newsics.com
ಸುಪ್ರೀಂ ಕೋರ್ಟ್ ದರ್ಶನ್ ಅಂಡ್ ಗ್ಯಾಂಗ್ಗೆ ನೀಡಲಾಗಿದ್ದ ಜಾಮೀನನ್ನು ರದ್ದು ಮಾಡಿದೆ. ಪರಿಣಾಮ ಮತ್ತೆ ರೇಣುಕಾಸ್ವಾಮಿ ಪ್ರಕರಣದ ಪ್ರಮುಖ 7 ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ.
ನಟಿ ಪವಿತ್ರಾ ಗೌಡ ಜೈಲು ಸೇರಿದ್ದಾರೆ. ಇದರ ಬೆನ್ನಲ್ಲೇ ಪವಿತ್ರಾ ಗೌಡ ಅವರ ಮಗಳು ಮೊದಲ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ಪವಿತ್ರಾ ಗೌಡ ಅವರ ಮಗಳು ಶೇರ್ ಮಾಡಿದ ಪೋಸ್ಟ್ನಲ್ಲಿ ಏನಿದೆ?
ಸ್ವಾತಂತ್ರ್ಯ ದಿನ. ಖಂಡಿತಾ ನಮಗೆ ಬ್ರಿಟಿಷ್ ಆಡಳಿತದಿಂದ ನಮಗೆ ಮುಕ್ತಿ ಸಿಕ್ಕಿತು. ಅದಕ್ಕಾಗಿ ನಾವು ಎಲ್ಲ ಭಾರತೀಯರಿಗೆ ಹೆಮ್ಮೆ ಹಾಗೂ ಗೌರವ ಇದೆ. ಆದರೆ ಭಾರತಕ್ಕೆ ಬೇಕಾದ್ದು ಎಲ್ಲವೂ ಇದೆ ಎಂದು ಭಾರತೀಯರು ಅಂದುಕೊಳ್ಳುತ್ತಿರುವುದು ಮಾತ್ರ ನಿಜಕ್ಕೂ ತಮಾಷೆಯಾಗಿದೆ. ಒಂದು ದೇಶದಲ್ಲಿ ಇರಬೇಕಾದರೆ ನಮಗೆ ರಕ್ಷಣೆ, ಸುರಕ್ಷೆ, ಸಮಾನತೆ, ಮಹಿಳೆಯ ವಿರುದ್ಧ ಹಿಂಸೆ ಇರಬಾರದು ಎನ್ನುವುದು ಎಷ್ಟೋ ಜನಕ್ಕೆ ಗೊತ್ತಿಲ್ಲ. ಸ್ವಾತಂತ್ರ್ಯ ಸಿಕ್ಕಿ ಈಗಾಗಲೇ 79 ವರ್ಷಗಳಾಗಿವೆ ಆದರೆ ಇನ್ನೂ ಸ್ವಾತಂತ್ರ್ಯ ಸಿಗದ ಸ್ಥಳಗಳ ಬಗ್ಗೆ ಕಾನೂನಿಗೆ ತಿಳಿಯುತ್ತದೆ, ಪ್ರತಿ ಕಥೆಯ ಸತ್ಯ ತಿಳಿಯುತ್ತದೆ ಎಂದು ಭರವಸೆ ಇಟ್ಟುಕೊಳ್ಳೋಣ ಎಂದು ಪವಿತ್ರಾ ಗೌಡ ಮಗಳು ಬರೆದುಕೊಂಡಿದ್ದಾರೆ.
https://www.newsics.com/2025/08/16/sri-lankan-cricketer-saliha-saman-banned-for-5-years/