newsics.com
ಬೆಂಗಳೂರು: ಕಾರು ಹೋಗಲು ದಾರಿಬಿಡಿ ಎಂದು ಹಾರನ್ ಹಾಕಿ ಜೋರಾಗಿ ಹೇಳಿದ್ದಕ್ಕೆ ಕಾರಿನಲ್ಲಿದ್ದವನ್ನು ಎಳೆದು ಅಡ್ಡಡ್ಡ ಮಲಗಿಸಿ ಮಾರಣಾಂತಿಕ ಹಲ್ಲೆ ಮಾಡಿದ್ದು, ಕಾರಿನಲ್ಲಿದ್ದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಬೆಂಗಳೂರಿನ ಹೊರವಲಯ ಎಲೆಕ್ಟ್ರಾನಿಕ್ ಸಿಟಿ ಬಳಿಯ ಗೂಳಿಮಂಗಲ ಎಂಬಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಆನೇಕಲ್ ತಾಲೂಕಿನ ಲಕ್ಷ್ಮೀನಾರಾಯಣಪುರದ ಚೈತನ್ಯ ಟೆಕ್ನೋ ಶಾಲೆಯ ಪಿಯು ಕಾಲೇಜಿನ ಡೀನ್ ಶ್ರೀನಿವಾಸ ಮನೋಹರ ರೆಡ್ಡಿ (53) ಎಂದು ಗುರುತಿಸಲಾಗಿದೆ.
ಕಾರಿನಲ್ಲಿ ಕಾಲೇಜಿಗೆ ಹೋಗುವಾಗ ಮುಂದೆ ನಿಲ್ಲಿಸಿದ್ದ ಜೆಸಿಬಿ ಸೈಡಿಗೆ ಚಲಿಸಿ ನನ್ನ ಕಾರು ಹೋಗಲು ದಾರಿ ಬಿಡಿ ಎಂದು ಶ್ರೀನಿವಾಸ ಮನೋಹರ ರೆಡ್ಡಿ ಅವರು ಹಾರನ್ ಹಾಕಿ, ಜೋರಾಗಿ ಮಾತನಾಡಿದ್ದಾರೆ. ಇಷ್ಟು ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ಕಾಲೇಜಿಗೆ ತಡವಾಗುತ್ತಿರುವುದಕ್ಕೆ ಹಾರನ್ ಹಾಕುತ್ತಾ, ನಿಮ್ಮ ಜೆಸಿಬಿ ಪಕ್ಕಕ್ಕೆ ಸರಿಸಿ ದಾರಿ ಬಿಡಿ ಎಂದು ಕೇಳಿದ್ದಾರೆ. ಆದರೆ, ಕಾರಿನಲ್ಲಿದ್ದ ರೆಡ್ಡಿ ಅವರಿಗೆ ಯಾವುದೇ ಸೊಪ್ಪು ಹಾಕದಿದ್ದಾಗ ಒಂದಷ್ಟು ಜೋರು ಧ್ವನಿಯಲ್ಲಿ ದಾರಿ ಬಿಡುವಂತೆ ಕೇಳಿದ್ದಾರೆ.
ಇಷ್ಟಕ್ಕೇ ನವೀನ್ ಎಂಬಾತ ನಾವು ದಾರಿ ಬಿಡುವುದಿಲ್ಲ ಎಂದು ಜೋರಾಗಿ ಆವಾಜ್ ಹಾಕುತ್ತಾ ರೆಡ್ಡಿ ಅವರ ಬಳಿಗೆ ಬಂದಿದ್ದಾನೆ. ಆಗ ಕೋಪಗೊಂಡ ರೆಡ್ಡಿ ಅವರೂ ದಾರಿ ಸಾರ್ವಜನಿಕರ ಸಂಚಾರಕ್ಕಿರುವಂಥದ್ದು. ದಾರಿ ಬಿಟ್ಟು ಮಾತನಾಡಿ. ಇಲ್ಲವಾದರೆ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ್ದಾರೆ. ಇದರಿಂದ ಕೋಪಗೊಂಡ ನವೀನ್ ರೆಡ್ಡಿ ಎಂಬಾತ ಕಾರಿನಲ್ಲಿದ್ದ ಶ್ರೀನಿವಾಸ ಮನೋಹರ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ಈ ಕೂಡಲೇ ಕಾಲೇಜು ಪ್ರಾಚಾರ್ಯರು ಹಾಗೂ ಇತರೆ ಸಿಬ್ಬಂದಿಗೆ ಮಾಹಿತಿ ಸ್ಥಳಕ್ಕೆ ಬರುವಂತೆ ಮಾಹಿತಿ ನೀಡಿದ್ದಾರೆ.
ಆಗ ನವೀನ್ ನೀನು ನಿನ್ನ ಕಡೆಯವರನ್ನು ಕರೆಸಿ ನನ್ನನ್ನು ಹೊಡೆಸುತ್ತೀಯಾ ಎಂದು ಮತ್ತಷ್ಟು ಕುಪಿತಗೊಂಡು ಮನೋಹರ ರೆಡ್ಡಿಯನ್ನು ಕಾರಿನಿಂದ ಹೊರಗೆಳೆದುಕೊಂಡು ಹಲ್ಲೆ ಮಾಡಿದ್ದಾನೆ. ಆಗ ಕಾಲೇಜು ಸಿಬ್ಬಂದಿ ಬರುವಷ್ಟರಲ್ಲಿ ಡೀನ್ ಕುಸಿದು ಬಿದ್ದು ಸಾವಿಗೀಡಾಗಿದ್ದರು. ಘಟನಾ ಸ್ಥಳಕ್ಕೆ ಹೆಬ್ಬಗೋಡಿ ಠಾಣಾ ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಸೋಡಿಯಂ ಬಳಸಿ ಸ್ಫೋಟ: ಪ್ರತಾಪ್ಗೆ ಬಿಗ್ ಶಾಕ್ ಕೊಟ್ಟ ಕೋರ್ಟ್..drone prathap ಪೊಲೀಸ್ ಕಸ್ಟಡಿಗೆ
ಮಗಳಿಗೆ ಕಿರುಕುಳ ನೀಡಿದವನನ್ನು ಕೊಲ್ಲಲು ಕುವೈತ್ನಿಂದ ಆಂಧ್ರಕ್ಕೆ ಬಂದ ಅಪ್ಪ
College student: ಕ್ಲಾಸ್ ರೂಂನಲ್ಲೇ ಶಿಕ್ಷಕನಿಗೆ ಚಾಕುವಿನಿಂದ ಇರಿದ ವಿದ್ಯಾರ್ಥಿಗಳು