಿತ್ತು. ಬಳಿಕ ಸ್ಥಳೀಯ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದರಾದರೂ ವಾಂತಿ-ಬೇಧಿ ನಿಂತಿರ್ಲಿಲ್ಲ.
ಮೇಲ್ನೋಟಕ್ಕೆ ಇದು ವಿಷಪೂರಿತ ಆಹಾರ ಸೇವಿಸಿದ್ದರಿಂದ ಘಟನೆ ನಡೆದಿದೆ. ಫುಡ್ ಪಾಯ್ಸನ್ಗೆ ಸಂಬಂಧಿಸಿದ ಲಕ್ಷಗಳು ಕಂಡು ಬಂದಿವೆ ಎಂದು ತಜ್ಞ ವೈದ್ಯರು ಸ್ಪಷ್ಟಪಡಿಸಿದ್ದಾರೆ.