newsics.com
ಬೆಂಗಳೂರು: ದಪ್ಪಗಿರುವುದರಿಂದ ಯುವತಿಯರು ಮದುವೆಗೆ ನಿರಾಕರಿಸುತ್ತಿದ್ದಾರೆ ಎಂದು ನೊಂದ ಆಟೋ ಚಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಂಗಳೂರು ಉತ್ತರ ತಾಲೂಕಿನ ನಾರಾಯಣಪ್ಪನಪಾಳ್ಯದಲ್ಲಿ ಈ ಘಟನೆ ನಡೆದಿದೆ.
ಆಟೋ ಚಾಲಕ ವೆಂಕಟೇಶ್ (29) ಆತ್ಮಹತ್ಯೆಗೆ ಶರಣಾದವ. ವೆಂಕಟೇಶ್ ಸುಮಾರು 15 ಕಡೆ ಹುಡುಗಿ ನೋಡಿದ್ದರು. ಆದರೆ ಹೋದಲ್ಲೆಲ್ಲ ಹುಡುಗ ದಪ್ಪ ಎಂದು ಹುಡುಗಿ ಮನೆಯವರು ಮದುವೆಗೆ ನಿರಾಕರಿಸಿದ್ದರು ಎನ್ನಲಾಗಿದೆ.
ನಾನು ದಪ್ಪಗಿದ್ದೇನೆ ಎಂದು ಕೊರಗುತ್ತಿದ್ದ ವೆಂಕಟೇಶ್ ಹುಡುಗಿ ಸಿಗದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.