newsics.com
ತುಳಸಿಯು ಹಿಂದೂಗಳಿಗೆ ಅತ್ಯಂತ ಪೂಜ್ಯನೀಯವಾಗಿದ್ದು, ಇದನ್ನು ಬಹಳ ಪವಿತ್ರವೆಂದು ಕರೆಯಲಾಗುತ್ತದೆ. ಮನೆಯಲ್ಲಿ ತುಳಸಿ ಬೆಳೆಯುವುದರಿಂದ ಸೌಂದರ್ಯದ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ತುಳಸಿ ಒಂದು ಪವಿತ್ರವಾದ ಸಸ್ಯ. ಹಾಗಾಗಿ ಎಲ್ಲಿ ತುಳಸಿ ಇರುತ್ತದೆಯೋ ಅಲ್ಲಿ ಪಾವಿತ್ರ್ಯತೆ ಕಾಪಾಡಿಕೊಳ್ಳಬೇಕು. ಇಲ್ಲವಾದರೆ ತಾಯಿ ಲಕ್ಷ್ಮೀ ದೇವಿಯ ಮುನಿಸಿಗೆ ಕಾರಣವಾಗುತ್ತದೆ.
ತುಳಸಿ ಗಿಡಕ್ಕೆ ನಾವು ಪೂಜೆ ಸಲ್ಲಿಸುವುದು ವಿಶೇಷ ಧನಾತ್ಮಕ ಶಕ್ತಿಯ ಆಗಮನಕ್ಕೆ ಕಾರಣವಾಗಲಿದೆ. ಹೀಗಾಗಿ ಎಲ್ಲರ ಮನೆಯ ಮುಂದೆ ನಾವು ತುಳಸಿ ಗಿಡ ನೋಡುತ್ತೇವೆ. ಹಾಗೆ ತುಳಸಿ ಗಿಡವನ್ನು ಹೇಗೆ ನೆಡಬೇಕು ಎಂಬ ನಿಯಮಗಳಿವೆ. ಯಾವ ದಿನ ನೆಡಬೇಕು, ಹೇಗೆ ನೆಡಬೇಕು ಎಂಬುದನ್ನು ವಾಸ್ತು ಪ್ರಕಾರವಾಗಿ ಹೇಳಲಾಗಿದೆ.
ತುಳಸಿ ಗಿಡವನ್ನು ಪೂರ್ವ ದಿಕ್ಕಿಗೆ ಮುಖ ಮಾಡಿ ಇರಬೇಕು ಎಂಬ ನಿಯಮವಿದೆ. ಅಥವಾ ನಾವು ಪೂರ್ವಕ್ಕೆ ಮುಖ ಮಾಡಿ ನಿಂತು ಪೂಜೆ ಸಲ್ಲಿಸುವಂತೆ ರಚನೆ ಇರಬೇಕು. ಆದ್ರೆ ಕೆಲವರು ತುಳಸಿಯನ್ನು ಉತ್ತರ ದಿಕ್ಕಿನತ್ತ ಮುಖ ಮಾಡಿ ನಿರ್ಮಿಸಿರುತ್ತಾರೆ. ಈ ರೀತಿಯ ರಚನೆಯಿಂದ ಮನೆಗೆ ಕೆಟ್ಟ ಅನುಭವವಾಗಲಿದೆ. ಹಾಗೆ ಬಡತನ ನಿಮ್ಮನ್ನು ಕಾಡಲಿದೆ ಎಂದು ಹೇಳಲಾಗುತ್ತದೆ.
ತುಳಸಿ ಗಿಡದ ಬಳಿ ಯಾವುದೇ ಮುಳ್ಳಿನ ಗಿಡಗಳನ್ನು ನೆಡಬಾರದು. ಇದರಿಂದ ಮನೆಯೊಳಗೆ ನೆಗೆಟಿವ್ ಎನರ್ಜಿ ಹರಿಯಲು ಕಾರಣವಾಗುತ್ತದೆ
ತುಳಸಿ ಗಿಡದ ಬಳಿ ಅಥವಾ ಸುತ್ತ ಮುತ್ತ ಗಲೀಜು ಇರದಂತೆ ನೋಡಿಕೊಳ್ಳಬೇಕು. ತುಳಸಿಯ ಸುತ್ತ ನಿತ್ಯ ಶುಚಿಗೊಳಿಸುತ್ತಾ ಇರಬೇಕು.ಅಲ್ಲಿ ಕಸ ಕಡ್ಡಿ ಬೀಳದಂತೆ ನೋಡಿಕೊಳ್ಳಬೇಕು.
ತುಳಸಿ ಇರುವಲ್ಲಿ ಶೂ ಮತ್ತು ಚಪ್ಪಲಿಗಳನ್ನು ಬಿಡಬಾರದು. ತುಳಸಿ ಬಳಿ ಶೂ, ಚಪ್ಪಲಿ ಬಿಡುವುದರಿಂದ ಆರೋಗ್ಯ ಸಮಸ್ಯೆ ಕಾಡುತ್ತದೆ. ತುಳಸಿ ಗಿಡದ ಬಳಿ ಪೊರಕೆ ಇಡಬಾರದು. ಪೊರಕೆಯನ್ನು ತುಳಸಿ ಬಳಿ ಇಡುವುದರಿಂದ ಮನೆಯಲ್ಲಿ ಬಡತನ ತಾಂಡವವಾಡುತ್ತದೆ.
https://www.newsics.com/2025/04/17/ukraine-moves-to-legalize-blue-film-viewing-and-filming/