newsics.com
ಮೈಸೂರು: ಮುಡಾ ಹಗರಣದ ವ್ಯಾಪ್ತಿ ವಿಸ್ತಾರವಾಗುತ್ತಲೇ ಸಾಗಿದೆ. 50:50 ಅನುಪಾತದಡಿ 2 ಸೈಟ್ ನೀಡಬೇಕಾಗಿದ್ದ ವ್ಯಕ್ತಿಗೆ 12 ನಿವೇಶನ ಹಂಚಿಕೆ ಮಾಡಿರುವುದು ಬೆಳಕಿಗೆ ಬಂದಿದೆ.
ಮಹೇಂದ್ರ ಎಂಬುವರಿಗೆ ಸೇರಿದ 2.22 ಎಕರೆ ಭೂಮಿ ಉಪಯೋಗಿಸಿಕೊಂಡಿರುವುದಾಗಿ ಮುಡಾ ಹೇಳಿಕೊಂಡಿದೆ. ಆದರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವ ಬಗ್ಗೆ ಯಾವುದೇ ದಾಖಲೆಯಾಗಲೀ, ಮಾಹಿತಿಯಾಗಲೀ ಮುಡಾ ಬಳಿ ಇಲ್ಲವಂತೆ. ಆದರೂ, ಮಹೇಂದ್ರ ಅವರಿಗೆ 50:50 ಅನುಪಾತದಲ್ಲಿ 12 ಸೈಟ್ಗಳನ್ನು ಹಂಚಿಕೆ ಮಾಡಲಾಗಿದೆ.
ದೇವನೂರು ಗ್ರಾಮದ ಸರ್ವೆ ನಂ. 81/2 ರಲ್ಲಿ ಭೂಮಿಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಶಪಡಿಸಿಕೊಂಡಿತ್ತು. ಆದರೆ ಯಾವಾಗ ಆ ಭೂಮಿಯನ್ನು ವಶಪಡಿಸಿಕೊಂಡು ಅಭಿವೃದ್ಧಿಪಡಿಸಲಾಗಿದೆ ಎನ್ನುವ ಮಾಹಿತಿಯೂ ಇಲ್ಲ. ಅಷ್ಟೆ ಅಲ್ಲ, ದೇವನೂರು ಗ್ರಾಮದ ಭೂಮಿಗೆ ವಿಜಯನಗರ 3ನೇ ಹಂತದಲ್ಲಿ 12 ನಿವೇಶನಗಳನ್ನು ನೀಡಲಾಗಿದೆ.
ಪ್ರೋತ್ಸಾಹದಾಯಕ ಯೋಜನೆಯಲ್ಲಿ ಸ್ವ ಇಚ್ಛೆಯಿಂದ ಬಿಟ್ಟುಕೊಟ್ಟಿದ್ದಾರೆ ಎಂದು ಕ್ರಯ ಪತ್ರದಲ್ಲಿ ನಮೂದಿಸಲಾಗಿದೆ. ಈ ಯೋಜನೆಗೆ ನೀಡಬೇಕಿರುವುದು ಕೇವಲ 2 ಸೈಟ್ಗಳು ಮಾತ್ರ. 40*60 ಮತ್ತು 40*30 ರ 3600 ಚದರ ಅಡಿ ಮಾತ್ರ ಪರಿಹಾರ ಸಿಗಬೇಕಾಗಿತ್ತು. ಆದರೆ ನಗರದ ಪ್ರಮುಖ ಪ್ರದೇಶದಲ್ಲೇ 12 ನಿವೇಶನ ನೀಡಲಾಗಿದೆ.
ಈ ಮಧ್ಯೆ, ಮುಡಾ ಹಗರಣದ ಜಾಲ ಸಿಎಂ ಸಿದ್ದರಾಮಯ್ಯ ಅತ್ಯಾಪ್ತರನ್ನೂ ಸುತ್ತಿಕೊಂಡಿದೆ. ಲೋಕಾಯುಕ್ತ ತನಿಖೆ ಕೊನೆಯ ಹಂತಕ್ಕೆ ಬಂದು ನಿಂತಿದ್ದರೆ, ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮತ್ತಷ್ಟು ಜನರ ವಿಚಾರಣೆ ಮಾಡಿದ್ದಾರೆ. ಸದ್ಯದಲ್ಲೇ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಕುಟುಂಬಕ್ಕೂ ನೋಟಿಸ್ ಜಾರಿ ಮಾಡಲು ಇಡಿ ಸಿದ್ಧತೆ ನಡೆಸಿದೆ.
ಇದು ನೀರಲ್ಲೂ ಓಡೋ ಕಾರು… ಆನಂದ್ ಮಹೀಂದ್ರಾ ಬಳಿ ಹರ್ಷ್ ಗೋಯೆಂಕಾ ಕೇಳಿದ್ದೇನು? ವಿಡಿಯೋ ನೋಡಿ
ಹಾರಾಡುತ್ತಿದ್ದ ಅಪಾಚೆ ಹೆಲಿಕಾಪ್ಟರ್ನಲ್ಲೇ ಯೋಧರ ರಾಸಲೀಲೆ, ಇಬ್ಬರ ಬಂಧನ
ಬಿಗ್ ಬಾಸ್ ಮನೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಚೈತ್ರಾ ಕುಂದಾಪುರ, ಆಸ್ಪತ್ರೆಗೆ ದಾಖಲು