newsics.com | ನ್ಯೂಸಿಕ್ಸ್
ಶಾಲಿವಾಹನ ಶಕೆಯ ಪರಾಭವ ಸಂವತ್ಸರದ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಚತುರ್ಥೀ ತಿಥಿಯಾದ ಇಂದು, ದ್ವಾದಶ ರಾಶಿಗಳ ಫಲಫಲಗಳು ಹೀಗಿವೆ. ವೈದ್ಯಕೀಯ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಗೃಹ ನಿರ್ಮಾಣ ಕಾರ್ಯದಲ್ಲಿ ತೊಡಗಿರುವವರಿಗೆ ಇಂದು ಮಿಶ್ರಫಲದ ದಿನವಾಗಿದೆ.
ಇಂದಿನ ಪಂಚಾಂಗ ವಿವರ
ಇಂದು ಗ್ರೀಷ್ಮ ಋತು, ಮಿಥುನ ಸೌರಮಾಸದ ಆರ್ದ್ರಾ ಮಹಾನಕ್ಷತ್ರದ ದಿನವಾಗಿದೆ. ನಿತ್ಯನಕ್ಷತ್ರ ಧನಿಷ್ಠಾ ಹಾಗೂ ವಿಷ್ಕಂಭ ಯೋಗವಿದ್ದು, ಭದ್ರ ಕರಣವಿದೆ.
- ಸೂರ್ಯೋದಯ: ಮುಂಜಾನೆ 05:58ಕ್ಕೆ
- ಸೂರ್ಯಾಸ್ತ: ಸಂಜೆ 06:48ಕ್ಕೆ
- ರಾಹು ಕಾಲ: ಬೆಳಿಗ್ಗೆ 10:48 ರಿಂದ ಮಧ್ಯಾಹ್ನ 12:24
- ಯಮಗಂಡ ಕಾಲ: ಮಧ್ಯಾಹ್ನ 15:36 ರಿಂದ ಸಂಜೆ 17:13
- ಗುಳಿಕ ಕಾಲ: ಬೆಳಿಗ್ಗೆ 07:34 ರಿಂದ 09:11
ದ್ವಾದಶ ರಾಶಿಗಳ ಇಂದಿನ ಭವಿಷ್ಯ
ಮೇಷ ರಾಶಿ: ವೈದ್ಯಕೀಯ ಕ್ಷೇತ್ರದ ವಿದ್ಯಾರ್ಥಿಗಳಿಗೆ ಇಂದು ಹೆಚ್ಚಿನ ತೊಂದರೆಗಳು ಎದುರಾಗಬಹುದು. ಈವೆಂಟ್ ಮ್ಯಾನೇಜ್ಮೆಂಟ್ ಅಥವಾ ಕಾರ್ಯಕ್ರಮಗಳ ನಿರ್ವಹಣೆ ಮಾಡುವವರಿಗೆ ಬರಬೇಕಾದ ಹಣ ಸಕಾಲಕ್ಕೆ ಬಾರದೆ ಕಷ್ಟವಾಗಲಿದೆ. ಭೂಮಿಗೆ ಸಂಬಂಧಿಸಿದ ಕಾನೂನು ವಿಚಾರಗಳು ನ್ಯಾಯಾಲಯದ ಮೆಟ್ಟಿಲೇರಿದರೂ ಬಗೆಹರಿಯುವುದು ಕಷ್ಟ. ನಿಮ್ಮ ಅತಿಯಾದ ಕಲ್ಪನೆಗಳು ಭಗ್ನಗೊಂಡು ದುಃಖ ತರಬಹುದು. ಆದರೂ ಆತ್ಮವಿಶ್ವಾಸ ಕಳೆದುಕೊಳ್ಳದೆ ಮುನ್ನಡೆಯಿರಿ.
ವೃಷಭ ರಾಶಿ: ಹಣ ಉಳಿಸುವ ನಿಮ್ಮ ಪ್ರಯತ್ನಗಳು ಕೈಮೀರಿ ಹೋಗುವ ಸಾಧ್ಯತೆ ಇದೆ. ಅನಗತ್ಯ ಪ್ರಯಾಣವನ್ನು ತಪ್ಪಿಸುವುದು ಒಳಿತು. ಹಣಕಾಸಿನ ವಿಚಾರವಾಗಿ ಮನೆಯಲ್ಲಿ ಜಗಳಗಳು ಉಂಟಾಗಬಹುದು. ನಿಮ್ಮ ವಾಹನಕ್ಕೆ ಇತರರಿಂದ ಅಪಾಯವಿರುವುದರಿಂದ ಚಾಲನೆಯಲ್ಲಿ ಜಾಗರೂಕತೆ ಇರಲಿ. ಸಂಗಾತಿಯನ್ನು ತಮಾಷೆ ಮಾಡಲು ಹೋಗಿ ಮನಸ್ತಾಪ ಮಾಡಿಕೊಳ್ಳಬೇಡಿ. ಆರೋಗ್ಯದ ದೃಷ್ಟಿಯಿಂದ ವಾತಶಮನಕ್ಕೆ ವೈದ್ಯರನ್ನು ಭೇಟಿಯಾಗುವುದು ಉತ್ತಮ.
