newsics.com
ಬೆಂಗಳೂರು: ಕುಂಭಮೇಳದಲ್ಲಿ ಫೋಟೋಗೆ ಪುಣ್ಯಸ್ನಾನ ಮಾಡಿಸುವ ಹೊಸ ದಂಧೆ ಆರಂಭವಾಗಿದೆ. 500 ರೂ. ಶುಲ್ಕ ಪಡೆದು ಭಕ್ತರ ಫೋಟೋಗಳನ್ನು ತ್ರಿವೇಣಿ ಸಂಗಮದಲ್ಲಿ ಮುಳುಗಿಸಿ ಪುಣ್ಯಸ್ನಾನ ಮಾಡಿಸಲಾಗುತ್ತಿದೆ.
ನಿಮ್ಮ ಉತ್ತಮವಾದ ಫೋಟೋವನ್ನು ವಾಟ್ಸಾಪ್ಗೆ ಕಳುಹಿಸಿದರೆ ಅದನ್ನು ಪ್ರಯಾಗ್ರಾಜ್ ಕುಂಭಮೇಳದಲ್ಲಿ ತ್ರಿವೇಣಿ ಸಂಗಮದಲ್ಲಿ ಮುಳುಗಿಸಿ ಪುಣ್ಯಸ್ನಾನ ಮಾಡಿಸುವ ಮೂಲಕ ಪುಣ್ಯ ಸಿಗುವಂತೆ ಮಾಡಲಾಗುವುದು ಎಂದು ಜಾಹೀರಾತು ಹರಿದಾಡುತ್ತಿದೆ. ಅದಕ್ಕೆ 500 ರೂ. ಶುಲ್ಕವನ್ನೂ ವಸೂಲಿ ಮಾಡಲಾಗುತ್ತದೆ. ಸದ್ಯ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ ಆಗುತ್ತಿವೆ.
ಜಾಗತಿಕವಾಗಿ 144 ವರ್ಷಗಳಿಗೊಮ್ಮೆ ಬರುವ ದೈವಿಕ ಮಹಾಕುಂಭ ಸ್ನಾನಕ್ಕೆ ಇದು ನಿಮ್ಮ ಕೊನೆಯ ಅವಕಾಶ ತಪ್ಪಿಸಿಕೊಳ್ಳಬೇಡಿ. ನಿಮ್ಮ ಫೋಟೋವನ್ನು, ವಾಟ್ಸಾಪ್ ಮೂಲಕ ನಮಗೆ ಕಳುಹಿಸಿ. ನಾವು ನಿಮ್ಮ ಫೋಟೋದ ಕಾಪಿಯನ್ನು ತೆಗೆದುಕೊಳ್ಳುತ್ತೇವೆ. ಮತ್ತು ನಿಮ್ಮ ಫೋಟೋದೊಂದಿಗೆ ಪವಿತ್ರ ನೀರಿನಲ್ಲಿ ಸ್ನಾನ ಮಾಡುತ್ತೇವೆ ಎಂದು ಹೇಳಿದ್ದಾರೆ.
ಮುಂದುವರೆದು ಫೋಟೋಗೆ ಪುಣ್ಯಸ್ನಾನ ಮಾಡಿಸುವುದರಿಂದ ಹಲವು ಪ್ರಯೋಜನಗಳು ಸಿಗುತ್ತವೆ ಎಂದೂ ಹೇಳಿದ್ದಾರೆ. ಅವರು ಹೇಳುವಂತೆ ನಿಮ್ಮ ಫೋಟೋಗೆ ಪುಣ್ಯಸ್ನಾನ ಮಾಡಿಸುವುದರಿಂದ ನಿಮ್ಮ ಆತ್ಮ ಶುದ್ಧೀಕರಣ ಆಗುತ್ತದೆ. ನೀವು ದೈವಿಕ ಆಶೀರ್ವಾದವನ್ನು ಪಡೆಯುತ್ತೀರಿ. ಮಹಾಕುಂಭದಲ್ಲಿ ಸ್ನಾನ ಮಾಡಿದ್ದಕ್ಕಾಗಿ ನಿಮ್ಮ ಪೂರ್ವಜರು ನಿಮ್ಮನ್ನು ಆಶೀರ್ವದಿಸುತ್ತಾರೆ. ಈ ಕ್ಷಣ ನಿಮ್ಮ ಜೀವಿತಾವಧಿಯಲ್ಲಿ ಮತ್ತೆ ಬರುವುದಿಲ್ಲ. ಕೇವಲ ರೂ. 500 ಮಾತ್ರ ಎಂದು ಜಾಹೀರಾತು ಒಂದನ್ನು ಹಂಚಿಕೊಂಡಿದ್ದಾರೆ. ಇದಕ್ಕಾಗಿ ಸಂಪರ್ಕ ಮಾಡಲು ಮೊಬೈಲ್ ಸಂಖ್ಯೆ 8169695760 ಕೊಟ್ಟಿದ್ದಾರೆ.