newsics.com
ದೆಹಲಿ: ದೆಹಲಿ ವಿಧಾನಸಭಾ ಎಲೆಕ್ಷನ್ ರಿಸಲ್ಟ್ ಬಂದಿದೆ. ಆಪ್ ಅಧಿಕಾರ ಕಳೆದುಕೊಂಡಿದ್ದು, ಕಾಂಗ್ರೆಸ್ ಸೋತು ಸುಣ್ಣವಾಗಿದೆ. ಬಿಜೆಪಿ ಸರ್ಕಾರ ರಚನೆ ಕಸರತ್ತು ಆರಂಭಿಸಿದ್ದು, ಈ ನಡುವೆ ಸಿಎಂ ಅತಿಶಿ ಮರ್ಲೆನಾ ರಾಜೀನಾಮೆ ನೀಡಿದ್ದಾರೆ.
ಪಕ್ಷದ ಸೋಲಿನ ನೈತಿಕ ಹೊಣೆಹೊತ್ತು ಸಿಎಂ ಅತಿಶಿ ಮರ್ಲೆನಾ ರಾಜೀನಾಮೆ ನೀಡಿದ್ದಾರೆ.
ಜನಾದೇಶಕ್ಕೆ ತಲೆಬಾಗುತ್ತೇವೆ. ದೆಹಲಿಯ ಜನರ ಜತೆ ಮುಂದೆಯೂ ಇರುತ್ತೇವೆ. ಬಿಜೆಪಿಗೆ ಅಭಿನಂದನೆಗಳು . ದೆಹಲಿಯ ಅಭಿವೃದ್ಧಿ ಮುಂದುವರೆಯಲಿ ಎಂದು ಹೇಳಿದ್ದಾರೆ.
ಸತತ ನಾಲ್ಕನೇ ಬಾರಿ ಅಧಿಕಾರದ ಗದ್ದುಗೆ ಏರುವ ಕನಸು ಹೊಂದಿದ್ದ ಆಪ್ ಕನಸು ನುಚ್ಚುನೂರಾಗಿದೆ. ದಿಲ್ಲಿಯಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡ್ತಿದ್ದು, ಸೋಲಿನಿಂದ ಆಪ್ ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ.