newsics.com
ಧಾರವಾಡ: ನಗರದ ಕೆಐಎಡಿಬಿ ಕಾಲನಿಯಲ್ಲಿರುವ ಚಂದ್ರಿಕಾ ಕಟ್ಟಿ ಎಂಬುವರ ಮನೆಯಲ್ಲಿ 3 ಸಾವಿರ ಗೊಂಬೆಗಳನ್ನು ಪ್ರತಿಷ್ಠಾಪಿಸಲಾಗಿದೆ.
ದಾವಣಗೆರೆ ಮೂಲದ ಚಂದ್ರಿಕಾ ಅವರು ಕಳೆದ 27 ವರ್ಷಗಳಿಂದ ಗೊಂಬೆಗಳ ಪ್ರತಿಷ್ಠಾಪನೆ ಮಾಡುತ್ತಾ ಬಂದಿದ್ದಾರೆ.
ರಾಮಾಯಣ ಮತ್ತು ಮಹಾಭಾರತದ ಕತೆಗಳನ್ನು ಆಯಾ ಗೊಂಬೆಗಳ ಮೂಲಕವೇ ಪ್ರಸ್ತುತಪಡಿಸುವ ಪ್ರಯತ್ನ ಮಾಡಲಾಗಿದೆ. ಮಣ್ಣು, ಪೇಪರ್, ಮರ, ಹಿತ್ತಾಳೆ, ಕಂಚು, ಹತ್ತಿ, ಬಟ್ಟೆ ಹಾಗೂ ಮಧುರೈ ಮಣ್ಣಿನಿಂದ ತಯಾರಿಸಿದ ಗೊಂಬೆಗಳನ್ನು ಇಡಲಾಗಿದೆ. ಒಂದಿಷ್ಟು ಗೊಂಬೆಗಳನ್ನು ಬೇರೆ ಕಡೆಯಿಂದ ತರಿಸಿದ್ದರೆ, ಹಲವಾರು ಗೊಂಬೆಗಳನ್ನು ಕುಟುಂಬದವರೆಲ್ಲ ಸೇರಿ ತಯಾರಿಸಿದ್ದಾರೆ.
ಪಟ್ಟದ ಗೊಂಬೆಗಳು, ನವದುರ್ಗೆಯರು, ಮೈಸೂರು ಜಂಬು ಸವಾರಿ ಚಿತ್ರಣ, ನಾಗರಿಕತೆ ಬೆಳೆದು ಬಂದ ವಿಧಾನ, ಸ್ವಾತಂತ್ರ್ಯ ಹೋರಾಟಗಾರರು, ರಾವಣ ದರ್ಬಾರ್ ಹೀಗೆ ಇಡೀ ಗೊಂಬೆಗಳ ಜಗತ್ತೇ ಚಂದ್ರಿಕಾ ಅವರ ಮನೆಯಲ್ಲಿ ಅನಾವರಣಗೊಂಡಿದೆ. ಒಟ್ಟು 3000 ಗೊಂಬೆಗಳನ್ನು ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಿದ್ದಾರೆ