newsics.com | ನ್ಯೂಸಿಕ್ಸ್
ಬೆಂಗಳೂರು: ರಾಜಧಾನಿಯ ರಸ್ತೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹಲವು ದಿನಗಳಿಂದ ಅನಾಥವಾಗಿ ಬಿದ್ದಿರುವ ವಾಹನಗಳನ್ನು ತೆರವುಗೊಳಿಸಲು ಮತ್ತು ಹರಾಜು ಹಾಕಲು ಜಿಬಿಎ (GBA) ಹಾಗೂ ಸಂಚಾರಿ ಪೊಲೀಸರು ಜಂಟಿಯಾಗಿ ಬೃಹತ್ ಕಾರ್ಯಾಚರಣೆಗೆ ಸಜ್ಜಾಗಿದ್ದಾರೆ.
ಹೌದು, ಜುಲೈ 10ರಿಂದಲೇ ಈ ತೆರವು ಕಾರ್ಯ ಅಧಿಕೃತವಾಗಿ ಚಾಲನೆ ಪಡೆಯಲಿದ್ದು, ನಗರದ 5 ಪಾಲಿಕೆ ವ್ಯಾಪ್ತಿಗಳಲ್ಲಿ ಈಗಾಗಲೇ ಇಂತಹ ಅನಾಥ ವಾಹನಗಳನ್ನು ಗುರುತಿಸಲಾಗಿದೆ. ಸಾರ್ವಜನಿಕ ಸ್ಥಳಗಳನ್ನು ಮುಕ್ತಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಕಾರ್ಯಾಚರಣೆ ಹೇಗೆ ನಡೆಯಲಿದೆ?
- ನೋಟಿಸ್ ಅಂಟಿಸುವುದು: ಮೊದಲು ಗುರುತಿಸಲಾದ ಅನಾಥ ವಾಹನಗಳ ಮೇಲೆ ಅಧಿಕಾರಿಗಳು 7 ದಿನಗಳ ಗಡುವು ನೀಡುವ ಅಧಿಕೃತ ಸ್ಟಿಕ್ಕರ್ ಮಾದರಿಯ ನೋಟಿಸ್ ಅನ್ನು ಅಂಟಿಸಲಿದ್ದಾರೆ.
- ವೀಲ್ ಕ್ಲಾಂಪ್ ಅಳವಡಿಕೆ: ನೋಟಿಸ್ ನೀಡಿದ ತಕ್ಷಣವೇ ಆ ವಾಹನಗಳ ಚಕ್ರಗಳಿಗೆ ವೀಲ್ ಕ್ಲಾಂಪ್ಗಳನ್ನು ಹಾಕಿ ಲಾಕ್ ಮಾಡಲಾಗುತ್ತದೆ.
- 7 ದಿನಗಳ ಕಾಲಾವಕಾಶ: ವಾಹನದ ಮಾಲೀಕರಿಗೆ ತಮ್ಮ ವಾಹನವನ್ನು ಸ್ವತಃ ತೆರವುಗೊಳಿಸಲು 7 ದಿನಗಳ ಕಾಲಾವಕಾಶ ಇರಲಿದೆ.
- ಜಪ್ತಿ ಮತ್ತು ಹರಾಜು: ನೀಡಲಾದ ಗಡುವಿನ ಒಳಗಾಗಿ ಮಾಲೀಕರು ವಾಹನವನ್ನು ಸಾಗಿಸದಿದ್ದರೆ, ಜಿಬಿಎ ಸಿಬ್ಬಂದಿ ಆ ವಾಹನಗಳನ್ನು ಟೋಯಿಂಗ್ (ಎಳೆದುಕೊಂಡು) ಮಾಡಿಕೊಂಡು ಹೋಗಿ ಜಪ್ತಿ ಮಾಡಲಿದ್ದಾರೆ. ಬಳಿಕ ನಿಯಮಾನುಸಾರ ಆ ಎಲ್ಲಾ ವಾಹನಗಳನ್ನು ಬಹಿರಂಗ ಹರಾಜು ಪ್ರಕ್ರಿಯೆಗೆ ಒಳಪಡಿಸಲಾಗುವುದು ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Alcohol ಆಲ್ಕೋಹಾಲ್ ಪ್ರಿಯರೇ ಎಚ್ಚರ: ನಿಮ್ಮ ಹಾರ್ಟ್ ಸುರಕ್ಷಿತವಾಗಿರಬೇಕಾದ್ರೆ ಇಂದೇ ಈ ಕೆಲಸ ಮಾಡಿ