Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Mysuru Dasara ಮೈಸೂರು ದಸರಾ ಮಹೋತ್ಸವಕ್ಕೆ ಮುಹೂರ್ತ ಫಿಕ್ಸ್: ಆಗಸ್ಟ್‌ನಿಂದಲೇ ಆರಂಭವಾಗಲಿದೆ ನಾಡಹಬ್ಬದ ಸಾಂಪ್ರದಾಯಿಕ ಸಡಗರ
ಪ್ರಮುಖಕರ್ನಾಟಕ

Mysuru Dasara ಮೈಸೂರು ದಸರಾ ಮಹೋತ್ಸವಕ್ಕೆ ಮುಹೂರ್ತ ಫಿಕ್ಸ್: ಆಗಸ್ಟ್‌ನಿಂದಲೇ ಆರಂಭವಾಗಲಿದೆ ನಾಡಹಬ್ಬದ ಸಾಂಪ್ರದಾಯಿಕ ಸಡಗರ

Share
1 Min Read
SHARE

newsics.com | ನ್ಯೂಸಿಕ್ಸ್

ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬದ ಆಚರಣೆಗೆ ರಾಜ್ಯ ಸರ್ಕಾರ ಭರ್ಜರಿ ಸಿದ್ಧತೆ ಆರಂಭಿಸಿದೆ. ಈ ಬಾರಿಯ ದಸರಾ ಮಹೋತ್ಸವದ ಪೂರ್ವ ಸಿದ್ಧತೆಗಳ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇಂದು ರಾಜಧಾನಿಯಲ್ಲಿ ಮಹತ್ವದ ಸಭೆ ನಡೆಯಿತು.

ಹೌದು, ಈ ಮಹತ್ವದ ಸಭೆಯಲ್ಲಿ ನವರಾತ್ರಿ ಸಂಭ್ರಮದ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ದಿನಾಂಕ ಮತ್ತು ಮುಹೂರ್ತವನ್ನು ಅಧಿಕೃತವಾಗಿ ಅಂತಿಮಗೊಳಿಸಲಾಗಿದೆ.

ಈ ಬಾರಿಯ ನವರಾತ್ರಿ ಉತ್ಸವಕ್ಕೆ ಅಕ್ಟೋಬರ್ 11 ರಂದು ಅಧಿಕೃತ ಚಾಲನೆ ಸಿಗಲಿದೆ. ಅಂದು ಬೆಳಗ್ಗೆ 11:50 ಕ್ಕೆ ಮೈಸೂರಿನ ಪವಿತ್ರ ಚಾಮುಂಡಿ ಬೆಟ್ಟದಲ್ಲಿ, ಶುಭ ಧನುರ್ ಲಗ್ನದಲ್ಲಿ ದಸರಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ.

ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಆನೆಗಳ ‘ಗಜ ಪಯಣ’ ಮತ್ತು ಗಜ ಪಡೆಗೆ ಪೂಜೆ ಸಲ್ಲಿಸುವ ಕಾರ್ಯಕ್ರಮಕ್ಕೆ ಆಗಸ್ಟ್ 26 ರಂದು ಮುಹೂರ್ತ ನಿಗದಿಪಡಿಸಲಾಗಿದೆ. ಅಂದಿನಿಂದಲೇ ದಸರಾ ಆನೆಗಳು ಮೈಸೂರಿನತ್ತ ಮುಖ ಮಾಡಲಿವೆ.

ಇನ್ನು, ವಿಶ್ವದ ಗಮನ ಸೆಳೆಯುವ ವಿಜಯದಶಮಿ ಮೆರವಣಿಗೆ ಮತ್ತು ಜಂಬೂ ಸವಾರಿಯು ಅಕ್ಟೋಬರ್ 21 ರಂದು ಜರುಗಲಿದೆ. ಅಂದು ಮಧ್ಯಾಹ್ನ 1:36 ಕ್ಕೆ ನಂದಿ ಧ್ವಜಕ್ಕೆ ಪೂಜೆ ಸಲ್ಲಿಕೆಯಾಗಲಿದೆ. ತದನಂತರ ಶುಭ ಮೀನ ಲಗ್ನದಲ್ಲಿ, ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿರುವ ತಾಯಿ ಚಾಮುಂಡೇಶ್ವರಿ ದೇವಿಗೆ ಸಾಂಪ್ರದಾಯಿಕವಾಗಿ ಪುಷ್ಪಾರ್ಚನೆ ಮಾಡುವ ಮೂಲಕ ಭವ್ಯ ಮೆರವಣಿಗೆಗೆ ಗ್ರೀನ್ ಸಿಗ್ನಲ್ ಸಿಗಲಿದೆ.

ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಜರುಗಲಿರುವ ಮೊದಲ ದಸರಾ ಮಹೋತ್ಸವ ಇದಾಗಿದೆ. ಈ ಹಿನ್ನೆಲೆಯಲ್ಲಿ ಇಡೀ ಹಬ್ಬವನ್ನು ಎಂದಿಗಿಂತಲೂ ಹೆಚ್ಚು ಸಡಗರ, ಸಂಭ್ರಮ ಹಾಗೂ ಅದ್ಧೂರಿಯಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ನಾಡಹಬ್ಬದ ಯಶಸ್ಸಿಗೆ ಬೇಕಾದ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಿಎಂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ತಿಂಗಳಿಗೆ ₹9,250 ಗಳಿಸುವ ಸುವರ್ಣಾವಕಾಶ https://www.newsics.com/2026/07/10/post-office-mis-scheme-details/

TAGGED:#mysuru #Dasara #DK Shivakumar #Chamundi Hills #Jamboo Savari
Share This Article
Facebook Twitter Copy Link Print
Previous Article Relationship Tips ಸಂಬಂಧ ಗಟ್ಟಿಯಾಗಿಸಲು ಸಂಗಾತಿಗೆ ಹೇಳಬೇಕಾದ ‘5 ಸಿಹಿ ಸುಳ್ಳುಗಳು’ ಇವು
Next Article Voter Id Case ಪ್ರಕಾಶ್ ರಾಜ್‌ಗೆ ಬಿಗ್ ರಿಲೀಫ್: ವೋಟರ್ ಐಡಿ ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನು ಮಂಜೂರು

Popular Posts

Gold Price 10 ಗ್ರಾಂ ಚಿನ್ನದ ಉಂಗುರಕ್ಕೆ ಮೇಕಿಂಗ್ ಚಾರ್ಜ್ ಸೇರಿ ಬಿಲ್ ಎಷ್ಟಾಗುತ್ತೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ

2 Min Read

​Modi- Newzealand 4 ದಶಕ ಬಳಿಕ ನ್ಯೂಜಿಲ್ಯಾಂಡ್‌ಗೆ ಭಾರತದ ಪ್ರಧಾನಿ ಭೇಟಿ: ಆಕ್ಲೆಂಡ್‌ ತಲುಪಿದ ಮೋದಿ

1 Min Read

Dog Attack ಕರ್ತವ್ಯದಲ್ಲಿದ್ದ ಬಿಎಲ್‌ಒ ಮೇಲೆ ಮುಗಿಬಿದ್ದ ಸಾಕು ನಾಯಿ; ಆಸ್ಪತ್ರೆಗೆ ದಾಖಲು

0 Min Read

Voter Id Case ಪ್ರಕಾಶ್ ರಾಜ್‌ಗೆ ಬಿಗ್ ರಿಲೀಫ್: ವೋಟರ್ ಐಡಿ ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನು ಮಂಜೂರು

1 Min Read

You Might Also Like

ಪ್ರಮುಖರಿಲೇಷನ್‌ಶಿಪ್

Relationship Tips ಸಂಬಂಧ ಗಟ್ಟಿಯಾಗಿಸಲು ಸಂಗಾತಿಗೆ ಹೇಳಬೇಕಾದ ‘5 ಸಿಹಿ ಸುಳ್ಳುಗಳು’ ಇವು

2 Min Read
ಪ್ರಮುಖಕರ್ನಾಟಕ

Kannada Novelist ಸಾಹಿತ್ಯ ಲೋಕದಲ್ಲಿ ಶೋಕದ ಛಾಯೆ: ಹಿರಿಯ ಕಾದಂಬರಿಕಾರ್ತಿ ಸಿ.ಎನ್. ಮುಕ್ತಾ ಇನ್ನಿಲ್ಲ

1 Min Read
ಪ್ರಮುಖದೇಶಮನರಂಜನೆ

Bollywood ಚೆಕ್ ಬೌನ್ಸ್ ಕೇಸ್: ಬಾಲಿವುಡ್ ನಟ ರಾಜ್‌ಪಾಲ್ ಯಾದವ್‌ಗೆ 3 ತಿಂಗಳು ಜೈಲು ಶಿಕ್ಷೆ

1 Min Read
ಪ್ರಮುಖದೇಶ

Post Office Scheme ಶೇ. 7.4 ರಷ್ಟು ಬಡ್ಡಿಯ ಬಂಪರ್ ಆಫರ್: ಅಂಚೆ ಕಚೇರಿಯ ಈ ಖಾತೆಯಲ್ಲಿದೆ ತಿಂಗಳಿಗೆ ₹9,250 ಗಳಿಸುವ ಸುವರ್ಣಾವಕಾಶ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?