newsics.com
ಹುಬ್ಬಳ್ಳಿ: ಪತಿ -ಪತ್ನಿಯರ ಜಗಳ ಉಂಡು ಮಲಗೋ ತನಕ ಎನ್ನು ಮಾತು ಇದೆ. ಅದರೆ ಇಲ್ಲಿ ಗಂಡ ಹೆಂಡತಿ ನಡುವಿನ ಕಲಹ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಒಂದೆಡೆ ವರದಕ್ಷಿಣೆ ಕಿರುಕುಳ ನೀಡ್ತಿದ್ದಾನೆ ಎಂದು ಪೊಲೀಸರ ಎದುರು ಪತ್ನಿ ಗೋಳಾಟ ಇನ್ನೊಂದೆಡೆ ಪತ್ನಿ ಪ್ರತಿನಿತ್ಯ ಹೊಡೆಯುತ್ತಾಳೆ ಎಂದು ಪತಿಯ ಕಣ್ಣೀರು ಈ ಘಟನೆಗೆ ಸಾಕ್ಷಿಯಾಗಿದ್ದು ಹುಬ್ಬಳ್ಳಿಯ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಮುಂದೆ ಗೋಳಿಟ್ಟು ಪತಿ ಪನ್ನಿ ಕಣ್ಣೀರು ಹಾಕಿದ್ದಾರೆ.
ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಪತ್ನಿ ಕಣ್ಣೀರು ಹಾಕಿದ ವ್ಯಕ್ತಿಯ ವಿರುದ್ಧವೇ ಆರೋಪ ಮಾಡಿದ್ದಾರೆ. ಕಾರ್ ಶೋರೂಮ್ ನಲ್ಲಿ ಕೆಲಸ ಮಾಡುತ್ತಿರುವ ಹುಬ್ಬಳ್ಳಿಯ ಸಾಧಿಕ್ ನಾಲ್ಕು ವರ್ಷದ ಹಿಂದೆ ಹಾನಗಲ್ ಮೂಲದ ಆಸೀಯಾಳನ್ನು ಮದುವೆಯಾಗಿದ್ದನು. ಕೆಲ ದಿನಗಳ ಕಾಲ ಸಂಸಾರ ಚೆನ್ನಾಗಿಯೇ ಇತ್ತು. ಬಳಿಕ ದಂಪತಿಯ ನಡುವೆ ವಿರಸ ಹೆಚ್ಚಳವಾಗಿ ಇಬ್ಬರ ನಡುವೆ ಪ್ರತಿನಿತ್ಯ ಜಗಳ ಆರಂಭವಾಗುತ್ತದೆ.
ಕಳೆದ ಎರಡು ವರ್ಷಗಳಿಂದ ಪತಿ-ಪತ್ನಿ ಬೇರೆಯಾಗಿಯೇ ವಾಸ ಮಾಡುತ್ತಿದ್ದು, ತವರು ಮನೆಗೆ ಹೋಗಿ ಹೆತ್ತವರ ಜೊತೆ ಆಸೀಯಾ ಮಾಸ ಮಾಡ್ತಾ ಇದ್ದಾರೆ. ಇದೀಗ ಆಸೀಯಾ ಮಹಿಳಾ ಠಾಣೆ ಮೆಟ್ಟಿಲೇರಿದ್ದು, ಸಾದೀಕ್ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿ, ತನಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ.
ಸಾಧಿಕ್ನನ್ನು ಸಮಾಧಾನಪಡಿಸಿದ ಎನ್ ಶಶಿಕುಮಾರ್
ಪತ್ನಿಯ ದೂರಿನ ಅನ್ವಯ ಸಾಧಿಕ್ನನ್ನು ಪೊಲೀಸರು ಠಾಣೆಗೆ ಬರಲು ಸೂಚನೆ ನೀಡಿದ್ದರು.
ನನ್ನ ಮೇಲೆ ಹಲ್ಲೆ ಮಾಡಲು ಪತ್ನಿ ಕಡೆಯವರು ರೌಡಿಗಳಿಗೆ ಹೇಳಿದ್ದಾರೆ. ತನಗೆ ಸೂಕ್ತ ರಕ್ಷಣೆ ಬೇಕು ಅಂತ ಸಾಧಿಕ್ ಗೋಳಿಟ್ಟಿದ್ದಾನೆ. ಆತನನ್ನು ಸಮಾಧಾನ ಮಾಡಲು ಪೊಲೀಸ್ ಕಮಿಶನರ್ ಶಶಿಕುಮಾರ್ ಹೈರಾಣಾಗಿದ್ದಾರೆ. ಆದ್ರೆ, ಇದಕ್ಕೆ ವಿರುದ್ಧವಾಗಿ ಆಸೀಯಾ ಪತಿ ಮತ್ತು ಪತಿಯ ಮನೆಯವರು ತನಗೆ ಸಾಕಷ್ಟು ಕಿರುಕುಳ ನೀಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.