newsics.com
ಮಂಡ್ಯ: ಬರುವ ಡಿಸೆಂಬರ್ 20, 21, 22ರಂದು ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ 94 ವರ್ಷದ ಗೊ.ರು. ಚನ್ನಬಸಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಗೊ.ರು. ಚನ್ನಬಸಪ್ಪ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿ ಸಭೆಯ ನಂತರ ಈ ವಿಷಯವನ್ನು ಡಾ. ಮಹೇಶ್ ಜೋಶಿ ಅವರು ದೂರವಾಣಿ ಮೂಲಕ ಗೊ.ರು.ಚ. ಅವರಿಗೆ ವಿಚಾರ ತಿಳಿಸಿ ಅಭಿನಂದಿಸಿದರು. ಆಯ್ಕೆ ವಿಷಯ ತಿಳಿದು ಸಂತೋಷದಿಂದ ಒಪ್ಪಿಗೆ ಸೂಚಿಸಿದರು ಎಂದು ಜೋಶಿ ತಿಳಿಸಿದ್ದಾರೆ.
ಮಧು ಬಂಗಾರಪ್ಪಗೆ ಕನ್ನಡ ಬರಲ್ಲ: ವಿದ್ಯಾರ್ಥಿ ಹೇಳಿಕೆಗೆ ಸಚಿವ ಶಾಕ್, ಕ್ರಮಕ್ಕೆ ಸೂಚನೆ