newsics.com | ನ್ಯೂಸಿಕ್ಸ್
ರಾಯಪುರ: 50 ವರ್ಷದ ಮಹಿಳೆಯೊಬ್ಬರನ್ನು ಭೀಕರವಾಗಿ ಹತ್ಯೆಗೈದು, ಆಕೆಯ ಶವದ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವಿಕೃತ ಕಾಮಿಯನ್ನು ಪೊಲೀಸರು ಬಂಧಿಸಿರುವ ಘಟನೆ ಛತ್ತೀಸ್ ಗಢದ ಬೆಮೆತಾರಾ ಜಿಲ್ಲೆಯಲ್ಲಿ ನಡೆದಿದೆ. ಸೋನ್ಪುರಿ ಗ್ರಾಮದ ನಿವಾಸಿ, 42 ವರ್ಷದ ರಾಮಪ್ರಸಾದ್ ಸೋನ್ವಾನಿ ಬಂಧಿತ ಆರೋಪಿ.
https://youtube.com/shorts/l5ola2ZbKBY?si=HLzDOO-WOUEI5JJw
ಜುಲೈ 6ರ ತಡರಾತ್ರಿ ಆರೋಪಿ ರಾಮಪ್ರಸಾದ್ ಮಹಿಳೆಯ ಮನೆಗೆ ಅಕ್ರಮವಾಗಿ ನುಗ್ಗಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ತೀವ್ರವಾಗಿ ಪ್ರತಿರೋಧ ತೋರಿದ್ದರಿಂದ ರೊಚ್ಚಿಗೆದ್ದ ಆತ, ಗುದ್ದಲಿಯಿಂದ ತಲೆಗೆ ಹೊಡೆದು ಆಕೆಯನ್ನು ಕೊಲೆ ಮಾಡಿದ್ದಾನೆ. ಆದರೆ, ಕೊಲೆಯ ಬಳಿಕ ಆರೋಪಿಯ ವಿಕೃತ ಮನಸ್ಸು ಜಾಗೃತಗೊಂಡಿದೆ. ಮೃತದೇಹದೊಂದಿಗೆ ಕಾಮ ತೀರಿಸಿಕೊಳ್ಳುವ ‘ನೆಕ್ರೋಫಿಲಿಯಾ’ (Necrophilia) ಎಂಬ ಮಾನಸಿಕ ವಿಕೃತಿಯಿಂದ ಬಳಲುತ್ತಿದ್ದ ಈತ, ಮಹಿಳೆಯ ನಿರ್ಜೀವ ದೇಹದ ಮೇಲೆಯೇ ಅತ್ಯಾಚಾರ ಎಸಗಿದ್ದಾನೆ.
ಸಾಕ್ಷ್ಯ ನಾಶಕ್ಕೆ ಶವ ತುಂಡರಿಸಿದ ಪಾಪಿ
ಅಷ್ಟಕ್ಕೇ ನಿಲ್ಲದ ಈತನ ರಾಕ್ಷಸಿ ಪ್ರವೃತ್ತಿ, ಕೃತ್ಯದ ಸಾಕ್ಷ್ಯವನ್ನು ನಾಶಪಡಿಸಲು ಗರಗಸ ತಂದು ಶವವನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ. ಕತ್ತರಿಸಿದ ದೇಹದ ಭಾಗಗಳೊಂದಿಗೂ ಮತ್ತೆ ವಿಕೃತ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ರಾತ್ರಿಯಿಡೀ ಶವದ ಭಾಗಗಳನ್ನು ತನ್ನ ಗುಡಿಸಲಿನಲ್ಲೇ ಇಟ್ಟುಕೊಂಡಿದ್ದ ಆರೋಪಿ, ಮರುದಿನ ರಾತ್ರಿ ಅವುಗಳನ್ನು ಬಟ್ಟೆಯಲ್ಲಿ ಸುತ್ತಿ ಶಿವನಾಥ್ ನದಿಗೆ ಹರಿಯುವ ಅಮರಯ್ಯ ಹೊಳೆಗೆ ಎಸೆದು ಪರಾರಿಯಾಗಿದ್ದ. ಹೊಳೆಯಲ್ಲಿ ತೇಲಿಬಂದ ಶವದ ಭಾಗಗಳನ್ನು ಕಂಡು ಮಹಿಳೆಯ ಮಗ ಪೊಲೀಸರಿಗೆ ದೂರು ನೀಡಿದಾಗ ಈ ಘೋರ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಕರಣ ದಾಖಲಾಗುತ್ತಿದ್ದಂತೆ ಎಚ್ಚೆತ್ತ ಬೆಮೆತಾರಾ ಎಸ್ಪಿ ತ್ರಿಲೋಕ್ ಬನ್ಸಾಲ್ ನೇತೃತ್ವದ ತಂಡ ಡ್ರೋನ್, ಶ್ವಾನ ದಳ ಹಾಗೂ ವಿಧಿವಿಜ್ಞಾನ ತಜ್ಞರ ನೆರವಿನಿಂದ ತನಿಖೆ ಚುರುಕುಗೊಳಿಸಿತ್ತು. ತಾಂತ್ರಿಕ ಪುರಾವೆಗಳ ಆಧಾರದ ಮೇಲೆ ರಾಮಪ್ರಸಾದ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.
ವಿಶೇಷವೆಂದರೆ ಈ ಆರೋಪಿ ರಾಮಪ್ರಸಾದ್ 2017 ರಲ್ಲೂ ಮತ್ತೊಬ್ಬ ಮಹಿಳೆಯ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಪುನರಾವರ್ತಿತ ಅಪರಾಧಿಯಾಗಿದ್ದಾನೆ. ಆರೋಪಿಯ ಹೇಳಿಕೆಯ ಮೇರೆಗೆ ಕೊಲೆಗೆ ಬಳಸಿದ ಗುದ್ದಲಿ ಹಾಗೂ ಶವ ಕತ್ತರಿಸಿದ ಗರಗಸವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಪ್ರಸ್ತುತ ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಕಠಿಣ ಸೆಕ್ಷನ್ಗಳ ಅನ್ವಯ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
Landslide Alert ಭೂಕುಸಿತ ಭೀತಿ; ಮನೆ ಖಾಲಿ ಮಾಡಲು ನಿರಾಕರಿಸಿದ ನಿವಾಸಿಗಳು, ಬದಲಿ ಜಾಗಕ್ಕೆ ಪಟ್ಟು