newsics.com
ಬೆಂಗಳೂರು : ನೋಯ್ಡಾದಲ್ಲಿ ಇಬ್ಬರು ಮಕ್ಕಳು ಶಾಲೆಯನ್ನು ತೊರೆದು ಯಾರಿಗೂ ಸಿಗದಂತೆ ಓಡಿ ಹೋಗುವಂತ ಅನಿವಾರ್ಯತೆಗೆ ನೂಕಿದೆ.
ಅರುಣ್ ಚೌರಾಸಿ ಹಾಗೂ ನಿತಿನ್ ಧ್ಯಾನ್ ಅನ್ನುವ ವಿದ್ಯಾರ್ಥಿಗಳು ಉತ್ತರಾಖಂಡ್ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದರು. ಇಂಟರ್ನಲ್ ಟೆಸ್ಟ್ನಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಅವರ ಕ್ಲಾಸ್ ಟೀಚರ್ ಬೈದು, ಮಾರ್ಕ್ಸ್ ಕಾರ್ಡ್ಗೆ ಪೋಷಕರ ಸಹಿ ಮಾಡಿಸಿಕೊಂಡು ಬರಬೇಕು ಮತ್ತು ಪೋಷಕರನ್ನು ಶಾಲೆಗೆ ಕರೆದುಕೊಂಡು ಬಂದು ನಮಗೆ ಭೇಟಿ ಮಾಡಿಸಬೇಕು ಎಂದು ಆಗ್ರಹಿಸಿದ್ದರು. ಶಾಲೆಯನ್ನೇ ಬಿಟ್ಟು ಓಡಿ ಹೋಗೊಣ ಎಂದು ನಿರ್ಧರಿಸಿ ಅದೇ ದಿನ ಸಂಜೆಯಿಂದ ಇಬ್ಬರೂ ನಾಪತ್ತೆಯಾಗಿದ್ದರು. ಯಾವಾಗ ರಾತ್ರಿಯಾದರೂ ಮಕ್ಕಳು ಬರಲಿಲ್ಲವೋ ಆತಂಕಗೊಂಡ ಪಾಲಕರು ಪೊಲೀಸ್ ಠಾಣೆಗೆ ಹೋಗಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದಾರೆ.
ಸ್ಕೂಲ್ ಗೇಟ್ ಬಳಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಹುಡುಗರ ದೃಶ್ಯಗಳು ಕಾಣಿಸಿದ್ದವು. ಕೊನೆಗೆ ಮಫ್ತಿಯಲ್ಲಿ ಹೊರಟ ಪೊಲೀಸರು ಮಕ್ಕಳ ಪತ್ತೆ ಕಾರ್ಯಕ್ಕೆ ಮುಂದಾದರು. ಸರ್ವಪ್ರಯತ್ನಗಳ ಬಳಿಕ ಇಬ್ಬರು ಮಕ್ಕಳು ದೆಹಲಿಯ ಆನಂದ ವಿಹಾರದಲ್ಲಿ ಪತ್ತೆಯಾಗಿದ್ದಾರೆ.
ಇಬ್ಬರು ಮಕ್ಕಳನ್ನು ಸುರಕ್ಷಿತವಾಗಿ ನೋಯ್ಡಾಗೆ ಕರೆದುಕೊಂಡ ಬಂದ ಪೊಲೀಸರು ಅವರ ಪಾಲಕರಿಗೆ ಒಪ್ಪಿಸಿದ್ದಾರೆ.
https://twitter.com/NgoPatelNagar/status/1832463191600730409