newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಇಂದಿನ ಪಂಚಾಂಗ
ಮಾಘ ಮಾಸ ಶುಕ್ಲ ಪಕ್ಷ ಹುಣ್ಣಿಮೆ
12-2-2024, ಬುಧವಾರ
# ಕುಂಭ ಸಂಕ್ರಮಣ
# ಮಾಘ ಹುಣ್ಣಿಮೆ ವ್ರತ
# ಸವದತ್ತಿ ಯಲ್ಲಮ್ಮ ಜಾತ್ರೆ, ಬೆಳಗಾವಿ
# ಗುರು ರವಿದಾಸ ಜಯಂತಿ
—
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ಉತ್ತರಾಯಣ
ದಿನಾಂಕ – 12/02/2025
ತಿಂಗಳು – ಫೆಬ್ರವರಿ
ಬಣ್ಣ – ಹಸಿರು
ವಾರ – ಬುಧವಾರ
ತಿಥಿ – ಹುಣ್ಣುಮೆ 19:22:17
ಪಕ್ಷ – ಶುಕ್ಲ
ನಕ್ಷತ್ರ – ಆಶ್ಲೇಷ 19:34:26
ಯೋಗ – ಸೌಭಾಗ್ಯ 08:05:35
ಕರಣ – ವಿಷ್ಟಿ (ಭದ್ರ) 07:04:48
ಕರಣ – ಭವ 19:22:17
ತಿಂಗಳು (ಅಮಾವಾಸ್ಯಾಂತ್ಯ) ಮಾಘ
ತಿಂಗಳು (ಹುಣ್ಣಿಮಾಂತ್ಯ) ಮಾಘ
ಚಂದ್ರ ರಾಶಿ ಕರ್ಕಾಟಕ till 19:34:26
ಚಂದ್ರ ರಾಶಿ ಸಿಂಹ from 19:34:26
ಸೂರ್ಯ ರಾಶಿ ಮಕರ till 21:54:29
ಸೂರ್ಯ ರಾಶಿ ಕುಂಭ from 21:54:29
ಋತು ಶಿಶಿರ
ಸೂರ್ಯೋದಯ 06:44:17
ಸೂರ್ಯಾಸ್ತ 18:23:32
ಹಗಲಿನ ಅವಧಿ 11:39:15
ರಾತ್ರಿಯ ಅವಧಿ 12:20:23
ಚಂದ್ರೋದಯ 18:20:17
ಚಂದ್ರಾಸ್ತ 31:03:54*
ರಾಹು ಕಾಲ 12:34 – 14:01 ಅಶುಭ
ಯಮಘಂಡ ಕಾಲ 08:12 – 09:39 ಅಶುಭ
ಗುಳಿಕ ಕಾಲ 11:07 – 12:34
ಅಭಿಜಿತ್ 12:11 – 12:57 ಅಶುಭ
ದುರ್ಮುಹೂರ್ತ 12:11 – 12:57 ಅಶುಭ
—
ಇಂದಿನ ಮಾತು
ಸೂರ್ಯ ಜಗದ ಕತ್ತಲೆ ಕಳೆದರೆ, ಜ್ಞಾನ ಬದುಕಿನ ಕತ್ತಲೆ ಕಳೆಯುತ್ತದೆ.
—
ಇಂದಿನ ಸುಭಾಷಿತ
ಯೋ ನ ದದಾತಿ ನ ಭುಂಕ್ತೇ ಸತಿ
ವಿಭವೇ ನೈವ ತಸ್ಯ ತದ್ದ್ರವ್ಯಂ |
ತೃಣಮಯಕೃತ್ರಿಮಪುರುಷೋ
ರಕ್ಷತಿ ಸಸ್ಯಂ ಪರಸ್ಯಾರ್ಥೇ ||
(ಶಾರ್ಙ್ಗಧರ ಪದ್ಧತಿ)
ಸಿರಿವಂತಿಕೆ ಇದ್ದರೂ ಯಾವನು ದಾನವನ್ನೂ ಮಾಡದೆ ತಾನೂ ಉಪಯೋಗಿಸದೆ ಇರುತ್ತಾನೋ ಅಂಥವನ ಹಣವು ಖಂಡಿತವಾಗಿಯೂ ಅವನದಲ್ಲ. ಹೊಲಗದ್ದೆಗಳಲ್ಲಿ ಹುಲ್ಲಿನಿಂದ ತಯಾರಿಸಲ್ಪಟ್ಟ ಮನುಷ್ಯಾಕೃತಿಯು ಬೇರೆಯವರಿಗಾಗಿ ಸಸ್ಯವನ್ನು ಕಾಪಾಡುವಂತೆ ಅವನು ತನ್ನ ದ್ರವ್ಯವನ್ನು ಬೇರೆಯವರಿಗಾಗಿ ಕಾಪಾಡುತ್ತಿರುತ್ತಾನೆ.
