newsics.com
ಅಹಮದಾಬಾದ್: ಅಹಮದಾಬಾದ್ನಲ್ಲಿ ಶುಕ್ರವಾರ ಬೆಳಗ್ಗೆ ನಡೆಯುತ್ತಿದ್ದ 148ನೇ ಭಗವಾನ್ ಜಗನ್ನಾಥಜಿಯವರ ಮಹಾ ರಥಯಾತ್ರೆಯಲ್ಲಿ ಅಹಿತಕರ ಘಟನೆ ನಡೆದಿದೆ.
ಮೆರವಣಿಗೆಯ ಭಾಗವಾಗಿದ್ದ ಮೂರು ಆನೆಗಳು ಇದ್ದಕ್ಕಿದ್ದಂತೆ ದಿಕ್ಕಾಪಾಲಾಗಿ ಓಡಿಹೋದವು. ಈ ವೇಳೆ ಆನೆಯೊಂದು ಭಕ್ತರನ್ನು ಅಟ್ಟಾಡಿಸಿದೆ.
ರಥಯಾತ್ರೆಯ ಮಾರ್ಗದಲ್ಲಿ ಆನೆಗಳು ದಿಕ್ಕು ತಪ್ಪಿದಾಗ ಜನರು ಕೂಡ ಭಯದಿಂದ ಓಡಿದರು. ಘಟನೆಯಲ್ಲಿ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ.
ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಪವಿತ್ರ ಪಹಿಂದ್ ಸಮಾರಂಭವನ್ನು ನೆರವೇರಿಸುವ ಮೂಲಕ ಯಾತ್ರೆಗೆ ಚಾಲನೆ ನೀಡಿದ್ದರು. ಮೊದಲ ಬಾರಿಗೆ ಭಗವಂತನಿಗೆ ಗೌರವ ಸಲ್ಲಿಸಲಾಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ, ತಮ್ಮ ಕುಟುಂಬದೊಂದಿಗೆ ಜಮಾಲ್ಪುರ್ ಜಗನ್ನಾಥ ದೇವಸ್ಥಾನದಲ್ಲಿ ಮಂಗಳ ಆರತಿಯಲ್ಲಿ ಭಾಗವಹಿಸಿ, ಭಕ್ತಿಯ ಮೆರುಗು ನೀಡಿದರು.