newsics.com
ಬೆಂಗಳೂರು: ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಮೂರು ದಿನಗಳ ರಜೆ ಇದೆ ಎಂದು ಊರಿನ ಕಡೆ ಹೋಗಲು ಸಜ್ಜಾದವರಿಗೆ ಖಾಸಗಿ ಬಸ್ ದರ ಏರಿಕೆ ಶಾಕ್ ಎದುರಾಗಿದೆ.
ಮಾರ್ಚ್- 29 ಯುಗಾದಿ ಹಬ್ಬದ ಅಮಾವಾಸ್ಯೆ ಭಾನುವಾರ ಚಾಂದ್ರಮಾನ ಯುಗಾದಿ, ಸೋಮವಾರ ರಂಜಾನ್, ಹೀಗೆ ಒಟ್ಟು ಮೂರು ದಿನಗಳ ಕಾಲ ರಜೆ ಸಿಗುತ್ತದೆ. ಹೀಗಾಗಿ ಮಾರ್ಚ್ 28 ರ ಶುಕ್ರವಾರ ರಾತ್ರಿ ಊರಿಗೆ ತೆರಳಲು ಜನರು ಪ್ಲಾನ್ ಮಾಡುತ್ತಿದ್ದಾರೆ. ಆದರೆ ಖಾಸಗಿ ಬಸ್ ಗಳಲ್ಲಿ ದುಪ್ಪಟ್ಟು ದರ ಏರಿಕೆ ಮಾಡಲಾಗಿದೆ.
ಯಾವ ಊರಿಗೆ ಎಷ್ಟು ಬಸ್ ಟಿಕೆಟ್ ದರ?
ಬೆಂಗಳೂರು-ದಾವಣಗೆರೆ
- ಪ್ರಸ್ತುತ ದರ = 450-1300
- ಹಬ್ಬದ ದರ = 750-5500
ಬೆಂಗಳೂರು-ಧಾರವಾಡ
- ಪ್ರಸ್ತುತ ದರ = 600-1100
- ಹಬ್ಬದ ದರ = 1069-5500
ಬೆಂಗಳೂರು – ಹುಬ್ಬಳ್ಳಿ
- ಪ್ರಸ್ತುತ ದರ=475-1100
- ಹಬ್ಬದ ದರ=1200-4200
ಬೆಂಗಳೂರು-ಬೆಳಗಾವಿ
- ಪ್ರಸ್ತುತ ದರ=389-1200
- ಹಬ್ಬದ ದರ=1129-5500
ಬೆಂಗಳೂರು-ಮಂಗಳೂರು
- ಪ್ರಸ್ತುತ ದರ=650-1300
- ಹಬ್ಬದ ದರ=1200-4500
ಬೆಂಗಳೂರು-ಕಲ್ಬುರ್ಗಿ
- ಪ್ರಸ್ತುತ ದರ=750-1000
- ಹಬ್ಬದ ದರ=1200-2200
ಬೆಂಗಳೂರು-ರಾಯಚೂರು
- ಪ್ರಸ್ತುತ ದರ=650-990
- ಹಬ್ಬದ ದರ=1100-2990
ಬೆಂಗಳೂರು-ಹಾಸನ
- ಪ್ರಸ್ತುತ ದರ=463-1000
- ಹಬ್ಬದ ದರ=750-1600
ಬೆಂಗಳೂರು-ಯಾದಗಿರಿ
- ಪ್ರಸ್ತುತ ದರ=699-900
- ಹಬ್ಬದ ದರ=1300-2200
ಬೆಂಗಳೂರು-ಶಿವಮೊಗ್ಗ
- ಪ್ರಸ್ತುತ ದರ =500-990
- ಹಬ್ಬದ ದರ =1199-1800
ಈ ಕುರಿತು ಮಾತನಾಡಿದ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ, ನಾವು ಟಿಕೆಟ್ ದರ 50 ರಿಂದ 60 ರಷ್ಟು ಮಾತ್ರ ಟಿಕೆಟ್ ದರ ಏರಿಕೆ ಮಾಡಿದ್ದೇವೆ . ಶಕ್ತಿ ಯೋಜನೆಯಿಂದ ಖಾಸಗಿ ಬಸ್ ಗಳಿಗೆ ಭಾರಿ ಹೊಡೆತ ಬಿದ್ದಿದೆ ಎಂದು ಹೇಳಿದ್ದಾರೆ.
ಈ ಬಾರಿಯ ಯುಗಾದಿ-ರಂಜಾನ್ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಖಾಸಗಿ ಬಸ್ಸುಗಳು ದುಪ್ಪಟ್ಟು ದರ ಏರಿಕೆ ಮಾಡಿ ಪ್ರಯಾಣಿಕರಿಗೆ ಶಾಕ್ ಕೊಟ್ಟಿದ್ದಾರೆ.