newsics.com
ಮೈಸೂರು: ಭಾರತದ ಪ್ರಸಿದ್ಧ ಗಾಯಕಿ ಎಸ್. ಜಾನಕಿ ಅವರು ಗುರುವಾರ ಬೆಳಗ್ಗೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮಸಣಿಕಮ್ಮ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಈ ವೇಳೆ ದೇವಾಲಯದ ಅರ್ಚಕ ಗಾಯಕಿ ಜಾನಕಿ ಅವರಿಗೆ ಹಾರ ಹಾಕಿ, ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.
ಹಿಂದೂ ಧರ್ಮದ ಪ್ರಕಾರ ಭಕ್ತರೇ ದೇವಾಲಯದ ಪೂಜಾರಿಗಳು ಹಾಗೂ ಅರ್ಚಕರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಾರೆ. ಆದರೆ, ಇಲ್ಲಿ ಸ್ವತಃ ದೇವಾಲಯದ ಪೂಜೆ ಮಾಡುವ ಅರ್ಚಕರೇ ಗಾಯಕಿ ಎಸ್. ಜಾನಕಿ ಅವರಿಗೆ ದೇವರ ಮೇಲಿಂದ ತೆಗೆದ ಹಾರವನ್ನು ಹಾಕಿದ್ದಾರೆ. ನಂತರ, ಜಾನಕಿ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದು ಅಲ್ಲಿ ನೆರೆದಿದ್ದ ಎಲ್ಲರಿಗೂ ಆಚ್ಚರಿ ಮೂಡಿಸಿದ್ದಾರೆ.
ಎಸ್. ಜಾನಕಿ ಅವರು ದೇವಾಲಯದಲ್ಲಿ ದರ್ಶನ ಪಡೆದು ಹೊರಗೆ ಬರುತ್ತಿದ್ದಂತೆ ಅಲ್ಲಿ ನೆರೆದಿದ್ದ ನೂರಾರು ಜನರು ಹಾಗೂ ಯುವ ಗಾಯಕರು ಎಸ್. ಜಾನಕಿ ಜಾನಕಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು.
ಹಿನ್ನೆಲೆ ಗಾಯಕಿಯಾಗಿ ಪ್ರಸಿದ್ಧಿ ಹೊಂದಿದ ಗಾಯಕಿ ಎಸ್. ಜಾನಕಿ ಅವರು ಕನ್ನಡ ಸೇರಿದಂತೆ ದೇಶದ 14 ಭಾಷೆಗಳು ಹಾಗೂ ವಿದೇಶಗಳ 3 ಭಾಷೆಗಳು ಸೇರಿದಂತೆ ಸಾವಿರಾರು ಸಿನಿಮಾಗಳು, ಕ್ಯಾಸೆಟ್, ರೇಡಿಯೋ, ದೇವಾಲಯ ಹಾಗೂ ಭಕ್ತಿಗೀತೆಗಳು ಸೇರಿದಂತೆ ಒಟ್ಟು 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ.
ಅವರು ಕೆಲವು ವರ್ಷಗಳ ಹಿಂದೆ (78ನೇ ವರ್ಷದಲ್ಲಿ) ಹಾಡು ಹಾಡುವುದನ್ನು ನಿಲ್ಲಿಸಿದ್ದು, ವಿಶ್ರಾಂತ ಜೀವನ ಸಾಗಿಸುತ್ತಿದ್ದಾರೆ. ಆದರೆ, ಇದೀಗ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಮಸಣಿಕಮ್ಮ ದೇವಾಲಯಕ್ಕೆ ಆಗಮಿಸಿ ದೇವರಿಗೆ ವಿಶೇಷ ಪೂಜೆಗಳನ್ನು ಮಾಡಿಸಿ ಆಶಿರ್ವಾದ ಪಡೆದಿದ್ದಾರೆ.
Toxic movie ಯಶ್ ‘ಟಾಕ್ಸಿಕ್’ ಸಿನಿಮಾಗೆ ಬಿಗ್ ರಿಲೀಫ್ ಕೊಟ್ಟ ಹೈಕೋರ್ಟ್