—
ಇಂದಿನ ಪದಾರ್ಥ
ಅಜಾಗರ = Not awake,
ಅಜಾಜೀವ = Who lives by goats, a goat head
—
ಇಂದಿನ ಓದು
ಓಂ ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭುಃ |
ಭೂತಕೃದ್ಭೂತಭೃದ್ಭಾವೋ ಭೂತಾತ್ಮಾ ಭೂತಭಾವನಃ ||1||
5.ಭೂತಕೃತ್
ಸಂಸ್ಕೃತದಲ್ಲಿ ಕೃತ್ ಅನ್ನುವ ಪದಕ್ಕೆ ಎರಡು ಅರ್ಥವಿದೆ.
೧. ಸೃಷ್ಟಿ
೨. ಸಂಹಾರ
ಅದೇ ರೀತಿ ಭೂತಗಳಲ್ಲಿ ಎರಡು ವಿಧ
೧. ಅಚೇತನ ಭೂತ ಅಂದರೆ ಪಂಚಭೂತಗಳು (ಮಣ್ಣು, ಬೆಂಕಿ, ನೀರು, ಗಾಳಿ ಮತ್ತು ಆಕಾಶ)
೨. ಚೇತನ ಭೂತ ಅಂದರೆ ಪಂಚಭೂತಗಳಿಂದ ಆದ ಜೀವಗಳು.
ಭೂತಕೃತ್ (ಸೃಷ್ಟಿ) ಅಂದರೆ ಪಂಚಭೂತಗಳ ಸೃಷ್ಟಿಕರ್ತ, ಪಂಚಭೂತಾತ್ಮಕವಾದ ಬ್ರಹ್ಮಾಂಡದ ಸೃಷ್ಟಿಕರ್ತ. ಬ್ರಹ್ಮಾಂಡದಲ್ಲಿ ಪಂಚಭೂತಗಳಿಂದಾದ ಪಿಂಡಾಂಡ ಸೃಷ್ಟಿ ಮಾಡಿದವ, ಪಿಂಡಾಂಡದಲ್ಲಿ ಜೀವವನ್ನು ಇರಿಸಿ ದೇಹ ಸೃಷ್ಟಿ ಮಾಡಿದವ ಮತ್ತು ಸಾಧನೆ ಮೂಲಕ ಜೀವರಿಗೆ ಮುಕ್ತಿಯನ್ನು ಕರುಣಿಸುವವ.
ಭೂತಕೃತ್ (ಸಂಹಾರ) ಅಂದರೆ ದೇಹ ನಾಶದ ಮೂಲಕ ಜೀವರನ್ನು ನಾಶ ಮಾಡುವವ, ಅಭಿವೃದ್ಧಿ ಹೊಂದದ ತಾಮಸ ಜೀವರನ್ನು ನಾಶ ಮಾಡುವವ, ಪಂಚಭೂತಾತ್ಮಕವಾದ ಶರೀರ ನಾಶ ಮಾಡುವವ, ಪಂಚಭೂತಾತ್ಮಕವಾದ ಬ್ರಹ್ಮಾಂಡ ನಾಶ ಮಾಡಿದವ, ಪ್ರಳಯ ಕಾಲದಲ್ಲಿ ಪಂಚಭೂತಗಳನ್ನೂ ನಾಶ ಮಾಡುವವ.
🌷🌺🙏🌺🌷