Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ >  ಜೂ.3ಕ್ಕೂ ನೈಋತ್ಯ ಮಾನ್ಸೂನ್‌ ಕೇರಳ ಪ್ರವೇಶ ಅನುಮಾನ
ಪ್ರಮುಖ

 ಜೂ.3ಕ್ಕೂ ನೈಋತ್ಯ ಮಾನ್ಸೂನ್‌ ಕೇರಳ ಪ್ರವೇಶ ಅನುಮಾನ

Share
2 Min Read
SHARE

newsics.com/ನ್ಯೂಸಿಕ್ಸ್

ಪ್ರತಿವರ್ಷವೂ ನೈಋತ್ಯ ಮಾನ್ಸೂನ್‌ ಜೂ.1ಕ್ಕೆಲ್ಲ ಕೇರಳ ಕರಾವಳಿ ಪ್ರವೇಶ ಮಾಡಿ, ಅಲ್ಲಿ ವಿಪರೀತ ಗಾಳಿ-ಮಳೆಯನ್ನ ಉಂಟು ಮಾಡುತ್ತದೆ. ಭೂಕುಸಿತಕ್ಕೂ ಕಾರಣವಾಗುತ್ತದೆ. ನಂತರ ಉತ್ತರದ ಕಡೆಗೆ ಚಲಿಸುತ್ತದೆ. ಜೂನ್‌ ಆಂತ್ಯದಿಂಧ ಜುಲೈ ಆರಂಭದ ಸಮಯದಲ್ಲಿ ಇಡೀ ದೇಶಕ್ಕೆ ಮುಂಗಾರು ಮಳೆ ಆವರಿಸಿಕೊಳ್ಳುತ್ತದೆ.

ನೈಋತ್ಯ ಮುಂಗಾರು ಇಷ್ಟೊತ್ತಿಗೆ ಕೇರಳಕ್ಕೆ ಪ್ರವೇಶಿಸಬೇಕಿತ್ತು. ಪ್ರತಿವರ್ಷವೂ ಜೂ.1ಕ್ಕೆಲ್ಲ ಮಾನ್ಸೂನ್‌ ಆಗಮನ ಆಗುತ್ತದೆ. ಕಳೆದ ಬಾರಿ ಮುಂಚಿತವಾಗಿಯೇ ಆಗುತ್ತಿತ್ತು. ಈ ಸಲವೂ ಮೇ 26ರ ಹೊತ್ತಿಗೆ ಮುಂಗಾರು ಪ್ರವೇಶ ಆಗಲಿದೆ ಎಂದು ಮೊದಲು IMD ಹೇಳಿತ್ತು. ಆದರೆ..ಅದಾಗಲಿಲ್ಲ. ನಂತರ ಜೂನ್‌ 1ಕ್ಕೆ ಪ್ರವೇಶ ಎನ್ನಲಾಯಿತು. ಆದರೆ ನಂತರ ಬಂದ ಮುನ್ಸೂಚನೆ ಪ್ರಕಾರ, ಈ ಸಲ ನೈಋತ್ಯ ಮಾನ್ಸೂನ್‌ ಜೂ.3-4ಕ್ಕೆ ಕೇರಳಕ್ಕೆ ಪ್ರವೇಶ ಆಗಲಿದೆ. ಅದಕ್ಕೂ ಮೊದಲು ಮಾನ್ಸೂನ್‌‌ ಪ್ರಭಾವ ಇಲ್ಲ ಎಂದು ಹೇಳಲಾಗಿತ್ತು. ಆದರೆ ಜೂ.3ರ ಹೊತ್ತಿಗೂ ಮುಂಗಾರು ಪ್ರವೇಶ ಆಗುವುದು ಅನುಮಾನವಿದ್ದಂತೆ ಇದೆ. ಮುಂಗಾರು ಪ್ರವೇಶದ ನಿಖರ ದಿನಾಂಕವನ್ನ ಹೇಳಲು ಸಾಧ್ಯವಾಗುತ್ತಿಲ್ಲ.

