newsics.com
ಕೋಲ್ಕತಾ(ಪಶ್ಚಿಮ ಬಂಗಾಳ): 112 ಅಡಿ ಎತ್ತರದ ದುರ್ಗಾದೇವಿ ವಿಗ್ರಹ ಸ್ಥಾಪಿಸುವ ಸಂಕಲ್ಪ ಮಾಡಿ ಕೈಬಿಟ್ಟ 80 ಹಳ್ಳಿಗಳ ಪುರುಷರು ಪ್ರಾಯಶ್ಚಿತ್ತವಾಗಿ ಸಾಮೂಹಿಕವಾಗಿ ತಲೆ ಬೋಳಿಸಿಕೊಂಡಿದ್ದಾರೆ.
ಹಣಕಾಸಿನ ಸಮಸ್ಯೆಗಳ ಕಾರಣ ಆಡಳಿತದ ಆದೇಶದ ಮೇರೆಗೆ ರಣಘಾಟ್ನ ಕಮಲಾಪುರದಲ್ಲಿದ್ದ ವಿಶ್ವದ ಅತಿ ದೊಡ್ಡ 112 ಅಡಿ ಎತ್ತರದ ದುರ್ಗಾದೇವಿ ವಿಗ್ರಹ ಪೂಜೆಯನ್ನೂ ನಿಲ್ಲಿಸಲಾಗಿದೆ.
ತಾಯಿ ದುರ್ಗಾದೇವಿ ವಿಗ್ರಹ ಸ್ಥಾಪಿಸುವುದನ್ನೂ ಅರ್ಧಕ್ಕೇ ನಿಲ್ಲಿಸಲಾಗಿದೆ. ಹೀಗಾಗಿ ಪೂಜೆ ನಿಲ್ಲಿಸುವ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ಪ್ರಾಯಶ್ಚಿತ್ತವಾಗಿ ಭಕ್ತರು ಈ ನಿರ್ಧಾರ ಕೈಗೊಂಡಿದ್ದಾರೆ.
ದುರ್ಗಾಪೂಜೆ ಬಂಗಾಳದ ಪ್ರಸಿದ್ಧ ಹಬ್ಬವಾಗಿದ್ದರೂ ಆಡಳಿತಾತ್ಮಕ ಅಸಹಕಾರದಿಂದ ನಾಡಿಯಾದ ರಾಣಾಘಾಟ್ ಕಮಲಾಪುರದಲ್ಲಿ 112 ಅಡಿ ದುರ್ಗಾಪೂಜೆ ಮಾಡಲು ಸಾಧ್ಯವಾಗಲಿಲ್ಲ ಎಂದು ಕಮಲಾಪುರ ಅಭಿಜನ ಸಂಘ ಪೂಜಾ ಸಮಿತಿ ಆರೋಪಿಸಿದೆ.
ಬಂಗಾಳದಲ್ಲಿ ಜರುಗುವ ಸಾಂಪ್ರದಾಯಿಕ ಮತ್ತು ಹಬ್ಬದ ಆಚರಣೆಗಳ ಕುರಿತು ಜಗತ್ತಿನ ಮೂಲೆಮೂಲೆಗೂ ತಿಳಿದಿದೆ. ಆದರೆ ಈ ಬಾರಿ ಪೂಜೆ ನಿಲ್ಲಿಸಿದ ಕಾರಣ ದೇಶ-ವಿದೇಶಗಳ ಭಕ್ತರಿಗೆ ತೀವ್ರ ನಿರಾಶೆಯಾಗಿದೆ. ಎಲ್ಲಾ ತಪ್ಪನ್ನು ತಮ್ಮದೆಂದು ಸ್ವೀಕರಿಸಿ ಭಕ್ತರು ತಾಯಿ ಬಳಿ ಕ್ಷಮೆ ಕೇಳಲು ತಲೆ ಬೋಳಿಸಿಕೊಂಡಿದ್ದಾರೆ.
ದುರ್ಗಾಪೂಜೆ ನಿಲ್ಲಿಸಿದ್ದು ನಿಜಕ್ಕೂ ಅವಮಾನಕರ. ಇದರಿಂದ ಪ್ರತಿಯೊಬ್ಬ ಬಂಗಾಳಿಯೂ ಆಘಾತಕ್ಕೆ ಒಳಗಾಗಿದ್ದಾನೆ. ಪೂಜೆ ನಿಲ್ಲಿಸಿದ್ದಕ್ಕೆ ಪ್ರತಿಯೊಬ್ಬ ನಾಡಿಯಾ ನಿವಾಸಿಗಳು ವಿಷಾದ ವ್ಯಕ್ತಪಡಿಸುತ್ತಿದ್ದಾರೆ. ಇದು ವಿಶ್ವದ ಅತಿದೊಡ್ಡ ದುರ್ಗಾ ದೇವಿ ವಿಗ್ರಹ ಎಂಬುದನ್ನು ಯುನೆಸ್ಕೋ ಗುರುತಿಸಿದ್ದು, ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ಗೂ ಸೇರಿದೆ. ಆದರೆ ಹಲವು ಅಸಂಬದ್ಧ ವಿಚಾರಗಳನ್ನು ಮುಂದಿಟ್ಟುಕೊಂಡು ದುರ್ಗಾಪೂಜೆ ನಿಲ್ಲಿಸಿರುವುದು ವಿಷಾದನೀಯ ಎನ್ನುತ್ತಿದ್ದಾರೆ ಭಕ್ತರು.
ಯಾವುದೇ ಖಾಸಗಿ ಪ್ರಾಯೋಜಕತ್ವ ಇಲ್ಲದೆ ಗ್ರಾಮಸ್ಥರ ಹಣದಲ್ಲಿ ಪೂಜೆಯನ್ನು ಆಯೋಜಿಸಲಾಗಿತ್ತು ಎಂದು ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.
ವಿದ್ಯುತ್ ಇಲಾಖೆ, ಅಗ್ನಿಶಾಮಕ ದಳ, ಪೊಲೀಸ್, ಬಿಡಿಒ ಮತ್ತು ರಣಘಾಟ್ ಉಪವಿಭಾಗಾಧಿಕಾರಿಗಳು ಪೂಜಾ ಸಮಿತಿಯ ಅರ್ಜಿಯನ್ನು ತಿರಸ್ಕರಿಸಿದ್ದಾರೆ ಎಂದು ಡಿಎಂ ಈ ಮೊದಲು ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ ಅವರ ಪೀಠಕ್ಕೆ ತಿಳಿಸಿದ್ದರು.
ತಿರುಪತಿಯಲ್ಲಿ ಭಾರೀ ಮಳೆ: ತಿಮ್ಮಪ್ಪನ ದೇಗುಲ ಸುತ್ತ ಪ್ರವಾಹ ಪರಿಸ್ಥಿತಿ
ಶಾರುಖ್ ಪುತ್ರಿಯ ವಿಡಿಯೋ ವೈರಲ್; ಅಭಿಮಾನಿಗಳಿಂದ ಬಂತು ಹೀಗೆಲ್ಲ ಕಮೆಂಟ್ಸ್!!
ಬಿಕ್ಕಟ್ಟು ಉಲ್ಬಣ: ಕೆನಡಾದ 6 ಹಿರಿಯ ರಾಜತಾಂತ್ರಿಕರನ್ನು ಹೊರಹಾಕಿದ ಭಾರತ