newsics.com | ನ್ಯೂಸಿಕ್ಸ್
ನವದೆಹಲಿ: E20 ಇಂಧನ ಸೇರಿದಂತೆ ಎಥೆನಾಲ್-ಮಿಶ್ರಿತ ಪೆಟ್ರೋಲ್ (EBP) ಬಳಕೆಯು ವಾಹನಗಳಿಗೆ ಸುರಕ್ಷಿತವಾಗಿದೆ ಮತ್ತು ಮೋಟಾರು ವಿಮಾ ಹಕ್ಕುಗಳ ಸಿಂಧುತ್ವದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟವಾಗಿ ಹೇಳಿದೆ.
ವಾಹನ ಕಾರ್ಯಕ್ಷಮತೆ ಮತ್ತು ಸುರಕ್ಷತೆಯ ಮೇಲೆ ಎಥೆನಾಲ್-ಮಿಶ್ರಿತ ಇಂಧನಗಳ ಪ್ರಭಾವದ ಬಗ್ಗೆ, ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ಕಳವಳಗಳು ಮತ್ತು ತಪ್ಪು ಮಾಹಿತಿಯ ಮಧ್ಯೆ, ಕೇಂದ್ರ ಸರ್ಕಾರದಿಂದ ಈ ಹೇಳಿಕೆ ಬಂದಿದೆ. ಅಲ್ಲದೇ ವಿಮೆ ಅಥವಾ ವಾಹನ ಸುರಕ್ಷತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಭರವಸೆ ನೀಡಿದೆ.
“ಎಥೆನಾಲ್ ಮಿಶ್ರಣವು ಜಾಗತಿಕವಾಗಿ ಅಂಗೀಕರಿಸಲ್ಪಟ್ಟ ಅಭ್ಯಾಸವಾಗಿದ್ದು, ಇದನ್ನು ಈಗಾಗಲೇ ಅಮೆರಿಕ, ಬ್ರೆಜಿಲ್ ಮತ್ತು ಜಪಾನ್ನಂತಹ ದೇಶಗಳಲ್ಲಿ ಜಾರಿಗೆ ತರಲಾಗಿದೆ. ಭಾರತದಲ್ಲಿ ಎಥೆನಾಲ್ ಬಳಕೆ ಸಾಕಷ್ಟು ಅನುಕೂಲಗಳನ್ನು ಮಾಡಿಕೊಡಲಿದೆ. ಎಥೆನಾಲ್-ಮಿಶ್ರಿತ ಪೆಟ್ರೋಲ್ ಬಳಸುವುದರಿಂದ ವಿಮಾ ರಕ್ಷಣೆ ಅಥವಾ ಹಕ್ಕುಗಳನ್ನು ಅಮಾನ್ಯಗೊಳಿಸುವುದಿಲ್ಲ” ಎಂದು ಕೇಂದ್ರವು ವಾಹನ ಮಾಲೀಕರಿಗೆ ತಿಳಿಸಿದೆ.
E20 ಪೆಟ್ರೋಲ್ ಬಿಡುಗಡೆಯಾದಾಗಿನಿಂದ, ಎಂಜಿನ್ ವೈಫಲ್ಯ ಅಥವಾ ಎಥೆನಾಲ್ ಮಿಶ್ರಣಕ್ಕೆ ಸಂಬಂಧಿಸಿದ ವಾಹನ ಸ್ಥಗಿತಗಳ ಬಗ್ಗೆ ಯಾವುದೇ ವ್ಯಾಪಕ ವರದಿಗಳು ಬಂದಿಲ್ಲ. ವಾಹನ ತಯಾರಕರು, ತೈಲ ಮಾರುಕಟ್ಟೆ ಕಂಪನಿಗಳು ಮತ್ತು ಪರೀಕ್ಷಾ ಏಜೆನ್ಸಿಗಳ ಸಹಯೋಗದೊಂದಿಗೆ, ವಾಹನ ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ” ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಕಬ್ಬಿನ ರಸವನ್ನು ನೇರವಾಗಿ ಪೆಟ್ರೋಲ್ನೊಂದಿಗೆ ಬೆರೆಸಲಾಗುತ್ತದೆ ಎಂದು ಸೂಚಿಸುವ ತಪ್ಪುದಾರಿಗೆಳೆಯುವ ಪ್ರಯತ್ನದ ವಿರುದ್ಧ ಪೆಟ್ರೋಲಿಯಂ ಸಚಿವಾಲಯ ಎಚ್ಚರಿಕೆ ನೀಡಿದೆ. ಇಂಧನದಲ್ಲಿ ಬಳಸುವ ಎಥೆನಾಲ್ನ್ನು ಹುದುಗುವಿಕೆ ಮತ್ತು ಬಟ್ಟಿ ಇಳಿಸುವಿಕೆ ಸೇರಿದಂತೆ ಸುಸ್ಥಾಪಿತ ಕೈಗಾರಿಕಾ ಪ್ರಕ್ರಿಯೆಗಳ ಮೂಲಕ ಉತ್ಪಾದಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ. ಮಿಶ್ರಣ ಮಾಡುವ ಮೊದಲು ಅದು ಕಟ್ಟುನಿಟ್ಟಾದ ಗುಣಮಟ್ಟದ ಮಾನದಂಡಗಳನ್ನು ಪೂರೈಸುತ್ತದೆ ಎಂದು ಖಚಿತಪಡಿಸುತ್ತದೆ.