ಮಿಥುನ ರಾಶಿ: ಕೇವಲ ಚಿಂತನೆಯಿಂದಲೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಇಂದು ಕಷ್ಟವೆನಿಸಬಹುದು. ಸಂಪತ್ತು ವೃದ್ಧಿಯಾಗುವ ಜೊತೆಗೆ ಶತ್ರುಗಳ ಕಾಟವೂ ಹೆಚ್ಚಾಗಲಿದೆ. ಹಿಂದೆ ದಾನವಾಗಿ ನೀಡಿದ ವಸ್ತುವನ್ನು ಮರಳಿ ಕೇಳಿ ಪಡೆಯುವ ಸಂದರ್ಭ ಬರಬಹುದು. ಕುಟುಂಬವನ್ನು ನಡೆಸುವ ಜವಾಬ್ದಾರಿ ನಿಮ್ಮ ಹೆಗಲೇರಲಿದೆ. ಇಂದು ಅನವಶ್ಯಕ ವಸ್ತುಗಳ ಮೇಲೆ ಮೋಹ ಉಂಟಾಗಲಿದ್ದು, ಸಂತೋಷದಿಂದಿರಲು ನೀವೇ ಸ್ವತಃ ಕೆಲವು ಕ್ರಮಗಳನ್ನು ಕೈಗೊಳ್ಳಲಿದ್ದೀರಿ.
ಕರ್ಕಾಟಕ ರಾಶಿ: ವಾಹನ ಚಾಲನೆಯಲ್ಲಿ ತೀವ್ರ ಜಾಗರೂಕತೆ ಅಗತ್ಯ, ಬಿದ್ದು ಪೆಟ್ಟು ಮಾಡಿಕೊಳ್ಳುವ ಸಂಭವವಿದೆ. ನಿಮ್ಮ ನಿಗೂಢ ನಡವಳಿಕೆಯನ್ನು ಅರ್ಥೈಸಿಕೊಳ್ಳಲು ಜನರಿಗೆ ಕಷ್ಟವಾಗಬಹುದು. ನಿಮ್ಮ ಮಾತು ಮತ್ತು ಯೋಜನೆಗಳಲ್ಲಿ ಸ್ಪಷ್ಟತೆ ಇರಲಿ. ಒಂಟಿಯಾಗಿ ಕೆಲಸ ಮಾಡಲು ಹಿಂಜರಿಕೆ ಉಂಟಾಗಲಿದ್ದು, ಸುತ್ತಲಿನ ವಾತಾವರಣ ಬಂಧನದಂತೆ ಭಾಸವಾಗಬಹುದು. ಪ್ರೀತಿಯ ವಸ್ತುವೊಂದು ಹಾಳಾಗುವ ಸಾಧ್ಯತೆ ಇದೆ.
ಸಿಂಹ ರಾಶಿ: ಯಾರೊಂದಿಗೂ ಚರ್ಚಿಸದೆ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಂಡರೆ ಒಂಟಿಯಾಗಬೇಕಾದೀತು. ನಿಮ್ಮ ಮಾತು ಇತರರಿಗೆ ಪ್ರೇರಣೆಯಾಗಬಹುದಾದರೂ, ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯುವುದು ಮುಖ್ಯ. ಕೋಪದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂಬ ಸತ್ಯ ಇಂದು ಅರಿವಾಗಲಿದೆ. ಅತಿಯಾದ ಪ್ರಯಾಣದಿಂದ ಆಯಾಸ ಕಾಡಬಹುದು. ಏಕಾಂಗಿಯಾಗಿ ಸವಾಲುಗಳನ್ನು ಎದುರಿಸುವುದು ಕಷ್ಟವೆನಿಸಲಿದೆ.
