newsics.com
ಪ್ರಕೃತಿಯಲ್ಲಿನ ವಿಸ್ಮಯಗಳೇ ಅದ್ಭುತ ಆದನ್ನು ಊಹಿಸಲು ಯಾರಿಂದಲೂ ಸಾಧ್ಯವಿಲ್ಲ ಇದಕ್ಕೆ ಪೂರಕವೆಂಬಂತೆ ಪ್ರಕೃತಿಯಿಂದ ನಿರ್ಮಿತವಾದಂತಹ ಗುಹೆ ಆ ಗುಹೆಯೊಳಗೆ ನೆಲೆಸಿರುವವನು ಮೂಡುಗಲ್ಲು ಶ್ರೀ ಕೇಶವನಾಥೇಶ್ವರ ಗುಹಾಂತ.
ಹೌದು ಇದು ಇರುವ ಪ್ರದೇಶ ಕುಂದಾಪುರ ತಾಲೂಕಿನ ಕೆರಾಡಿ ಗ್ರಾಮದ ಮೂಡುಗಲ್ಲು ಎಂಬ ಪ್ರದೇಶದಲ್ಲಿದೆ. ಈ ಗುಹೆಯ ಕೇಶವನಾಥೇಶ್ವರ ದೇವರಿಗೆ ಪೂಜೆ ಸಲ್ಲಿಸಬೇಕಾದರೆ ನೀವು ನೀರಿನಲ್ಲಿ ನಿಲ್ಲಬೇಕು. ಮೀನುಗಳು ಕಾಲಿಗೆ ಕಚಗುಳಿ ಕೊಡುವುದರ ನಡುವೆಯೇ ದೇವರ ಪೂಜೆ ಸಲ್ಲಿಸಬೇಕು.
ಕುಂದಾಪುರ ತಾಲ್ಲೂಕಿನಲ್ಲಿರುವ ಈ ಮೂಡುಗಲ್ಲು ಎಂಬ ಸುಂದರ ಊರಿನಲ್ಲಿರುವ ಈ ದೇವಸ್ಥಾನದ ಇತಿಹಾಸ ಕೇಳಿದ್ರೆ ನೀವು ಶಾಕ್ ಆಗ್ತೀರಾ. ಹೌದು ಈ ಊರಿನಲ್ಲಿರುವ ದೇವಾಲಯ ಇದೊಂದು ಗುಹಾಂತರ ದೇವಾಲಯಾವಾಗಿದ್ದು. ಇದು ಅತ್ಯಂತ ಪ್ರಾಚಿನ ಶಿವಲಿಂಗವಾಗಿದೆ. ಇಲ್ಲಿರುವ ಶಿವಲಿಂಗ ಕಾಶಿಗೆ ಹೋಗುತ್ತದೆ ಎಂಬ ನಂಬಿಕೆ ಇದೆ. ಇನ್ನೂ ದೇವಸ್ಥಾನದ ಜಾಗ ಊರಿನ ಒಬ್ಬ ಭೂ ಮಾಲೀಕನಿಗೆ ಸೇರಿದ ದೇವಸ್ಥಾನವಾಗಿದ್ದು, ತನ್ನ ಬೆಳೆಯನ್ನು ಪ್ರಾಣಿ ಹಾಳು ಮಾಡುತ್ತಿದೆ ಎಂದು ಕಾಯುವ ಸಂಧರ್ಭದಲ್ಲಿ ಅದೇ ರಾತ್ರಿ ಹಸುವೊಂದು ಆ ಜಾಗಕ್ಕೆ ಬಂದಾಗ ಹಸುವನ್ನ ಹಿಂಬಾಲಿಸಿ ನೆಡೆದಾಗ ಅದು ಗುಹೆಯ ಒಳಗಡೆ ಹೋಗಿ ಕಾಣೆಯಾಯಿತು.
ನಂತರದಲ್ಲಿ ಹೊರಗೆ ಬರಲು ದಾರಿ ಕಾಣದೇ ಭಗವಂತನನ್ನ ಸ್ಮರಿಸಿದಾಗ ವಿಸ್ಮಯ ಜ್ಯೋತಿಯೊಂದು ಆತನಿಗೆ ದಾರಿ ತೋರಿಸಿತು. ಹೀಗೆ ಹೊರ ಬಂದ ನಂತರದಲ್ಲಿ ಆ ಜಾಗ ದೇವರಿಗೆ ಸೇರಬೇಕು ಎಂದು ಆ ಜಾಗವನ್ನು ಬಿಟ್ಟು ಕೊಟ್ಟ ಎಂಬ ನಂಬಿಕೆ ಇದೆ. ಅಲ್ಲದೆ ಈ ಗುಹೆಯ ಜಾಗದಲ್ಲಿ ಹಾವುಗಳು ಇದ್ದರು ಇದುವರೆಗೂ ಯಾರಿಗೂ ತೊಂದ್ರೆ ಮಾಡಿಲ್ಲ ಎಂಬುದು ಈ ಭಾಗದ ಜನರ ನಂಬಿಕೆ ಆಗಿದೆ.
ಎಳ್ಳಮಾವಾಸ್ಯೆ ಇಲ್ಲಿನ ವಿಶೇಷತೆಗಳಲ್ಲಿ ಒಂದು ಕೇಶವನಾಥೇಶ್ವರ ದೇವಾಲಯಕ್ಕೂ ಇಲ್ಲೆ ಪಕ್ಕದಲ್ಲಿರುವ ಮೇಳ್ಯ ಕೆರೆಗೂ ಸಂಪರ್ಕವಿದ್ದು ಈ ಕೆರೆಯಲ್ಲಿ ಎಳ್ಳಮವಾಸ್ಯೆ ಸ್ನಾನ ಮಾಡಲು ಸಹಸ್ರಾರು ಮಂದಿ ಭಕ್ತರು ವರ್ಷಂಪ್ರತಿ ಬರುತ್ತಾರೆ. ಪ್ರತೀ ವರ್ಷ ಎಳ್ಳಮವಾಸ್ಯೆ ದಿನದಂದು ಮೇಳ್ಯ ಕೆರೆಯಲ್ಲಿ ಹೂವಿನ ಎಸಳುಗಳು ತೇಲುತ್ತಿರುವುದನ್ನು ಕಾಣಬಹುದಂತೆ.
https://www.newsics.com/2025/07/16/couple-married-thousands-of-feet-above-sea-level/