newsics.com | ನ್ಯೂಸಿಕ್ಸ್
ಅಯೋಧ್ಯೆ: ತಾವು ರಾಮಮಂದಿರಕ್ಕೆ ಕೊಡುಗೆಯಾಗಿ ನೀಡಿದ್ದ ₹5 ಕೋಟಿ ಮೌಲ್ಯದ ಚಿನ್ನಲೇಪಿತ ಗ್ರಂಥ ರಾಮಚರಿತ ಮಾನಸ ಸುರಕ್ಷತೆಯ ಬಗ್ಗೆ ಕೇಂದ್ರದ ಮಾಜಿ ಗೃಹ ಕಾರ್ಯದರ್ಶಿ ಎಸ್. ಲಕ್ಷ್ಮೀನಾರಾಯಣ ಆತಂಕ ವ್ಯಕ್ತಪಡಿಸಿದ್ದಾರೆ.
ಅಯೋಧ್ಯೆ ರಾಮಮಂದಿರದ ದೇಣಿಗೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪಗಳ ಬೆನ್ನಲ್ಲೇ, ಮಂದಿರಕ್ಕೆ ಕಾಣಿಕೆಯಾಗಿ ನೀಡಲಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದ ಗ್ರಂಥದ ಸುರಕ್ಷತೆಯ ಬಗ್ಗೆಯೂ ಈಗ ಆತಂಕ ಶುರುವಾಗಿದೆ.
ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಎಸ್. ಲಕ್ಷ್ಮಿನಾರಾಯಣ್ ಅವರು ತಮ್ಮ ತಾಯಿಯ ನೆನಪಿನಲ್ಲಿ ₹5 ಕೋಟಿ ಮೌಲ್ಯದ, 147 ಕೆಜಿ ತೂಕದ ಚಿನ್ನದ ಲೇಪಿತ ‘ರಾಮಚರಿತಮಾನಸ’ ಗ್ರಂಥವನ್ನು 2024ರ ಏಪ್ರಿಲ್ನಲ್ಲಿ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ಗೆ ಹಸ್ತಾಂತರಿಸಿದ್ದರು. ಆರಂಭದಲ್ಲಿ 5 ತಿಂಗಳು ಇದನ್ನು ಪ್ರದರ್ಶನಕ್ಕೆ ಇಡಲಾಗಿತ್ತಾದರೂ, ಪ್ರಸ್ತುತ ಅದನ್ನು ಅಲ್ಲಿಂದ ತೆಗೆಯಲಾಗಿದೆ. ಟ್ರಸ್ಟ್ನಿಂದ ಇದಕ್ಕೆ ಯಾವುದೇ ಅಧಿಕೃತ ರಶೀದಿಯೂ ಸಿಕ್ಕಿಲ್ಲ ಎಂದು ಲಕ್ಷ್ಮಿನಾರಾಯಣ್ ಕಳವಳ ವ್ಯಕ್ತಪಡಿಸಿದ್ದು, ಸದ್ಯ ಮಂದಿರದ ದೇಣಿಗೆ ವಿವಾದವನ್ನು ಉತ್ತರ ಪ್ರದೇಶ ಸರ್ಕಾರದ ಎಸ್ಐಟಿ (SIT) ತನಿಖೆ ನಡೆಸುತ್ತಿದೆ.
Great Green Wall ಆಫ್ರಿಕಾದಲ್ಲಿ ಜಗತ್ತಿನ ಅತಿ ದೊಡ್ಡ ‘ಹಸಿರು ಮಹಾಗೋಡೆ’! ಉತ್ರರ ಕರ್ನಾಟಕದಲ್ಲಿ ಯಾವಾಗ?