ಪ್ರತಿವರ್ಷವೂ ನೈಋತ್ಯ ಮಾನ್ಸೂನ್‌ ಜೂ.1ಕ್ಕೆಲ್ಲ ಕೇರಳ ಕರಾವಳಿ ಪ್ರವೇಶ ಮಾಡಿ, ಅಲ್ಲಿ ವಿಪರೀತ ಗಾಳಿ-ಮಳೆಯನ್ನ ಉಂಟು ಮಾಡುತ್ತದೆ. ಭೂಕುಸಿತಕ್ಕೂ ಕಾರಣವಾಗುತ್ತದೆ. ನಂತರ ಉತ್ತರದ ಕಡೆಗೆ ಚಲಿಸುತ್ತದೆ. ಜೂನ್‌ ಆಂತ್ಯದಿಂಧ ಜುಲೈ ಆರಂಭದ ಸಮಯದಲ್ಲಿ ಇಡೀ ದೇಶಕ್ಕೆ ಮುಂಗಾರು ಮಳೆ ಆವರಿಸಿಕೊಳ್ಳುತ್ತದೆ. ಭಾರತದಲ್ಲಿ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ನೈಋತ್ಯ ಮಾನ್ಸೂನ್‌ ಮಳೆಗಾಲ. ಇಡೀ ದೇಶವು ತನ್ನ ಒಟ್ಟಾರೆ ಮಳೆಯ ಶೇ.75ರಷ್ಟನ್ನು ಇದೇ ಮಾನ್ಸೂನ್‌ನಿಂದ ಪಡೆಯುತ್ತದೆ.

ಇನ್ನು ಕೇರಳಕ್ಕೆ ಮಾನ್ಸೂನ್‌ ಆಗಮಿಸಿತು ಎಂದು ಗೊತ್ತಾಗಲು ವಾತಾವರಣದಲ್ಲಿ ಮೂರು ಸ್ಥಿತಿಗಳು ಒಂದೇಸಲಕ್ಕೆ ಉಂಟಾಗಬೇಕು. ಕೇರಳದಾದ್ಯಂತ ಗೊತ್ತುಪಡಿಸಿದ ಹವಾಮಾನ ಕೇಂದ್ರಗಳಲ್ಲಿ ಕನಿಷ್ಠ ಶೇ.60ರಷ್ಟು ಮಳೆಯಾಗಬೇಕು..ಅರೇಬಿಯನ್ ಸಮುದ್ರದ ಮೇಲೆ ಒಂದು ನಿರ್ದಿಷ್ಟ ವೇಗದ ಪಶ್ಚಿಮ ಮಾರುತಗಳು ಮತ್ತು ಉಪಗ್ರಹದಿಂದ ಪತ್ತೆಯಾದ ಸಾಕಷ್ಟು ಮೋಡದ ಹೊದಿಕೆ ಕಂಡುಬರಬೇಕು. ಹೀಗಾದಾಗ ಮಾನ್ಸೂನ್‌ ಕಾಲಿಟ್ಟಿದೆ ಎಂದು ಅರ್ಥೈಸಿಕೊಳ್ಳಲಾಗುತ್ತಿದೆ. ಆದರೆ ಸದ್ಯದ ಮಟ್ಟಿಗೆ ಪಶ್ಚಿಮ ಮಾರುತಗಳದ್ದೇ ಸಮಸ್ಯೆ ಕಾಣಿಸುತ್ತಿದೆ. ಕೇರಳದ ಕರಾವಳಿ ತೀರದ ಮೇಲಿನ ಗಾಳಿಗಳು ತುಂಬ ದುರ್ಬಲವಾಗಿವೆ. ಮುಂಗಾರು ಮಳೆಯನ್ನ ತರುವಷ್ಟು ಸಮರ್ಥವಾಗಿಲ್ಲ. ಹಾಗಿದ್ದಾಗ್ಯೂ ತೇವಾಂಶವನ್ನ ಒಳಗೊಂಡಿದ್ದು, ಕೇರಳದಲ್ಲಿ ಅಲ್ಲಲ್ಲಿ ಮಳೆ ತರುತ್ತಿವೆ. ಲಕ್ಷದ್ವೀಪದಲ್ಲೂ ಚದುರಿದ ಮಳೆಯಾಗುತ್ತಿದೆ. ಆದರೆ ಇದನ್ನ ಅಧಿಕೃತವಾಗಿ ಮುಂಗಾರು ಆರಂಭ ಎಂದು ಘೋಷಿಸಲು ಸಾಧ್ಯವಿಲ್ಲ.

