newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಇಂದಿನ ಪಂಚಾಂಗ
ಮಾಘ ಮಾಸ ಶುಕ್ಲ ಪಕ್ಷ ತೃತೀಯ/ ತದಿಗೆ
01-02-2025, ಶನಿವಾರ
* ಗಣೇಶ ಜಯಂತಿ, ವಿನಾಯಕ ಚತುರ್ಥಿ
* ಶ್ರೀ ಮಾರ್ಕಂಡೇಯ ಜಯಂತಿ
—
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ಉತ್ತರಾಯಣ
ದಿನಾಂಕ – 01/02/2025
ತಿಂಗಳು – ಫೆಬ್ರವರಿ
ಬಣ್ಣ – ನೀಲಿ/ಕಪ್ಪು
ವಾರ – ಶನಿವಾರ
ತಿಥಿ – ತೃತೀಯ 11:37:42
ಪಕ್ಷ – ಶುಕ್ಲ
ನಕ್ಷತ್ರ – ಪೂರ್ವಭಾದ್ರಪದ 26:31:59*
ಯೋಗ – ಪರಿಘ 12:23:20
ಕರಣ – ಗರಜ 11:37:42
ಕರಣ – ವಾಣಿಜ 22:25:48
ತಿಂಗಳು (ಅಮಾವಾಸ್ಯಾಂತ್ಯ) ಮಾಘ
ತಿಂಗಳು (ಹುಣ್ಣಿಮಾಂತ್ಯ) ಮಾಘ
ಚಂದ್ರ ರಾಶಿ – ಕುಂಭ till 20:57:28
ಚಂದ್ರ ರಾಶಿ – ಮೀನ from 20:57:28
ಸೂರ್ಯ ರಾಶಿ – ಮಕರ
ಋತು – ಶಿಶಿರ
ಸೂರ್ಯೋದಯ 06:46:59
ಸೂರ್ಯಾಸ್ತ 18:19:36
ಹಗಲಿನ ಅವಧಿ 11:32:37
ರಾತ್ರಿಯ ಅವಧಿ 12:27:13
ಚಂದ್ರೋದಯ. 08:52:32
ಚಂದ್ರಾಸ್ತ 21:08:32
ರಾಹು ಕಾಲ 09:40 – 11:07 ಅಶುಭ
ಯಮಘಂಡ ಕಾಲ 13:59 – 15:26 ಅಶುಭ
ಗುಳಿಕ ಕಾಲ 06:47 – 08:14
ಅಭಿಜಿತ್ 12:10 – 12:56 ಶುಭ
ದುರ್ಮುಹೂರ್ತ 08:19 – 09:06 ಅಶುಭ
—
ಇಂದಿನ ಮಾತು
ಮರೆಯವ ಗುಣ ಕೆಲವೊಮ್ಮೆ ಒಳ್ಳೆಯದನ್ನೇ ಮಾಡುತ್ತದೆ. ಆದರೆ, ಮುಖದ ಮೇಲೆ ಸಂತೋಷ ತರುವ ಕ್ಷಣಗಳು ಮರೆಯದಿರಲಿ.
—
ಇಂದಿನ ಸುಭಾಷಿತ
ಸ್ವಭಾವೋ ನೋಪದೇಶೇನ
ಶಕ್ಯತೇ ಕರ್ತುಮನ್ಯಥಾ ।
ಸುತಪ್ತಮಪಿ ಪಾನೀಯಂ
ಪುನರ್ಗಚ್ಛತಿ ಶೀತತಾಮ್ ॥
– (ಪಂಚತಂತ್ರ, ಮಿತ್ರಭೇದ)
ಉಪದೇಶ ಮಾಡುವುದರಿಂದ ಒಬ್ಬನ ಸ್ವಭಾವವನ್ನು ಬದಲಾಯಿಸುವುದು ಸಾಧ್ಯವಿಲ್ಲ. ನೀರನ್ನು ಚೆನ್ನಾಗಿ ಕುದಿಸಿದರೂ ಮತ್ತೆ ಅದು ತಣ್ಣಗೇ ಆಗುತ್ತದೆ.
