newsics.com
ಬ್ಯಾಂಕ್ ವಂಚನೆಯಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ವಿರುದ್ಧ ಭಾರತ ಸರ್ಕಾರ ಕಾನೂನು ಹೋರಾಟ ಮುಂದುವರಿಸಿದೆ. ಈಗಾಗಲೇ ಭಾರತದಲ್ಲಿರುವ ಬಹುತೇಕ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.ಆದ್ರೆ ಸಾವಿರಾರು ಕೋಟಿ ರೂ ಬ್ಯಾಂಕ್ಗೆ ವಂಚಿಸಿ ಪರಾರಿಯಾಗಿರುವ ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ್ ಮಲ್ಯ ತಮ್ಮ ಜೀವನದ ನೋವು, ಸಂಕಷ್ಟಗಳ ಕುರಿತು ಮೊದಲ ಬಾರಿಗೆ ಮಾತನಾಡಿದ್ದಾರೆ.
ಇತ್ತೀಚೆಗಷ್ಟೆ ಸಿದ್ದಾರ್ಥ್ ಮಲ್ಯ ಬರೆದಿರುವ WhosThat360 ಪುಸ್ತಕ ಬಿಡುಗಡೆ ಮಾಡಿದ್ದಾರೆ. ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಸಿದ್ಧಾರ್ಥ್ ಮಲ್ಯ . ನಾನು ನಟನಾ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದುಕೊಂಡಿರಲಿಲ್ಲ ಎಲ್ಲರೂ ತೆರ ಮೇಲೆ ನೋಡುತ್ತಾರೆ. ತೆರೆ ಹಿಂದಿನ ಕಷ್ಟಗಳು ಯಾರಿಗೂ ತಿಳಿಯುವುದಿಲ್ಲ. ನನ್ನ ಮಲ್ಯ ಸರ್ನೇಮ್ ನನ್ನ ಜೀವನದಲ್ಲಿ ನೆರವಾಗಿಲ್ಲ. ಎಲ್ಲಾ ಕಡೆ ಅವಮಾನವೇ ಎದುರಿಸಬೇಕಾಯಿತು. ಆರಂಭದಲ್ಲಿ ಎಕಾನಮಿ ಪವರ್ ಎಂದು ಹೀಯಾಳಿಸಿದರೆ ಬಳಿಕ ಎದುರಿಸದ ಸಂಕಷ್ಟ ಬೇರೆ. ನಾನು ಎಲ್ಲೆ ಹೋದರು ಜನರು ಆತನಿಗೆ ಏನು? ಉದ್ಯಮಿ ಕುಟುಂಬ, ಆರ್ಥಿಕತೆ ಬಲ, ಮಲ್ಯ ಸರ್ನೇಮ್ ಈ ಕುರಿತು ಟೀಕೆ ಮಾಡುತ್ತಿದ್ದರು. ಆದರೆ ನನಗೆ ಎಲ್ಲೂ ಸರ್ನೇಮ್ ನೆರವಾಗಿಲ್ಲ. ಬರಿ ಅಪಮಾನ, ಟೀಕೆಗಳನ್ನು ಎದುರಿಸಿಕೊಂಡು ಬಂದೆ ಎಂದು ಸಿದ್ದಾರ್ಥ್ ಮಲ್ಯ ಪರೋಕ್ಷವಾಗಿ ತಂದೆಯನ್ನು ತಿವಿದಿದ್ದಾರೆ.
ಇನ್ನು ಸಿದ್ದಾರ್ಥ ಮಲ್ಯ ಟಿವಿ ಸೀರಿಸ್ ಪರ್ಸುಯೇಶನ್, 2016ರಲ್ಲಿ ತೆರೆ ಕಂಡ ಬ್ರಾಹ್ಮನ್ ನಮನ್ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಕೆಲ ವೆಬ್ ಸೀರಿಸ್ಗಳಲ್ಲಿ ಸಿದ್ಧಾರ್ಥ್ ಮಲ್ಯ ಕಾಣಿಸಿಕೊಂಡಿದ್ದಾರೆ.