newsics.com/ನ್ಯೂಸಿಕ್ಸ್
ಬೆಂಗಳೂರು: ಭಾರತದ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಸೂರ್ಯ ಕಾಂತ್ ಅವರು ಜೂನ್ 4 ರಂದು ಲಂಡನ್ನ ಬಿರ್ಕ್ಬೆಕ್, ಲಂಡನ್ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಉಪನ್ಯಾಸ ನೀಡಿದರು. ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾರಿ ಹೈಡ್ರಾಮಾ ನಡೆದಿದೆ.
ಭಾರತದಲ್ಲಿ ಭಿನ್ನಮತವನ್ನು ಹತ್ತಿಕ್ಕಲಾಗುತ್ತಿದೆ ಎಂಬ ಆರೋಪ ಹಾಗೂ ಸಿಜೆಐ ಅವರ ಹಳೆಯ ವಿವಾದಾತ್ಮಕ ಹೇಳಿಕೆಯೊಂದರ ಕುರಿತು ಸಾರ್ವಜನಿಕರು ಮತ್ತು ಸಂಘಟಕರ ನಡುವೆ ಲಂಡನ್ ಅಂಗಳದಲ್ಲೇ ತೀವ್ರ ವಾಗ್ವಾದ ನಡೆದಿದೆ.
ಭಿನ್ನಮತ ಹತ್ತಿಕ್ಕುವ ಆರೋಪ: ಸಭೆಯಲ್ಲಿದ್ದ ಮಹಿಳೆಯೊಬ್ಬರು ಎದ್ದು ನಿಂತು, ಭಾರತದಲ್ಲಿ ಭಿನ್ನಮತ ವ್ಯಕ್ತಪಡಿಸುವವರ ವಿರುದ್ಧ ತೀವ್ರ ಹಗಲತ್ತನ ಬೆಳೆಯುತ್ತಿದ್ದು, ಜಾಗತಿಕ ಕಾನೂನು ವೀಕ್ಷಕರು ಈ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ ಎಂದು ನೇರವಾಗಿ ಪ್ರಶ್ನೆ ಎತ್ತಿದರು.
ಜಿರಳೆ ಹೇಳಿಕೆಯ ಕಿಡಿ: ಮತ್ತೊಬ್ಬ ಸಭಿಕರು ನೇರವಾಗಿ ಸಿಜೆಐ ಸೂರ್ಯ ಕಾಂತ್ ಅವರಿಗೆ, ಕಳೆದ ತಿಂಗಳು ಭಾರತದಲ್ಲಿ ಯುವಕರನ್ನು ಕುರಿತು ನೀವು ನೀಡಿದ್ದ ಜಿರಳೆಗಳು (lಮತ್ತು ಪರಾವಲಂಬಿಗಳು ಎಂಬ ಹೇಳಿಕೆಯ ಅರ್ಥವೇನು? ಎಂದು ಕೇಳಿ ತರಾಟೆಗೆ ತೆಗೆದುಕೊಂಡರು.
ಸಂಘಟಕರ ಬ್ರೇಕ್: ಈ ಪ್ರಶ್ನೆಗಳು ಬರುತ್ತಿದ್ದಂತೆ ಮಧ್ಯಪ್ರವೇಶಿಸಿದ ಕಾರ್ಯಕ್ರಮದ ಆಂಕರ್/ಸಂಘಟಕರು, “ಇಂದಿನ ವಿಷಯ ಕೇವಲ ಕೃತಕ ಬುದ್ಧಿಮತ್ತೆ (AI) ಮತ್ತು ಅಂತರಾಷ್ಟ್ರೀಯ ಕಾನೂನಿಗೆ ಮಾತ್ರ ಸೀಮಿತವಾಗಿದೆ, ರಾಜಕೀಯ ಪ್ರಶ್ನೆಗಳಿಗೆ ಅವಕಾಶವಿಲ್ಲ” ಎಂದು ಪ್ರಶ್ನೆಯನ್ನು ತಳ್ಳಿಹಾಕಿದರು. ಇದು ಸಭಿಕರು ಹಾಗೂ ಸಂಘಟಕರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.
ಒಬ್ಬಂಟಿಯಾದ ಸಿದ್ದರಾಮಯ್ಯ: ಸಿಎಂ ಡಿಕೆ ಎದುರಾದರೂ ಮಾತಿಲ್ಲ! ವಿಡಿಯೋ ನೋಡಿ