—
ಇಂದಿನ ಪದಾರ್ಥ
ಅಂಹ್ರಿ = A foot,
ಅಕರಣೀಯ = not to be done.
—
ಇಂದಿನ ಓದು
ಶ್ರೀ ಭೀಷ್ಮ ಉವಾಚ
ಜಗತ್ಪ್ರಭುಂ ದೇವದೇವಮನಂತಂ ಪುರುಷೋತ್ತಮಮ್ | ಸ್ತುವನ್ನಾಮಸಹಸ್ರೇಣ ಪುರುಷಃ ಸತತೋತ್ಥಿತಃ || 4 ||
ತಮೇವ ಚಾರ್ಚಯನ್ನಿತ್ಯಂ ಭಕ್ತ್ಯಾ ಪುರುಷಮವ್ಯಯಮ್ |
ಧ್ಯಾಯನ್ ಸ್ತುವನ್ನಮಸ್ಯಂಶ್ಚ ಯಜಮಾನಸ್ತಮೇವ ಚ || 5 ||
ಅನಾದಿ ನಿಧನಂ ವಿಷ್ಣುಂ ಸರ್ವಲೋಕಮಹೇಶ್ವರಮ್ |
ಲೋಕಾಧ್ಯಕ್ಷಂ ಸ್ತುವನ್ನಿತ್ಯಂ ಸರ್ವದುಃಖಾತಿಗೋ ಭವೇತ್ || 6 ||
ಬ್ರಹ್ಮಣ್ಯಂ ಸರ್ವಧರ್ಮಜ್ಞಂ ಲೋಕಾನಾಂ ಕೀರ್ತಿವರ್ಧನಮ್ |
ಲೋಕನಾಥಂ ಮಹದ್ಭೂತಂ ಸರ್ವಭೂತಭವೋಧ್ಭವಮ್ || 7 ||
ಎಂದೂ ಎಡವದೇ ಎಚ್ಚರದಿಂದಿರುವ ಸಾಧಕ, ಜಗದ ಒಡೆಯನನ್ನು, ದೇವತೆಗಳಿಗೂ ಹಿರಿಯನಾದ ಹಿರಿದೈವವನ್ನು, ಆತನ ಸಾವಿರನಾಮಗಳಿಂದ ಸ್ತುತಿಸುತ್ತಾ; ಅಳಿವಿರದ ಆ ಪರಮಪುರುಷನನ್ನೇ ಅನುಗಾಲ ಭಕ್ತಿಯಿಂದ ಪೂಜಿಸುತ್ತ; ಅವನನ್ನೇ ಮನದಲ್ಲಿ ನೆನೆಯುತ್ತ, ಸದಾ ಸ್ತುತಿಸುತ್ತ, ತಲೆಬಾಗಿ ಆರಾಧಿಸುತ್ತಾ; ತುದಿ-ಮೊದಲು ಇರದವನನ್ನು, ಎಲ್ಲೆಡೆ ತುಂಬಿರುವವನನ್ನು. ಎಲ್ಲ ಲೋಕಗಳ ಹಿರಿಯ ಒಡೆಯರಿಗೂ ಒಡೆಯನಾದವನನ್ನು, ಮೇಲೆ ನಿಂತು ಎಲ್ಲವನ್ನೂ ಕಾಣುತ್ತಿರುವವನನ್ನು; ತಿಳಿದವರು ಮೆಚ್ಚುವವನನ್ನು, ಎಲ್ಲ ಧರ್ಮಗಳ ಬಲ್ಲವನನ್ನು, ಜೀವಗಳಿಗೆ ಜಸದ ಏರು ತೋರುವವನನ್ನು; ಜೀವ ಜಾತದ ಒಡೆಯನನ್ನು, ಎಲ್ಲ ಜೀವಗಳಿಗೂ ಬಾಳನಿತ್ತವನನ್ನು, ಹಿರಿಯ ತತ್ವವಾದ ನಾರಾಯಣನನ್ನು ಆರಾಧಿಸಬೇಕು.