newsics.com
ಚಿಕ್ಕಮಗಳೂರು: ಕಾಫಿ ತೋಟದಲ್ಲಿ ಬೇಟೆಗಾರರು ಹಾಕಿದ್ದ ಉರುಳಿಗೆ ಸಿಲುಕಿದ ಚಿರತೆಯನ್ನು ಸಾವಿನಿಂದ ಕಾಪಾಡಲು ನಡೆಸಿದ ಹರಸಾಹಸ ಫಲಿಸಲಿಲ್ಲ. ಕೊನೆಗೂ ಚಿರತೆ ಬದುಕುಳಿಯಲಿಲ್ಲ.
ಮೂಡಿಗೆರೆ ತಾಲ್ಲೂಕಿನ ಬಾಳೂರು ಸಮೀಪದ ಕಾಫಿ ತೋಟವೊಂದರಲ್ಲಿ ಈ ಘಟನೆ ನಡೆದಿದೆ.
ಕಾಡುಹಂದಿ ಬೇಟೆಗೆ ಉರುಳು ಹಾಕಿದ್ದ ಬೇಟೆಗಾರರು ಘಟನೆ ಬಳಿಕ ಪರಾರಿಯಾಗಿದ್ದಾರೆ.
ಮೂಡಿಗೆರೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿದ್ದು, ಚಿರತೆಯನ್ನು ರಕ್ಷಿಸಲು ಶ್ರಮಿಸಿದ್ದರು. ಶಿವಮೊಗ್ಗದಿಂದ ಅರವಳಿಕೆ ತಜ್ಞರನ್ನು ಕರೆಸಲಾಗಿತ್ತು. ಪರಾರಿಯಾದ ಬೇಟೆಗಾರರ ಬಂಧನಕ್ಕಾಗಿ ಕಾರ್ಯಾಚರಣೆ ಆರಂಭಿಸಲಾಗಿದೆ.
ಅಕ್ರಮ ಬೇಟೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
Good news ಪ್ರಯಾಣಿಕರಿಗೆ ಗುಡ್ ನ್ಯೂಸ್: ಸಾರಿಗೆ ಸಂಸ್ಥೆಗಳಿಗೆ 750 ಹೊಸ ಎಲೆಕ್ಟ್ರಿಕ್ ಬಸ್ ಸೇರ್ಪಡೆ
Bear rate hike ಬೆಲೆ ಏರಿಕೆ ಮಾಡಿದ ಸರ್ಕಾರಕ್ಕೆ ಶಾಕ್: ಬಿಯರ್ ಮಾರಾಟ ಕುಸಿತ
Madhubangrappa SSLC ಉತ್ತೀರ್ಣಕ್ಕೆ ಕನಿಷ್ಠ ಶೇ. 35 ಅಂಕ ಕಡ್ಡಾಯ: ಹಿಜಾಬ್ಗೆ ಅವಕಾಶವಿಲ್ಲ?- ಮಧು ಬಂಗಾರಪ್ಪ
Summer ಕರ್ನಾಟಕದಲ್ಲಿ ಬಿಸಿಲಿನ ತಾಪ ಏರಿಕೆ: ಹವಾಮಾನ ಇಲಾಖೆ ಎಚ್ಚರಿಕೆ ಏನು?