newsics.com| ನ್ಯೂಸಿಕ್ಸ್
ಅಯೋಧ್ಯೆಯ ರಾಮ ಮಂದಿರದಲ್ಲಿ ದೇಣಿಗೆ ದುರುಪಯೋಗದಲ್ಲಿ ಭಾಗಿಯಾಗಿರುವವರು ಕ್ಯಾನ್ಸರ್ನಿಂದ ಬಳಲಿ, ನೋವಿನಿಂದಲೇ ಸಾಯುತ್ತಾರೆ ಎಂದು ಬಿಜೆಪಿ ಶಾಸಕರೊಬ್ಬರು ಹೇಳಿರುವ ಹೇಳಿಕೆ ವೈರಲ್ ಆಗಿದೆ.
ಉನ್ನಾವೋ ಜಿಲ್ಲೆಯ ಪೂರ್ವಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಅನಿಲ್ ಸಿಂಗ್ ಭಾನುವಾರ ಮೌರವಾನ್ನಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದ್ದಾರೆ.
‘ರಾಮನ ದೇವಸ್ಥಾನದಿಂದ ಕಳ್ಳತನ ಮಾಡಿದವರಿಗೆ ನೇರವಾಗಿ ಕ್ಯಾನ್ಸರ್ ಬರುತ್ತದೆ. ಅದು ದೇವರಿಂದ ಮರಣದಂಡನೆಯಾಗುತ್ತದೆ. ಒಂದು ವರ್ಷ ಕಾಯಿರಿ, ಅವರಿಗೆ ಕ್ಯಾನ್ಸರ್ ಬರುತ್ತದೆ’ ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಸರ್ಕಾರವು ಹೊಣೆಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತದೆ. ಆದರೆ, ‘ರಾಮನು ಅವರನ್ನು ನೋವಿನಿಂದ ಸಾಯುವ ರೀತಿಯಲ್ಲಿ ಶಿಕ್ಷಿಸುತ್ತಾನೆ ಮತ್ತು ಅವರ ಮುಂದಿನ ಏಳು ತಲೆಮಾರುಗಳು ದೇವಾಲಯದಿಂದ ಕಳ್ಳತನದ ಪರಿಣಾಮಗಳನ್ನು ನೆನಪಿಸಿಕೊಳ್ಳುತ್ತವೆ’ ಎಂದು ಅವರು ಹೇಳಿದ್ದಾರೆ.