newsics.com
ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಹಾರಾಟದ ಸಾಮರ್ಥ್ಯ ಪ್ರದರ್ಶಿಸುವ ಗುರಿ ಹೊಂದಿರುವ ಗಗನ್ಯಾನ್ ಮಿಷನ್ ಈಗ ಒಂದೆರಡು ವರ್ಷಗಳಿಂದ ಕಾರ್ಯನಿರತವಾಗಿದೆ ಎಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಕ್ಷುದ್ರಗ್ರಹ ದಿನವನ್ನು ಆಚರಿಸುವ ಕಾರ್ಯಕ್ರಮ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಜಿ-1 ಮಾನವರಹಿತ ಮಿಷನ್ ಈ ವರ್ಷದ ಅಂತ್ಯದ ವೇಳೆಗೆ ಉಡಾವಣೆಗೆ ಸಿದ್ಧವಾಗುತ್ತಿದೆ. ಸಿಬ್ಬಂದಿ ಮಾಡ್ಯೂಲ್ ತಯಾರಿಯಲ್ಲಿದೆ ಎಂದಿದ್ದಾರೆ.
ಈ ವರ್ಷ, ನಾಲ್ಕು ಪ್ರಯೋಗಗಳು ಪ್ರಾಯೋಗಿಕ ಹಂತದಲ್ಲಿವೆ. ಉಪ ಮಾಡ್ಯೂಲ್ ಕಳುಹಿಸಿ, ಕೆಲವು ದಿನಗಳ ಕಾಲ ಕಕ್ಷೆಯಲ್ಲಿ ಇರಿಸಿ ಡಿಸೆಂಬರ್ ನಲ್ಲಿ ಭೂಮಿಗೆ ತರುವ ಯೋಜನೆಯಿದೆ ಎಂದರು.
ಸುನಿತಾ ವಿಲಿಯಮ್ಸ್ ಮತ್ತು ಬೋಯಿಂಗ್ ಸ್ಟಾರ್ಲೈನರ್ ಅವರ ಗಗನಯಾನದ ಅಸಮರ್ಪಕತೆ ಬಗ್ಗೆ ಮಾತನಾಡಿದ ಅವರು, ಹೀಲಿಯಂ ಮತ್ತು ಥ್ರಸ್ಟ್ ಸಮಸ್ಯೆಗಳಿಂದಾಗಿ ಬಾಹ್ಯಾಕಾಶದಲ್ಲಿ ತಾಂತ್ರಿಕ ಸಮಸ್ಯೆಯಾಗಿದೆ. ನಾವು ಗಗನ್ಯಾನ್ ಮಿಷನ್ ಪ್ರಾರಂಭಿಸಿದಾಗ ಮತ್ತು ಸಿಬ್ಬಂದಿ ಮಾಡ್ಯೂಲ್ ಕಳುಹಿಸಿದಾಗ ಯಾವುದೇ ಅನಿಶ್ಚಿತತೆಗಳಿರಲಿಲ್ಲ ಎಂದು ತಿಳಿಸಿದರು.
ಭೂಮಿಯ ನೈಸರ್ಗಿಕ ಪ್ರಕ್ರಿಯೆಗಳನ್ನು ಅಧ್ಯಯನ ಮಾಡಲು ಮತ್ತು ಅರ್ಥಮಾಡಿಕೊಳ್ಳಲು ಸಹಾಯ ಮಾಡಲು ನಾಸಾ-ಇಸ್ರೋದ ಸಿಂಥೆಟಿಕ್ ಅಪರ್ಚರ್ ರಾಡಾರ್ ಮಿಷನ್ ಆಗಸ್ಟ್ ಅಂತ್ಯದಲ್ಲಿ ಅಥವಾ ಸೆಪ್ಟೆಂಬರ್ ಆರಂಭದಲ್ಲಿ ಉಡಾವಣೆಯಾಗಲಿದೆ, ಅದಕ್ಕೆ ರಾಕೆಟ್ ಸಿದ್ಧವಾಗಿದೆ ಎಂದು ಸೋಮನಾಥ್ ಮಾಹಿತಿ ನೀಡಿದರು.
ರಾಜ್ಯಾದ್ಯಂತ ವ್ಯಾಪಕ ಮಳೆ: ಫಾಲ್ಸ್ಗಳಿಗೆ ಪ್ರವೇಶ ನಿರ್ಬಂಧ, ಅಪಾಯ ಮಟ್ಟದಲ್ಲಿ ಕರಾವಳಿ, ಮಲೆನಾಡ ನದಿಗಳು
ಕಂಗನಾ ಕಪಾಳಕ್ಕೆ ಹೊಡೆದಿದ್ದ CISF ಕಾನ್ಸ್ಟೆಬಲ್ ಕೌರ್ ಬೆಂಗಳೂರು ಏರ್ಪೋರ್ಟ್ಗೆ ಟ್ರಾನ್ಸ್ಫರ್