newsics.com
ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಸಂಸತ್ತಿನಲ್ಲಿ ತೆರೆದಿಟ್ಟ ವರದಿಯೊಂದು ಬೆಂಗಳೂರಿಗರ ಆತಂಕ ಹೆಚ್ಚಿಸಿದೆ.
ರಸ್ತೆ ಅಪಘಾತ ಪ್ರಕರಣಗಳ ಪಟ್ಟಿಯಲ್ಲಿ ಬೆಂಗಳೂರು ನಂಬರ್ 2 ಎಂಬ ನಿತಿನ್ ಗಡ್ಕರಿ ಅವರ ಅಂಕಿ ಅಂಶ ಬೆಂಗಳೂರಿಗರು ಗಾಬರಿಯಾಗುವಂತೆ ಮಾಡಿದೆ.
ಪ್ರಮುಖ ನಗರಗಳ ಪೈಕಿ ಗರಿಷ್ಠ ಅಪಘಾತವಾಗುತ್ತಿರುವ ನಗರಗಳ ಪಟ್ಟಿಯನ್ನು ನಿತಿನ್ ಗಡ್ಕರಿ ನೀಡಿದ್ದಾರೆ. ಇದರಲ್ಲಿ ಬೆಂಗಳೂರು 2ನೇ ಸ್ಥಾನದಲ್ಲಿದೆ.
ನಗರದಲ್ಲಿ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳು ಜನರ ಆತಂಕಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ನಿತಿನ್ ಗಡ್ಕರಿ ದೇಶದ ಅಪಘಾತ ಪ್ರಕರಣಗಳ ಚಿತ್ರಣ ಮುಂದಿಟ್ಟಿದ್ದಾರೆ. ಇದು ಬೆಂಗಳೂರಿಗರ ಆತಂಕ ಹೆಚ್ಚಿಸಿದೆ. ಕಾರಣ ಗರಿಷ್ಠ ಅಪಘಾತ ಪ್ರಕರಣ ಹಾಗೂ ಮೃತಪಟ್ಟವರ ಸಂಖ್ಯೆಯಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು 2ನೇ ಸ್ಥಾನದಲ್ಲಿದೆ. ಜೈಪುರ ಮೂರನೇ ಸ್ಥಾನದಲ್ಲಿದೆ.
ಗರಿಷ್ಠ ಅಪಘಾತ ಹಾಗೂ ಸಾವು
ದೆಹಲಿ: 1,457 ಸಾವು
ಬೆಂಗಳೂರು: 915 ಸಾವು
ಜೈಪುರ: 850 ಸಾವು
ಸದನದಲ್ಲಿ ಅಪಘಾತ ಕುರಿತು ಮಾಹಿತಿ ನೀಡಿದ ನಿತಿನ್ ಗಡ್ಕರಿ, ಭಾರತದಲ್ಲಿ ಪ್ರತಿ ವರ್ಷ ಸುಮಾರು 1,78,000 ಮಂದಿ ಅಪಘಾತದಲ್ಲಿ ಮೃತಪಡುತ್ತಿದ್ದಾರೆ. ಈ ಪೈಕಿ ಶೇಕಡಾ 60 ರಷ್ಟು ಮಂದಿ 18 ರಿಂದ 34 ವಯಸ್ಸಿನವರು ಎಂದು ಗಡ್ಕರಿ ಹೇಳಿದ್ದಾರೆ.
2024ರ ವೇಳೆ ಅಪಘಾತ ಪ್ರಮಾಣವನ್ನು ಶೇಕಡಾ 50 ರಷ್ಟು ಕಡಿಮೆ ಮಾಡುವ ಗುರಿ ಇಟ್ಟುಕೊಂಡಿದ್ದೆವು. ಆದರೆ ಈ ಪ್ರಮಾಣ ಕಡಿಮೆಯಾಗುವುದು ಹಾಗಿರಲಿ ಹೆಚ್ಚಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ಇದೇ ವಿಚಾರವಾಗಿ ಅಂತಾರಾಷ್ಟ್ರೀಯ ರಸ್ತೆ ಸುರಕ್ಷತಾ ಸಮ್ಮೇಳನ, ಸಭೆಯಲ್ಲಿ ಮುಖ ತೋರಿಸಲು ನನಗೆ ನಾಚಿಕೆಯಾಗುತ್ತದೆ. ಹೀಗಾಗಿ ಇಂತಹ ಸಮ್ಮೇಳನಗಳಲ್ಲಿ ನಾನು ಮುಖ ಕಾಣದಂತೆ ಮಾಡುತ್ತೇನೆ ಎಂದು ನಿತಿನ್ ಗಡ್ಕರಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಗರಿಷ್ಠ ಅಪಘಾತ ಮತ್ತು ಸಾವು
ಉತ್ತರ ಪ್ರದೇಶ: 23,652 ಸಾವು
ತಮಿಳುನಾಡು: 18,347 ಸಾವು
ಮಹಾರಾಷ್ಟ್ರ: 15,366 ಸಾವು
ಮಧ್ಯಪ್ರದೇಶ: 13,798 ಸಾವು
ಗರಿಷ್ಠ ಅಪಘಾತ ಹಾಗೂ ಮೃತ ಸಂಖ್ಯೆಗಳ ರಾಜ್ಯದ ಪಟ್ಟಿಯನ್ನೂ ನಿತಿನ್ ಗಡ್ಕರಿ ನೀಡಿದ್ದಾರೆ. ಈ ಪೈಕಿ ಉತ್ತರ ಪ್ರದೇಶದಲ್ಲಿ ಅಪಘಾತದಿಂದ 23,652 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಗರಿಷ್ಠ ಸಾವು ಉತ್ತರ ಪ್ರದೇಶದಲ್ಲಿ ಆಗಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
Relationship :ನಿಮ್ಮ ಹೆಂಡತಿಯ ಮನಸ್ಸನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎಂದು ನಿಮಗೆ ತಿಳಿದಿದೆಯೇ?
Dawood Ibrahim: ದಾವೂದ್ ಇಬ್ರಾಹಿಂನ ಮಾದಕ ವಸ್ತು ಫ್ಯಾಕ್ಟರಿ ಮ್ಯಾನೇಜರ್ ದಾನಿಶ್ ಚಿಕ್ನಾ ಅರೆಸ್ಟ್