“ಕಬ್ಬಿನ ರಸ, ಮೊಲಾಸಸ್, ಮೆಕ್ಕೆಜೋಳ ಮತ್ತು ಮುರಿದ ಅಕ್ಕಿಯಂತಹ ಆಹಾರ ಪದಾರ್ಥಗಳಿಂದ ಎಥನಾಲ್ನ್ನು ಪಡೆಯಲಾಗುತ್ತದೆ. ಆದರೆ ಅದರ ಅಂತಿಮ ಗುಣಲಕ್ಷಣಗಳು ಅದನ್ನು ಸಂಸ್ಕರಿಸುವ ಪ್ರಕ್ರಿಯೆಯಿಂದಾಗಿ ಗಮನಾರ್ಹವಾಗಿ ಭಿನ್ನವಾಗಿವೆ” ಎಂದು ಪಟ್ರೋಲಿಯಂ ಸಚಿವಾಲಯ ಹೇಳಿದೆ.
ವಾಹನದ ಇಂಧನ ಕ್ಯಾಪ್ ಬಳಿ ಇರುವೆಗಳನ್ನು ತೋರಿಸುವ ವೈರಲ್ ವೀಡಿಯೊವನ್ನು ಉದ್ದೇಶಿಸಿ ಮಾತನಾಡಿದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್), ಇಂಧನ-ದರ್ಜೆಯ ಎಥೆನಾಲ್ ಉಳಿದ ಸಕ್ಕರೆ ಅಂಶವನ್ನು ಹೊಂದಿರುವುದಿಲ್ಲ ಎಂದು ವಿವರಿಸಿದೆ. ಹೆಚ್ಚುವರಿಯಾಗಿ, ಕೀಟಗಳನ್ನು ಹಿಮ್ಮೆಟ್ಟಿಸುವ ಡಿನಾಚುರಂಟ್ಗಳೊಂದಿಗೆ ಎಥನಾಲ್ನ್ನು ಬೆರೆಸಲಾಗುತ್ತದೆ. ಇದು ಅಂತಹ ಯಾವುದೇ ಸುಳ್ಳು ಪ್ರತಿಪಾದನೆಗಳನ್ನು ವೈಜ್ಞಾನಿಕವಾಗಿ ತಿರಸ್ಕರಿಸುತ್ತದೆ.
ಎಥೆನಾಲ್ ಮಿಶ್ರಣ ಪ್ರಯೋಜನಗಳು:
ಭಾರತವು ಕಚ್ಚಾ ತೈಲ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವಲ್ಲಿ ಎಥೆನಾಲ್ ಮಿಶ್ರಣ ಕಾರ್ಯಕ್ರಮ (EBP) ಮಹತ್ವದ ಪಾತ್ರವಹಿಸಿದೆ, ಇದು 1.4 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ವಿದೇಶಿ ವಿನಿಮಯವನ್ನು ಉಳಿಸಲು ಸಹಾಯ ಮಾಡಿದೆ. ಇದು ಕೃಷಿ ಕಚ್ಚಾ ವಸ್ತುಗಳಿಗೆ ನಿರಂತರ ಬೇಡಿಕೆಯನ್ನು ಸೃಷ್ಟಿಸಿದೆ.
ಎಥೆನಾಲ್ ಬಳಕೆ ರೈತರ ಕೃಷಿ ಚಟುವಟಿಕೆಳಿಗೆ ಬೆಂಬಲ ನೀಡುತ್ತದೆ. ಇದು ಗ್ರಾಮೀಣ ಭಾಗದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡಿದೆ. ಪರಿಸರ ದೃಷ್ಟಿಕೋನದಿಂದ, ಎಥೆನಾಲ್ ಮಿಶ್ರಣವು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ ಸ್ವಚ್ಛ ಚಲನಶೀಲತೆ ಪರಿಹಾರಗಳತ್ತ ಭಾರತದ ಪರಿವರ್ತನೆಯನ್ನು ಬೆಂಬಲಿಸುತ್ತದೆ.
ಹಿಂಡಾಲ್ಕೋ ಕಾರ್ಮಿಕ ಆತ್ಮಹತ್ಯೆ: ಜನರಿಂದ ಕಲ್ಲು ತೂರಾಟ, ಬೆಳಗಾವಿ ಉದ್ವಿಗ್ನ
ಹಾವು ಕಚ್ಚಿ ಆರನೇ ತರಗತಿ ವಿದ್ಯಾರ್ಥಿ ಸಾವು, ಸಹೋದರಿ ಆಸ್ಪತ್ರೆಗೆ ದಾಖಲು
ಆಟೋ ಚಾಲಕನ AI ಜ್ಞಾನಕ್ಕೆ ನೆಟ್ಟಿಗರು ಫಿದಾ; ಬೆಂಗಳೂರಿನ ಟೆಕ್ ಪ್ರೇರಣೆಯ ಕಥೆ ವೈರಲ್