newsics.com
ನಿಸರ್ಗದ ಮಡಿಲಿನಿಂದ ಸಿಗುವ ಪ್ರತಿಯೊಂದು ಆಹಾರ ಕೂಡ ನಮಗೆ ಉತ್ತಮ ಆರೋಗ್ಯವನ್ನು ದಯಪಾಲಿಸುತ್ತದೆ. ಯಾವುದೇ ತರಹದ ಅಡ್ಡ ಪರಿಣಾಮಗಳು ಎದುರಾಗುವುದಿಲ್ಲ. ಒಂದು ವೇಳೆ ಆದರೂ ತುಂಬಾ ಕಡಿಮೆ. ಊಟ ಆದ ತಕ್ಷಣ ಪ್ರತಿಯೊಬ್ಬರೂ ಎಲೆ ಅಡಿಕೆ ಹಾಕಿಕೊಳ್ಳಬೇಕು ಎಂದು ಹೇಳುತ್ತಾರೆ. ಇನ್ನೂ ನಾವು ವೀಳ್ಯದೆಲೆಯನ್ನ ಪೂಜೆ ಮಾಡಲು ಬಳಸುತ್ತೇವೆ. ಆದರೆ ನಿಮಗೆ ಗೊತ್ತಾ ಈ ವೀಳ್ಯದೆಲೆಯನ್ನ ಬಳಸಿ ಕೆಲ ಪರಿಹಾರ ಮಾಡುವುದರಿಂದ ನಮ್ಮ ಕಷ್ಟಗಳಿಗೆ ಮುಕ್ತಿ ಸಿಗುತ್ತದೆ.
ವಿವಿಧ ಪ್ರಾಮುಖ್ಯತೆಯನ್ನು ಹೊಂದಿರುವ ಅನೇಕ ವಸ್ತುಗಳನ್ನು ಪೂಜೆಯಲ್ಲಿ ಬಳಸಲಾಗುತ್ತದೆ. ಕೆಲವು ಹೂವುಗಳು ಮತ್ತು ಎಲೆಗಳು ಇಲ್ಲದೇ ಯಾವುದೇ ಆಚರಣೆಯನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ವೀಳ್ಯದೆಲೆಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ವೀಳ್ಯದೆಲೆಯ ಬಳಕೆಯನ್ನು ವಿಶೇಷವಾಗಿ ಲಕ್ಷ್ಮಿ ಪೂಜೆಯ ಸಮಯದಲ್ಲಿ ಅತ್ಯಗತ್ಯವೆಂದು ಪರಿಗಣಿಸಲಾಗುತ್ತದೆ.
ಮಂಗಳವಾರ ಅಥವಾ ಶನಿವಾರದಂದು ಹನುಮಂತನಿಗೆ ವೀಳ್ಯದೆಲೆಯನ್ನ ಅರ್ಪಣೆ ಮಾಡಬೇಕು. ಹನುಮಂತನಿಗೆ ವೀಳ್ಯದೆಲೆ ಎಂದರೆ ತುಂಬಾ ಇಷ್ಟ ಎನ್ನಲಾಗುತ್ತದೆ. ಆದ್ದರಿಂದ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಪರಿಹಾರವನ್ನು ಮಾಡುವುದರಿಂದ, ನಿಮ್ಮ ಕೆಲಸದಲ್ಲಿ ಬಹಳ ದಿನಗಳಿಂದ ಬರುತ್ತಿದ್ದ ಅಡೆತಡೆಗಳು ದೂರವಾಗುತ್ತವೆ ಮತ್ತು ನೀವು ಬಯಸಿದ ಯಶಸ್ಸನ್ನು ಪಡೆಯುತ್ತೀರಿ. ಅಲ್ಲದೇ, ಕೆಲಸದಲ್ಲಿ ಅನೇಕ ಅವಕಾಶಗಳು ಸಹ ಸಿಗುತ್ತದೆ.
ಲಕ್ಷ್ಮಿ ದೇವಿಗೆ ವೀಳ್ಯದೆಲೆ ಬಹಳ ಪ್ರಿಯವಾದುದು ಎನ್ನಲಾಗುತ್ತದೆ. ಹಾಗಾಗಿ. ಹೋಳಿಕಾ ದಹನದ ದಿನದಂದು 7 ವೀಳ್ಯದೆಲೆಗಳನ್ನು ತೆಗೆದುಕೊಂಡು ಬೆಂಕಿಯನ್ನ 7 ಬಾರಿ ಪ್ರದಕ್ಷಿಣೆ ಹಾಕಬೇಕು. ಪ್ರತಿ ಸುತ್ತಿನ ನಂತರ ಬೆಂಕಿಗೆ ವೀಳ್ಯದೆಲೆ ಹಾಕಿ. ಹೀಗೆ ಏಳು ಬಾರಿ ಪ್ರದಕ್ಷಿಣೆ ಮಾಡುವಾಗ ಏಳು ಎಲೆಗಳನ್ನು ಅರ್ಪಿಸಿ. ಲಕ್ಷ್ಮಿ ದೇವಿಯು ಇದರಿಂದ ಸಂತುಷ್ಟಳಾಗಿ ಸಮೃದ್ಧಿ ಹಾಗೂ ಸಂತೋಷವನ್ನ ನೀಡುತ್ತಾಳೆ ಎನ್ನುವ ನಂಬಿಕೆ ಇದೆ.
https://www.newsics.com/2025/04/09/rbi-rbi-repo-cut-for-the-second-time-interest-rates-cut/