newsics.com
ಉದಯಪುರ: ಹಾವಿನ ಕಡಿತಕ್ಕೆ ಒಳಗಾದ ವ್ಯಕ್ತಿಯೊಬ್ಬರು ತಮಗೆ ಕಚ್ಚಿದ ಹಾವನ್ನೇ ಹಿಡಿದುಕೊಂಡು ಆಸ್ಪತ್ರೆಗೆ ಬಂದಿರುವ ಘಟನೆರಾಜಸ್ಥಾನದ ಉದಯಪುರದ ಖಾಂಜಿಪುರ್ ಪ್ರದೇಶದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆತಂಕಗೊಳ್ಳುವ ಬದಲು, ಆ ವ್ಯಕ್ತಿ ತಾಳ್ಮೆಯಿಂದ ಹಾವನ್ನು ಚೀಲವೊಂದರಲ್ಲಿ ಇಟ್ಟುಕೊಂಡು ಆಸ್ಪತ್ರೆಗೆ ಬಂದಿದ್ದಾರೆ. ವೈದ್ಯರನ್ನು ಕಂಡ ತಕ್ಷಣ, ಇದೇ ನನಗೆ ಕಚ್ಚಿದ ಹಾವು, ದಯವಿಟ್ಟು ಬೇಗ ಚಿಕಿತ್ಸೆ ನೀಡಿ ಎಂದು ಹೇಳಿದ್ದಾರೆ. ಈ ಅಸಾಮಾನ್ಯ ದೃಶ್ಯಾವಳಿ ವಿಡಿಯೋದಲ್ಲಿ ಸೆರೆಯಾಗಿದೆ.
ವೈದ್ಯರು ತಕ್ಷಣವೇ ವ್ಯಕ್ತಿಗೆ ವಿಷ ನಿರೋಧಕ (ಆಂಟಿ-ವೆನಮ್) ಚುಚ್ಚುಮದ್ದನ್ನು ನೀಡಿ ಚಿಕಿತ್ಸೆ ಪ್ರಾರಂಭಿಸಿದರು. ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಬಂದಿದ್ದರಿಂದಲೇ ಅವರ ಪ್ರಾಣ ಉಳಿದಿದೆ ಎಂದು ವೈದ್ಯರು ತಿಳಿಸಿದ್ದಾರೆ.