ಮುಂಗಾರು ಪ್ರವೇಶಿಸಬೇಕಾದ ಈ ಸಮಯದಲ್ಲಿಯೇ ಬಂಗಾಳಕೊಲ್ಲಿಯಲ್ಲಿ ರೂಪುಗೊಂಡ ಚಂಡಮಾರುತವು ಪರಿಸ್ಥಿತಿಯನ್ನ ಇನ್ನಷ್ಟು ಹದಗೆಡಿಸಿದೆ. ಮಾನ್ಸೂನ್‌ನ್ನ ದೇಶದ ಒಳಭಾಗಕ್ಕೆ ತಳ್ಳಬೇಕಾದ ಸಂಘಟಿತ ಗಾಳಿಯ ಹರಿವನ್ನ ಈ ಚಂಡಮಾರುತಗಳು ತಡೆದು, ದುರ್ಬಲಗೊಳಿಸುತ್ತವೆ. ಹಾಗಿದ್ದಾಗ್ಯೂ ಇಂದಿನಿಂದ ಗಾಳಿಯ ವೇಗ ಇನ್ನಷ್ಟು ಬಲಗೊಳ್ಳಲಿದೆ ಎಂಬುದು IMDಯ ನಿರೀಕ್ಷೆಯಾಗಿದೆ. ಆದರೆ, ಮುಂಗಾರು ಪ್ರವೇಶದ ದಿನಾಂಕವನ್ನ ನಿಖರವಾಗಿ ಹೇಳುವುದು ಅಸಾಧ್ಯ ಎಂಬಂತಾಗಿದೆ.

ಮುಂಗಾರು ಕೇರಳಕ್ಕೆ ಮೂರ್ನಾಲ್ಕು ದಿನಗಳು ತಡವಾಗಿ ಬಂದರೆ ದೇಶದ ಉಳಿದ ಭಾಗಗಳಿಗೆ ಅಂಥ ತೊಂದರೆಯೇನೂ ಇಲ್ಲ. ಆದರೆ ಜೂ.8ರ ನಂತರವೂ ಪ್ರವೇಶ ಆಗದೆ ಇದ್ದರೆ ಕಷ್ಟವಾಗುತ್ತದೆ. ವಾರದಷ್ಟು ವಿಳಂಬವಾದರೆ ಮಾನ್ಸೂನ್‌ ಮಳೆಯನ್ನ ಅವಲಂಬಿಸಿಕೊಂಡಿರುವ ಬೆಳೆಗಳ ಬಿತ್ತನೆಗೆ ತೀವ್ರ ಹಾನಿಯಾಗುತ್ತದೆ. ಈ ಸಲ ಅಂತೂ ಎಲ್‌ ನಿನೋ ಪ್ರಭಾವದ ಎಚ್ಚರಿಕೆಯನ್ನೂ ನೀಡಲಾಗಿದೆ. ಮುಂಗಾರು ಪ್ರವೇಶವೂ ವಿಳಂಬವಾಗಿ, ಆಮೇಲೆ ಎಲ್‌ ನಿನೋ ಪ್ರಭಾವದ ಕಾರಣಕ್ಕೆ ಮಳೆಯೂ ಕಡಿಮೆಯಾದರೆ ಹವಾಮಾನ ಪರಿಸ್ಥಿತಿ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ.

ಸಿದ್ದರಾಮಯ್ಯ ಪುತ್ರನಿಗೆ ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ

TAGGED:Southwest monsoon likely to enter Kerala on June 3
Share This Article
Facebook Twitter Copy Link Print
Previous Article ಸಿದ್ದರಾಮಯ್ಯ ಪುತ್ರನಿಗೆ ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
Next Article ಜೂನ್ 6ರಂದು ಭಾರತಕ್ಕೆ CJP ಸಂಸ್ಥಾಪಕ ದೀಪ್ಕೆ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?