ಕನ್ಯಾ ರಾಶಿ: ನಿಮ್ಮ ಜೀವನದಲ್ಲಿ ನಿಜವಾಗಿಯೂ ಪ್ರಮುಖರು ಯಾರು ಎಂಬ ಸ್ಪಷ್ಟ ಚಿತ್ರಣ ಇಂದು ಸಿಗಲಿದೆ. ನಿಮ್ಮ ಪೂರ್ವಾಲೋಚಿತ ಲೆಕ್ಕಾಚಾರಗಳು ಬುಡಮೇಲಾಗಬಹುದು. ಅನಿವಾರ್ಯ ಕಾರಣಗಳಿಂದ ದೂರದ ಪ್ರಯಾಣಗಳು ಮುಂದೂಡಲ್ಪಡಬಹುದು. ಹಣಕಾಸಿನ ವಿಚಾರದಲ್ಲಿ ನಿಮ್ಮ ಮೇಲೆ ಇಲ್ಲದ ಅಪವಾದಗಳು ಬರುವ ಸಾಧ್ಯತೆ ಇದೆ. ಯಾರೋ ಪರೋಕ್ಷವಾಗಿ ನಿಮ್ಮನ್ನು ನಿಂದಿಸುವುದರಿಂದ ಮನಸ್ಸಿನ ಶಾಂತಿ ಕದಡಬಹುದು.
ತುಲಾ ರಾಶಿ: ನಿಮ್ಮ ಕೆಲವು ನಡವಳಿಕೆಗಳಿಂದ ಪೋಷಕರು ಬೇಸರಪಟ್ಟುಕೊಳ್ಳುವ ಸಾಧ್ಯತೆ ಇದೆ. ಒದಗಿ ಬರುವ ವಿವಾಹ ಯೋಗವನ್ನು ನಿರ್ಲಕ್ಷಿಸಬೇಡಿ. ಮಕ್ಕಳಿಂದ ಇಂದು ನಿಮಗೆ ಸಂತೋಷ ಸಿಗಲಿದೆ. ಹೊಸ ಕೌಶಲ ಕಲಿಯುವ ಕಡೆಗೆ ನಿಮ್ಮ ಗಮನ ಹೆಚ್ಚಾಗಲಿದೆ. ಬಂಧುಗಳ ವಿಯೋಗದಿಂದ ಮನಸ್ಸಿಗೆ ಭಾರವೆನಿಸಬಹುದು. ವಿದ್ಯಾರ್ಥಿಗಳಲ್ಲಿ ಸೋಮಾರಿತನ ಹೆಚ್ಚಾಗಲಿದ್ದು, ಸಂಗಾತಿಯೊಂದಿಗೆ ಸುಖ-ದುಃಖಗಳನ್ನು ಹಂಚಿಕೊಳ್ಳುವುದರಿಂದ ನೆಮ್ಮದಿ ಸಿಗಲಿದೆ.
ವೃಶ್ಚಿಕ ರಾಶಿ: ನಿಮ್ಮ ಪ್ರಾಮಾಣಿಕ ಪ್ರಯತ್ನವನ್ನು ಮುಂದುವರಿಸಿ, ಇಂದು ಆರ್ಥಿಕವಾಗಿ ಸಬಲರಾಗುವಿರಿ. ಆದರೆ ಕೆಲಸ ಕಾರ್ಯಗಳಲ್ಲಿ ಕೆಲವು ವಿಘ್ನಗಳು ಎದುರಾಗಬಹುದು. ವಿದೇಶಕ್ಕೆ ಹೋಗುವ ನಿಮ್ಮ ದೀರ್ಘಕಾಲದ ಕನಸು ನನಸಾಗುವ ಸಾಧ್ಯತೆ ಇದೆ. ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಅವರ ಅಭಿಪ್ರಾಯಕ್ಕೂ ಮನ್ನಣೆ ನೀಡಿ. ಹಿತಶತ್ರುಗಳ ಪಿತೂರಿಯಿಂದಾಗಿ ಕೆಲಸಗಳು ವಿಳಂಬವಾಗಬಹುದು ಮತ್ತು ಮೋಸ ಹೋಗುವ ಸಾಧ್ಯತೆ ಇರುವುದರಿಂದ ಎಚ್ಚರವಿರಲಿ.
ಧನು ರಾಶಿ: ಅನಗತ್ಯ ವಸ್ತುಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳುವುದನ್ನು ಬಿಟ್ಟುಬಿಡಿ. ನಿಮ್ಮ ಸುತ್ತಮುತ್ತಲೇ ಇರುವ ಹೊಟ್ಟೆಕಿಚ್ಚು ಪಡುವ ಜನರಿಂದ ದೂರವಿರಿ. ಚರಾಸ್ತಿಯ ವಿಚಾರವಾಗಿ ಮನೆಯಲ್ಲಿ ಚರ್ಚೆಗಳು ನಡೆಯಲಿವೆ. ಆಲಸ್ಯದಿಂದಾಗಿ ವಿಶ್ರಾಂತಿ ಪಡೆಯಲು ಬಯಸುವಿರಿ. ಸಂಗಾತಿಯೊಂದಿಗಿನ ಮುನಿಸನ್ನು ಕಡಿಮೆ ಮಾಡಿಕೊಳ್ಳಿ. ಪ್ರೇಮ ವ್ಯವಹಾರಗಳಿಗಾಗಿ ಇಂದು ಹೆಚ್ಚಿನ ಖರ್ಚು ಮಾಡಬೇಕಾಗಿ ಬರಬಹುದು.
