newsics.com
ನವದೆಹಲಿ : ತಮಿಳುನಾಡಿನಲ್ಲಿರುವ ಪಳನಿ ದೇವಸ್ಥಾನದ ಪ್ರಸಾದದ ಬಗ್ಗೆ ಮಾತಾಡಿದ ನಿರ್ದೇಶಕ ಮೋಹನ್ ಜಿ ಕ್ಷತ್ರಿಯನ್ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದ ಮೋಹನ್ ಜಿ, ಪಳನಿ ದೇವಾಲಯದಲ್ಲಿ ನೀಡುತ್ತಿರುವ ಪಂಚಾಮೃತ ಪ್ರಸಾದದಲ್ಲಿ ಮಕ್ಕಳಾಗದೇ ಇರುವ ರೀತಿ ಮಾತ್ರೆಗಳನ್ನು ಬೆರೆಸುತ್ತಿದ್ದರು. ಅಲ್ಲಿ ಕೆಲಸ ಮಾಡುವವರೇ ಈ ವಿಚಾರವನ್ನು ನನಗೆ ನನಗೆ ಹೇಳಿದ್ದರು ಎಂದಿದ್ದಾರೆ. ಇಲ್ಲಿನ ಪ್ರಸಾದದ ಬಗ್ಗೆ ದೇವಾಲಯವಾಗಲಿ, ಸರ್ಕಾರವಾಗಲಿ ಅಧಿಕೃತ ಹೇಳಿಕೆ ನೀಡಿಲ್ಲ. ಆದ್ರೆ ನನಗೆ ಗೊತ್ತಿರುವವರು ದೇವಾಲಯದಲ್ಲಿದ್ದಾರೆ, ಅವರೇ ಈ ವಿಚಾರ ನನಗೆ ಹೇಳಿದ್ದಾರೆ ಎಂದು ನಿರ್ದೇಶಕ ಮೋಹನ್ ಹೇಳಿದ್ದಾರೆ.
ನಿರ್ದೇಶಕನ ಹೇಳಿಕೆ ಆಧರಿಸಿ ತಿರುಚಿ ಪೊಲೀಸರು ಮೋಹನ್ ಅವರನ್ನು ಚೆನ್ನೈನಲ್ಲಿ ಬಂಧಿಸಿ ತಿರುಚಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಮಿಳಿನ ಕೆಲವು ಮಾಧ್ಯಮಗಳು ವರದಿ ಮಾಡಿವೆ.
‘ಬಕಾಸುರನ್’, ‘ದ್ರೌಪದಿ’ ಇನ್ನೂ ಕೆಲವು ತಮಿಳು ಸಿನಿಮಾಗಳನ್ನು ಮೋಹನ್ ನಿರ್ದೇಶನ ಮಾಡಿದ್ದಾರೆ. ಪಳನಿ ದೇವಸ್ಥಾನದ ಪ್ರಸಾದದ ಬಗ್ಗೆ ಮಾತಾಡಿದ್ದ ಮೋಹನ್ ಇದೀಗ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.