newsics.com
ಮುಂಬಯಿ: ಷೇರು ಮಾರುಕಟ್ಟೆಯಲ್ಲಿ ವಂಚನೆ ಹಾಗೂ ಕೆಲವು ನಿಯಂತ್ರಕ ಕ್ರಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಸೆಬಿ ಮಾಜಿ ಮುಖ್ಯಸ್ಥೆ ಮಾಧವಿ ಪುರಿ ಬುಚ್ ಅವರು ಹಾಗೂ ಇತರ ಐವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ವಿಶೇಷ ನ್ಯಾಯಾಲಯವು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ನಿರ್ದೇಶಿಸಿದೆ.
ಸೆಬಿ ಮುಖ್ಯಸ್ಥರಾಗಿ ಮಾಧವಿ ಪುರಿ ಬುಚ್ ಅವರ ಅಧಿಕಾರವಧಿ ಶನಿವಾರವಷ್ಟೇ ಮುಗಿದಿದೆ. ಈ ಬೆನ್ನಲ್ಲೆ ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರ್ಟ್ ನಿರ್ದೇಶನ ನೀಡಿರುವುದು ಕಾಕತಾಳೀಯ. ”ಸೆಬಿ ಮಾಜಿ ಮುಖ್ಯಸ್ಥರು ಹಾಗೂ ಇತರ ಅಧಿಕಾರಿಗಳ ವಿರುದ್ಧದ ಆರೋಪಗಳು ಗುರುತಿಸಬಹುದಾದ ಅಪರಾಧದ ಸುಳಿವು ನೀಡುತ್ತಿದ್ದು, ತನಿಖೆಯ ಅಗತ್ಯವಿದೆ,” ಎಂದು ಕೋರ್ಟ್ ಹೇಳಿದೆ.
ಮಾಧವಿ ಬುಚ್ ಅವರಷ್ಟೇ ಅಲ್ಲದೇ ಮುಂಬಯಿ ಷೇರು ವಿನಿಮಯ ಕೇಂದ್ರದ (ಬಿಎಸ್ಇ) ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಸುಂದರರಾಮನ್ ರಾಮಮೂರ್ತಿ, ಬಿಎಸ್ಇ ಅಂದಿನ ಪಬ್ಲಿಕ್ ಇಂಟರೆಸ್ಟ್ ಡೈರೆಕ್ಟರ್ ಪ್ರಮೋದ್ ಅಗರ್ವಾಲ್, ಸೆಬಿಯ ಕಾಯಂ ಸದಸ್ಯರಾದ ಅಶ್ವನಿ ಭಾಟಿಯಾ, ಅನಂತ್ ನಾರಾಯಣನ್ ಜಿ ಮತ್ತು ಕಮಲೇಶ್ ಚಂದ್ರ. ವಿ ಅವರ ವಿರುದ್ಧವೂ ಎಫ್ಐಆರ್ ದಾಖಲಿಸುವಂತೆ ಕೋರ್ಟ್ ನಿರ್ದೇಶನ ನೀಡಿದೆ.