ಮಕರ ರಾಶಿ: ಸರ್ಕಾರಿ ಕೆಲಸಗಳು ಅತ್ಯಂತ ನಿಧಾನಗತಿಯಲ್ಲಿ ಸಾಗಲಿವೆ. ಕೇವಲ ಮಾತಿನಿಂದಲೇ ಎಲ್ಲವನ್ನೂ ಬಗೆಹರಿಸಬಹುದು ಎಂಬ ಭ್ರಮೆಯಿಂದ ಹೊರಬನ್ನಿ. ಆರ್ಥಿಕ ಅಭಾವದಿಂದಾಗಿ ಗೃಹ ನಿರ್ಮಾಣ ಕಾರ್ಯಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಬಹುದು. ನಿರುದ್ಯೋಗಿಗಳಿಗೆ ಪರಿಚಿತರಿಂದ ತಾತ್ಕಾಲಿಕ ಉದ್ಯೋಗದ ಆಫರ್ ಸಿಗಲಿದೆ. ಮಾತಿನ ಮೇಲೆ ಹಿಡಿತವಿರಲಿ, ಆತುರದ ನಿರ್ಧಾರಗಳನ್ನು ಕೈಗೊಂಡು ಆಮೇಲೆ ಪಶ್ಚಾತ್ತಾಪ ಪಡಬೇಡಿ.
ಕುಂಭ ರಾಶಿ: ಯಾರೊಂದಿಗೂ ನಿಮ್ಮ ಸಂಪೂರ್ಣ ವೈಯಕ್ತಿಕ ನಿಜಗಳನ್ನು ಹಂಚಿಕೊಳ್ಳಬೇಡಿ. ಪ್ರಮುಖ ಕೆಲಸಗಳಿಗಾಗಿ ಕುಟುಂಬದವರ ಸಹಾಯವನ್ನು ಕೋರಬೇಕಾಗಬಹುದು. ನಿಮ್ಮ ಅತಿಯಾದ ಶಿಸ್ತಿನ ವರ್ತನೆ ಇತರರಿಗೆ ಬೇಸರ ತರಿಸಬಹುದು. ದೂರದ ಬಂಧುಗಳ ಭೇಟಿಯಾಗಲಿದೆ. ಎಷ್ಟೇ ಒತ್ತಡಗಳಿದ್ದರೂ ನಿಮ್ಮ ಕೆಲಸಗಳನ್ನು ಯಶಸ್ವಿಯಾಗಿ ಮುಗಿಸುವಿರಿ. ದಾಂಪತ್ಯದಲ್ಲಿ ಸಣ್ಣಪುಟ್ಟ ಕಲಹಗಳಿದ್ದರೂ ನೆಮ್ಮದಿ ಇರಲಿದೆ. ಕಳೆದುಕೊಂಡ ವಸ್ತು ಮರಳಿ ಸಿಗುವ ಯೋಗವಿದೆ.
ಮೀನ ರಾಶಿ: ಇಂದು ಯಾವುದೇ ಆಲೋಚನೆ ಇಲ್ಲದೆ ಸಾಹಸ ಕಾರ್ಯಗಳಿಗೆ ಕೈಹಾಕಬೇಡಿ. ಉದ್ಯೋಗದ ನಿಮಿತ್ತ ದೂರದ ಪ್ರಯಾಣ ಅನಿವಾರ್ಯವಾಗಬಹುದು. ಸಂತಾನದ ಶುಭ ವಾರ್ತೆಯಿಂದ ಮನೆಯಲ್ಲಿ ಸಂತಸದ ವಾತಾವರಣ ನೆಲೆಸಲಿದೆ. ಯೋಜಿತ ಕಾರ್ಯಗಳನ್ನು ಹಂತಹಂತವಾಗಿ ಪೂರ್ಣಗೊಳಿಸಿ. ಭವಿಷ್ಯದ ಬಗ್ಗೆ ಅತಿಯಾಗಿ ಯೋಚಿಸಿ ಆತಂಕ ಪಡದೆ, ಇಂದಿನ ದಿನವನ್ನು ಸಕಾರಾತ್ಮಕವಾಗಿ ಸ್ವೀಕರಿಸಿ.
Highcourt Order ಶಾಲಾ ಬಸ್ನಲ್ಲಿ ಮಗು ಪೋಷಕರ ಕೈಸೇರುವವರೆಗೂ ಶಾಲೆಯದ್ದೇ ಜವಾಬ್ದಾರಿ: ಹೈಕೋರ್ಟ್ ಆದೇಶ